ಆ್ಯಪ್ನಗರ

ಟಿಪ್ಪರ್‌ ಹರಿದು ಬಾಲಕಿ ಸಾವು

ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ತಾಲೂಕಿನ ಬಸ್ತೀಪುರ ಬಳಿ ಟಿಪ್ಪರ್‌ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಈಕೆ ತಂದೆ ಗಾಯಗೊಂಡಿದ್ದಾರೆ...

Vijaya Karnataka 16 Aug 2018, 5:00 am
ಶ್ರೀರಂಗಪಟ್ಟಣ: ತಾಲೂಕಿನ ಬಸ್ತೀಪುರ ಬಳಿ ಟಿಪ್ಪರ್‌ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಈಕೆ ತಂದೆ ಗಾಯಗೊಂಡಿದ್ದಾರೆ.
Vijaya Karnataka Web accident child death near srirangapattana
ಟಿಪ್ಪರ್‌ ಹರಿದು ಬಾಲಕಿ ಸಾವು


ಕೆಆರ್‌ಎಸ್‌ ನಿವಾಸಿ ಮಹೇಶ್‌ ಅವರ ಪುತ್ರಿ ಚೈತ್ರ(14) ಮೃತೆ. ಬಿಇಎಂಎಲ್‌ ರಸ್ತೆಯಲ್ಲಿ ತಂದೆಯೊಂದಿಗೆ ಬುಧವಾರ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ. ಬೈಕ್‌ನಿಂದ ಕೆಳೆಗೆ ಬಿದ್ದ ಚೈತ್ರಳ ಮೇಲೆ ಲಾರಿ ಹರಿದು ಆಕೆ ಸ್ಥಳದಲ್ಲೇ ಅಸುನೀಗಿದಳು. ತಂದೆ ಮಹೇಶ್‌ ಗಂಭೀರ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ