ಆ್ಯಪ್ನಗರ

10 ಲಕ್ಷ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಗಮನ ಬೇರೆಡೆ ಸೆಳೆದು ಸ್ಕೂಟರ್‌ನಲ್ಲಿದ್ದ 10 ಲಕ್ಷ ರೂ. ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು, ನಗದು ವಶಪಡಿಸಿಕೊಂಡಿದ್ದಾರೆ. ಕಳವು ಮಾಡಿದ್ದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಪರಾಲತಿಪ್ಪ ಗ್ರಾಮದ ಜಕ್ರಯ್ಯ ಅಲಿಯಾಸ್‌ ಗೋಡಿಹಟ್ಟಿ ಜಕ್ರಯ್ಯ(38), ತಮಿಳುನಾಡಿನ ಗುಮ್ಮಿಡಿ ಪುಂಡಿ ಟೌನ್‌ನ ಕಿಶೋರ್‌ ಅಲಿಯಾಸ್‌ ಟಿಕ್ಲು (45) ಹಾಗೂ ಪ್ರದೀಪ ಅಲಿಯಾಸ್‌ ಕಾರ್ತಿಕ್‌ ಆರೋಪಿಗಳು.

Vijaya Karnataka 17 Aug 2019, 5:00 am
ಮಂಡ್ಯ: ಗಮನ ಬೇರೆಡೆ ಸೆಳೆದು ಸ್ಕೂಟರ್‌ನಲ್ಲಿದ್ದ 10 ಲಕ್ಷ ರೂ. ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು, ನಗದು ವಶಪಡಿಸಿಕೊಂಡಿದ್ದಾರೆ.
Vijaya Karnataka Web arrest of accused for stealing 10 lakhs
10 ಲಕ್ಷ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ


ಕಳವು ಮಾಡಿದ್ದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಪರಾಲತಿಪ್ಪ ಗ್ರಾಮದ ಜಕ್ರಯ್ಯ ಅಲಿಯಾಸ್‌ ಗೋಡಿಹಟ್ಟಿ ಜಕ್ರಯ್ಯ(38), ತಮಿಳುನಾಡಿನ ಗುಮ್ಮಿಡಿ ಪುಂಡಿ ಟೌನ್‌ನ ಕಿಶೋರ್‌ ಅಲಿಯಾಸ್‌ ಟಿಕ್ಲು (45) ಹಾಗೂ ಪ್ರದೀಪ ಅಲಿಯಾಸ್‌ ಕಾರ್ತಿಕ್‌ ಎಂಬ ಆರೋಪಿಗಳು ಚನ್ನಪಟ್ಟಣದ ಎಸ್‌ಬಿಐ ಬ್ಯಾಂಕ್‌ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಆಗ ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಮಂಡ್ಯದ ಮಾರುತಿ ನಗರದ ನಿವಾಸಿಯಾದ ಸೈಯದ್‌ ಸಮಿ ಉಲ್ಲಾ ಅವರು ಜೂ. 29ರಂದು ಮಂಡ್ಯ ನಗರದ ಕೆ.ಆರ್‌.ರಸ್ತೆಯ ವಿದ್ಯಾನಗರದಲ್ಲಿರುವ ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ 10 ಲಕ್ಷ ರೂ. ಡ್ರಾ ಮಾಡಿಕೊಂಡು ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್‌ನ ಡಿಕ್ಕಿಯಲ್ಲಿ ಇಟ್ಟುಕೊಂಡು ಮನೆಗೆ ತೆರಳುತ್ತಿದ್ದಾಗ ಸ್ಕೂಟರ್‌ ಪಂಕ್ಚರ್‌ ಆಗಿದೆ. ಪಂಕ್ಚರ್‌ ಹಾಕಿಸಲು ಅಶೋಕನಗರದ ನ್ಯಾಷನಲ್‌ ಟೈರ್ಸ್‌ ಅಂಗಡಿಗೆ ಬಂದಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಮೂರ್ನಾಲ್ಕು ಸ್ಕೂಟರ್‌ ಡಿಕ್ಕಿಯಲ್ಲಿದ್ದ 10 ಲಕ್ಷ ರೂ. ಮತ್ತು ಕೆಲ ದಾಖಲಾತಿಗಳನ್ನು ಕಳ್ಳತನ ಮಾಡಿ ತೆರಳಿದ್ದರು ಎಂದು ಸೈಯದ್‌ ಮಂಡ್ಯ ಪೂರ್ವ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈ ಆರೋಪಿಗಳೆಲ್ಲರ ಮೇಲೆ ಹಲವು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿವೆ. ಮಂಡ್ಯದಲ್ಲಿ 10 ಲಕ್ಷ ರೂ. ಕಳ್ಳತನವಾಗಿರುವ ಬಗ್ಗೆಯೂ ತಪ್ಪೊಪ್ಪಿಕೊಂಡಿರುವ ಇವರೆಲ್ಲರೂ ಬೆಂಗಳೂರು ಸಿಟಿಯ ಮಾರತ್‌ಹಳ್ಳಿಯ ಮುನ್ನೇಕೊಪ್ಪಲು ನಗರದ ವಾಸಿಗಳು. ಇವರಿಂದ 6.50 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಪತ್ತೆ ಮಾಡಲು ಶ್ರಮವಹಿಸಿದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರುಶುರಾಮ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ