ಆ್ಯಪ್ನಗರ

ಅನಂತಕುಮಾರ್‌ ಅಸ್ಥಿ ಕಾವೇರಿಯಲ್ಲಿ ಲೀನ

ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ ಕೇಂದ್ರ ಸಚಿವ ಎಚ್‌.ಎನ್‌ ಅನಂತ್‌ ಕುಮಾರ್‌ ಅಸ್ಥಿಯನ್ನು ಬುಧವಾರ ವಿಸರ್ಜಿಸಲಾಯಿತು.

Vijaya Karnataka 15 Nov 2018, 5:00 am
ಶ್ರೀರಂಗಪಟ್ಟಣ : ಪಟ್ಟಣ ಹೊರವಲಯದಲ್ಲಿರುವ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ ಕೇಂದ್ರ ಸಚಿವ ಎಚ್‌.ಎನ್‌ ಅನಂತ್‌ ಕುಮಾರ್‌ ಅಸ್ಥಿಯನ್ನು ಬುಧವಾರ ವಿಸರ್ಜಿಸಲಾಯಿತು.
Vijaya Karnataka Web ananthakumar urn dispatch in kaveri water
ಅನಂತಕುಮಾರ್‌ ಅಸ್ಥಿ ಕಾವೇರಿಯಲ್ಲಿ ಲೀನ


ಅನಂತ್‌ಕುಮಾರ್‌ ಸಹೋದರ ಎಚ್‌.ಎನ್‌ ನಂದಕುಮಾರ್‌ ಬ್ರಾಹ್ಮಣ ಸಂಪ್ರದಾಯದ ವಿಧಿ, ವಿಧಾನದಂತೆ ಅಸ್ಥಿಯನ್ನು ವಿಸರ್ಜಿಸಿದರು. ಬೆಂಗಳೂರಿನಿಂದ ತಂದಿದ್ದ ಅಸ್ಥಿ ಕುಡಿಕೆಗೆ ಜ್ಯೋತಿಷಿ ಭಾನುಪ್ರಕಾಶ್‌ ನೇತೃತ್ವದಲ್ಲಿ ಪೂಜೆ ಮತ್ತಿತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ನಂದಕುಮಾರ್‌ ಅವರು ನದಿಯಲ್ಲಿ ಅಸ್ಥಿ ಕುಡಿಕೆಯನ್ನು ವಿಸರ್ಜಿಸಿದರು. ಈ ವೇಳೆ ನೆರೆದಿದ್ದ ಬಿಜೆಪಿ ಕಾರ‍್ಯಕರ್ತರು ಹಾಗೂ ಅನಂತ್‌ಕುಮಾರ್‌ ಬೆಂಬಲಿಗರು 'ಅನಂತಕುಮಾರ್‌ ಅಮರ್‌ ರಹೇ' ಎಂದು ಘೋಷಣೆ ಕೂಗಿದರು.

ಸಂಸದರಾದ ಪ್ರಹ್ಲಾದ್‌ ಜೋಷಿ, ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಉದಯ ಗರುಡಾಚಾರ್‌, ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಶ್ರೀಧರ್‌, ಪ್ರಧಾನ ಕಾರ‍್ಯದರ್ಶಿ ಎಸ್‌.ಕೆ ಮಂಜುನಾಥ್‌, ಮುಖಂಡ ಕೆ.ಎಸ್‌. ನಂಜುಂಡೇಗೌಡ ಮತ್ತಿತರರು ಹಾಜರಿದ್ದರು.

ಅಸ್ಥಿ ವಿಸರ್ಜನೆ ನಂತರ ಮಾತನಾಡಿದ ಸಂಸದ ಪ್ರಹ್ಲಾದ್‌ ಜೋಷಿ, ''ಅನಂತಕುಮಾರ್‌ ಮತ್ತು ನಾನು ಚಿಕ್ಕಂದಿನಿಂದ ಒಟ್ಟಿಗೆ ಬೆಳೆದವರು. ಹುಬ್ಬಳ್ಳಿಯಲ್ಲಿ ಅಕ್ಕಪಕ್ಕದಲ್ಲಿಯೇ ನಮ್ಮಿಬ್ಬರ ಮನೆಗಳಿವೆ. 50 ವರ್ಷಗಳಿಂದ ನಮ್ಮ ಮತ್ತು ಅವರ ಕುಟುಂಬಕ್ಕೂ ಸಂಬಂಧ ಇದೆ. ಬಡತನದಲ್ಲಿ ಹುಟ್ಟಿ ಎತ್ತರಕ್ಕೆ ಬೆಳೆದವರು ಅನಂತ್‌. ಕರ್ನಾಟಕ ಹಾಗೂ ದಿಲ್ಲಿಯ ನಡುವೆ ಕೊಂಡಿಯಾಗಿದ್ದ ಅನಂತ್‌ ಅವರನ್ನು ಕಳೆದುಕೊಂಡಿರುವುದು ಅಪಾರ ದುಃಖ ತರಿಸಿದೆ,''ಎಂದು ಹೇಳಿದರು. ಶಾಸಕ ರಾಮದಾಸ್‌, ಮಾತನಾಡುವ ವೇಳೆ ಕಣ್ಣೀರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ