ಆ್ಯಪ್ನಗರ

ಮೃತ ಅಭಿಮಾನಿಗಳ ಕುಟುಂಬದವರಿಗೆ ನೆರವು ನೀಡಿದ ಸುಮಲತಾ, ಅಭಿಷೇಕ್‌

ಮೃತ ಅಭಿಮಾನಿಗಳ ಕುಟುಂಬದವರಿಗೆ ನೆರವು ನೀಡಿದ ಸುಮಲತಾ, ಅಭಿಷೇಕ್‌ ವಿಕ ಸುದ್ದಿಲೋಕ ಮದ್ದೂರು ನಟ ಅಂಬರೀಷ್‌ ನಿಧನದ ಸುದ್ದಿ ತಿಳಿದು ಆತ್ಮಹತ್ಯೆಗೆ ಶರಣಾದ ಅಂಬಿ ಅಭಿಮಾನಿ ...

Vijaya Karnataka 13 Jan 2019, 5:00 am
ಮದ್ದೂರು: ನಟ ಅಂಬರೀಷ್‌ ನಿಧನದ ಸುದ್ದಿ ತಿಳಿದು ಆತ್ಮಹತ್ಯೆಗೆ ಶರಣಾದ ಅಂಬಿ ಅಭಿಮಾನಿ ಕುಟುಂಬದವರಿಗೆ ಸುಮಲತಾ ಅಂಬರೀಷ್‌ ಹಾಗೂ ಅಭಿಷೇಕ್‌ ಸಾಂತ್ವಾನ ಹೇಳಿದರು.
Vijaya Karnataka Web ambarish wife sumalatha and son abhishek help to ambi fans family
ಮೃತ ಅಭಿಮಾನಿಗಳ ಕುಟುಂಬದವರಿಗೆ ನೆರವು ನೀಡಿದ ಸುಮಲತಾ, ಅಭಿಷೇಕ್‌


ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದ ಅಂಬಿ ಅಭಿಮಾನಿ ತಮ್ಮಯ್ಯ ಅಂಬರೀಷ್‌ ನಿಧನದ ಸುದ್ದಿ ತಿಳಿದು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಜತೆಗೆ ಗೊರವನಹಳ್ಳಿಯ ಸುರೇಂದ್ರ ಅಂಬರೀಷ್‌ ಅಂತಿಮ ದರ್ಶನ ಪಡೆದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಅಂಬರೀಷ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌, ನಟ ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಆತ್ಮಹತ್ಯೆ ಮಾಡಿಕೊಂಡ ಅಂಬಿ ಅಭಿಮಾನಿಗಳ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಜತೆಗೆ 30 ಸಾವಿರ ರೂ. ಚೆಕ್‌ ಅನ್ನು ಕುಟುಂಬಸ್ಥರಿಗೆ ವಿತರಿಸಿದರು. ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ದಿ. ರೆಬಲ್‌ಸ್ಟಾರ್‌ ಅಂಬರೀಷ್‌ ಹಾಗೂ ತಮ್ಮಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಮೃತ ತಮ್ಮಯ್ಯ ಪತ್ನಿ ಸುಧಾ ಹಾಗೂ ಪುತ್ರ ಸುನೀಲ್‌ಗೆ ಸಾಂತ್ವನ ಹೇಳುವ ಜತೆಗೆ ಕುಶಲೋಪರಿ ವಿಚಾರಸಿದರು. ಬಳಿಕ ಗೊರವನಹಳ್ಳಿಯ ಮೃತ ಸುರೇಂದ್ರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಶೋಭಾ ಅವರಿಗೂ ಆರ್ಥಿಕ ನೆರವು ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಗಳ ಕುಟುಂಬಸ್ಥರಿಗೆ ದೇವರು ದುಖಃ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು. ಅಂಬರೀಷ್‌ ಸಾವು ದೈವೇಚ್ಚೆಯಾಗಿದ್ದು, ಆದರೆ ಅಭಿಮಾನಿಗಳು ಮೃತಪಟ್ಟಿರುವುದು ಬೇಸರದ ಸಂಗತಿ. ಇದೇ ವೇಳೆ ಅಂಬರೀಷ್‌ ಅವರನ್ನು ನೆನೆದು ಗದ್ಗದಿತರಾದರು.

ಸ್ವಾಗತ: ತಾಲೂಕಿನ ಗಡಿಭಾಗ ನಿಡಘಟ್ಟ ಗ್ರಾಮಕ್ಕೆ ಆಗಮಿಸಿದ ಅಂಬರೀಷ್‌ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್‌ ಅವರನ್ನು ನೂರಾರು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಅಂಬರೀಷ್‌ ಹಾಗೂ ಅಭಿಷೇಕ್‌ಗೌಡ ಪರ ಘೋಷಣೆ ಕೂಗಿದರು. ಅಂಬರೀಷ್‌ ಪುತ್ರ ಅಭಿಷೇಕ್‌ಗೌಡ ಅವರಿಗೆ ಬೃಹತ್‌ ಸೇಬಿನ ಹಾರ ಹಾಕುವ ಮೂಲಕ ಅಭಿಮಾನವನ್ನು ಮೆರೆದರು. ಅಂಬರೀಷ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್‌, ತಾಲೂಕು ಅಧ್ಯಕ್ಷ ನಾಗೇಶ್‌, ಮುಖಂಡರಾದ ಜಿ.ಬಿ. ಬೋರಯ್ಯ, ಸಂತೋಷ್‌, ರಾಮಣ್ಣ, ಶಿವಲಿಂಗಯ್ಯ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ