ಆ್ಯಪ್ನಗರ

ಹುತಾತ್ಮ ಮಂಡ್ಯದ ಯೋಧನಿಗೆ ವಿಶಿಷ್ಟ ರೀತಿಯಲ್ಲಿ ಗೌರವ ನಮನ

ಸಿಆರ್‌ಪಿಎಫ್ ಯೋಧ ಗುರುವಿನ ಸ್ವಗ್ರಾಮ ಗುಡಿಗೆರೆಗೆ ಬೆಳಗ್ಗೆಯೇ ಆಗಮಿಸಿದ ಕಲಾವಿದ ಮದ್ದೂರು ತಾಲೂಕಿನ ತೂಬಿನಕೆರೆಯ ಗೋವಿಂದ ರಾಜು, ಕಾಲೋನಿಯ ವಾಟರ್ ಟ್ಯಾಂಕ್ ಮೇಲೆ ರಾಷ್ಟ್ರ ಧ್ವಜವನ್ನು ಚಿತ್ರಿಸಿ, ಅದರ ಮೇಲೆ ಬರೆದು ವಿಶಿಷ್ಟ ರೀತಿಯಲ್ಲಿ ಅಕ್ಷರ ನಮನ ಸಲ್ಲಿಸಿದರು.

Vijaya Karnataka Web 16 Feb 2019, 4:06 pm
ಮಂಡ್ಯ: ಹುತಾತ್ಮ ಯೋಧ ಮಂಡ್ಯದ ಗುರುವಿಗೆ ಹಲವೆಡೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಗೌರವ ಸಲ್ಲಿಸುತ್ತಿದ್ದು, ಮಂಡ್ಯದಲ್ಲೊಬ್ಬ ಕಲಾವಿದ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದರು.
Vijaya Karnataka Web mandya


ಸಿಆರ್‌ಪಿಎಫ್ ಯೋಧ ಗುರುವಿನ ಸ್ವಗ್ರಾಮ ಗುಡಿಗೆರೆಗೆ ಬೆಳಗ್ಗೆಯೇ ಆಗಮಿಸಿದ ಕಲಾವಿದ ಮದ್ದೂರು ತಾಲೂಕಿನ ತೂಬಿನಕೆರೆಯ ಗೋವಿಂದ ರಾಜು, ಕಾಲೋನಿಯ ವಾಟರ್ ಟ್ಯಾಂಕ್ ಮೇಲೆ ರಾಷ್ಟ್ರ ಧ್ವಜವನ್ನು ಚಿತ್ರಿಸಿ, ಅದರ ಮೇಲೆ ಬರೆದು ವಿಶಿಷ್ಟ ರೀತಿಯಲ್ಲಿ ಅಕ್ಷರ ನಮನ ಸಲ್ಲಿಸಿದರು.

ವಾಟರ್ ಟ್ಯಾಂಕ್ ಮೇಲೆ ಸೈನಿಕರ ಸ್ಮಾರಕದ ಚಿತ್ರ ಬಿಡಿಸಿ, ರಾಷ್ಟ್ರಪ್ರೇಮದ ನುಡಿಗಳನ್ನು ಬರೆದು ಯೋಧರಿಗೆ ಗೌರವ ಸಲ್ಲಿಸುವುದರ ಜತೆಗೆ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹುತಾತ್ಮ ಯೋಧನಿಗೆ ಗೌರವ ಸೂಚಿಸಿದ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಲೇಜಿಗೆ ರಜೆಯೋಧ ಗುರು ಅಧ್ಯಯನ ಮಾಡಿದ ಸರ್ಕಾರಿ ಪ್ರೌಢಶಾಲೆಗೆ ಶನಿವಾರ ರಜೆ ಘೋಷಿಸಲಾಗಿತ್ತು. ಯೋಧನ ಗೌರವಾರ್ಥ ರಜೆ ಘೋಷಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಯೋಧ ಗುರು ಮನೆ ಬಳಿ ಬಂದು ಗೌರವ ಸಲ್ಲಿಸಿ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ