ಆ್ಯಪ್ನಗರ

ಕಾವೇರಿ ನಿಗಮದ ಎಂಜಿನಿಯರ್‌ ಮನೆ ಮೇಲೆ ಎಸಿಬಿ ದಾಳಿ

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ಅವರ ಮನೆ, ಕಚೇರಿ ಸೇರಿ 3 ಕಡೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

Vijaya Karnataka 18 Aug 2018, 5:00 am
ಮಂಡ್ಯ: ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ಅವರ ಮನೆ, ಕಚೇರಿ ಸೇರಿ 3 ಕಡೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
Vijaya Karnataka Web acb attack on engineer house in cauvery corporation
ಕಾವೇರಿ ನಿಗಮದ ಎಂಜಿನಿಯರ್‌ ಮನೆ ಮೇಲೆ ಎಸಿಬಿ ದಾಳಿ


ಎಸಿಬಿ ಎಸ್ಪಿ ಶೇಖರ್‌ ನಿರ್ದೇಶನದ ಮೇರೆಗೆ ಡಿವೈಎಸ್‌ಪಿಗಳಾದ ಶೈಲೇಂದ್ರ, ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ಬಸವರಾಜೇಗೌಡ ಅವರ ಕೆಆರ್‌ಎಸ್‌ನಲ್ಲಿನ ಕಚೇರಿ, ಕ್ವಾರ್ಟಸ್‌ ಹಾಗೂ ಬೆಂಗಳೂರಿನ ಪಾಪರೆಡ್ಡಿಪಾಳ್ಯದಲ್ಲಿನ ಮನೆ ಮೇಲೆ ಮುಂಜಾನೆಯೇ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ರಾತ್ರಿ 7ರವರೆವಿಗೂ ಅಧಿಕಾರಿಗಳು ಆಸ್ತಿಪತ್ರಗಳು ಹಾಗೂ ಮತ್ತಿತರ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದರು.

ಇನ್ಸ್‌ಪೆಕ್ಟರ್‌ಗಳಾದ ಸತೀಶ್‌, ಕಿರಣ್‌, ವಿನಯ್‌, ಸುರೇಶ್‌ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಅಕ್ರಮ ಹಣ ಗಳಿಕೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಬಸವರಾಜೇಗೌಡ ಅವರ ಮನೆ, ಕಚೇರಿ ಸೇರಿದಂತೆ ಮೂರು ಕಡೆ ದಾಳಿ ನಡೆಸಲಾಗಿದೆ. ಇನ್ನೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಮೈಸೂರಿನಲ್ಲಿ 2 ನಿವೇಶನ, ಹುಟ್ಟೂರು ಮದ್ದೂರು ತಾಲೂಕು ಎಸ್‌.ಐ.ಹಾಗಲಹಳ್ಳಿಯಲ್ಲಿ 4 ಎಕರೆ ಜಮೀನು ಖರೀದಿ ಬಗ್ಗೆ ದಾಖಲೆಗಳು ದೊರೆತಿವೆ. ಇದರ ಹೊರತಾಗಿ ಹೆಚ್ಚೇನು ಹೇಳಲಾಗದು ಎಂದು ಡಿವೈಎಸ್‌ಪಿ ಶೈಲೇಂದ್ರ ಅವರು 'ಧಿವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ