ಆ್ಯಪ್ನಗರ

ಮತ್ತೆ ಸಕ್ರಿಯ ರಾಜಕಾರಣಕ್ಕೆ ರೆಬೆಲ್‌ ಸ್ಟಾರ್‌ ಅಂಬಿ

ಕೆರಗೋಡಿನಿಂದ ಚುನಾವಣಾ ಪ್ರಚಾರ ಆರಂಭ

Vijaya Karnataka Web 23 Oct 2017, 8:20 pm
ಮಂಡ್ಯ: ಖ್ಯಾತ ಚಲನಚಿತ್ರ ನಟ, ರಾಜಕಾರಣಿ ರೆಬೆಲ್‌ ಸ್ಟಾರ್‌ ಅಂಬರೀಶ್‌ ಈಗ ಮತ್ತೆ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.
Vijaya Karnataka Web ambi starts campaigning in mandya
ಮತ್ತೆ ಸಕ್ರಿಯ ರಾಜಕಾರಣಕ್ಕೆ ರೆಬೆಲ್‌ ಸ್ಟಾರ್‌ ಅಂಬಿ


ಅನಾರೋಗ್ಯ ಕಾರಣದಿಂದ ರಾಜಕಾರಣದಿಂದ ದೂರ ಉಳಿದಿದ್ದ ಅಂಬರೀಶ್‌ ಈಗ ಚುನಾವಣೆ ಸಂದರ್ಭದಲ್ಲಿ ಅಖಾಡಕ್ಕೆ ಇಳಿದಿದ್ದಾರೆ.

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಬಳಿಕ ಅಂಬರೀಶ್‌ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಮ್ಮ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳ ಜೊತೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

ಅಂಬಿ ಆಗಮನದಿಂದ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿದೆ. ತಮ್ಮ ಸ್ವಕ್ಷೇತ್ರದಿಂದಲೇ ಪಕ್ಷ ಸಂಘಟನೆಗೆ ಅಂಬಿ ಚಾಲನೆ ನೀಡಿದ್ದಾರೆ.

ಭಿನ್ನಮತ ಜೋರು

ಈ ನಡುವೆ ಅಂಬಿ ಬಂದು ಹೋದ ನಡುವೆಯೇ ಕೈ ಕಾರ್ಯಕರ್ತರ ಭಿನ್ನಮತ ಭುಗಿಲೆದ್ದಿದೆ.

ಕೈ ಕಾರ್ಯಕರ್ತರಿಂದಲೇ ಕಾಂಗ್ರೆಸ್ ವಿರುದ್ಧ ಘೋಷಣೆ ಮೊಳಗಿದವು. ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಂದಿದ್ದ ಅಂಬಿ ಒಂದೇ ಒಂದು ಮನೆಗೆ ಭೇಟಿ ನೀಡಿ ವಾಪಸ್ಸಾಗಿದ್ದ ಕಾರ್ಯಕರ್ತರು ಉದ್ರಿಕ್ತಗೊಂಡರು. ನಂತರ ಇತರೆ ನಾಯಕರು ಸಮಾಧಾನಪಡಿಸಿದರು. ಮತ್ತೆ ಅಂಬಿ ಬರುತ್ತಾರೆ ಎಂದರು.

ಮಂಡ್ಯ ಸಿಟಿಯಲ್ಲೂ ಅಂಬಿ ಪ್ರಚಾರ ನಡೆಸಿದರು. ಮಂಡ್ಯದ ಮರೀಗೌಡ ಬಡಾವಣೆಯಲ್ಲಿ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿದರು.

Ambi Starts Campaigning in Mandya

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ