ಆ್ಯಪ್ನಗರ

ಹಲ್ಲೆ ಆರೋಪ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಹಳೇ ವೈಷಮ್ಯದ ಜತೆಗೆ ಜಮೀನಿನ ವಿಚಾರಕ್ಕೆ ಸಂಬಂಧಿಧಿಸಿದಂತೆ ಗ್ರಾಮಸ್ಥರ ಪರವಾಗಿ ನ್ಯಾಯ ಕೇಳಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ರಿಗೆ ಜೆಡಿಎಸ್‌ ಪಕ್ಷ ದ ಹಾಲಿ ಜಿ.ಪಂ. ಸದಸ್ಯ ಚಾಕುವಿನಿಂದ ಇರಿದು ಹಲ್ಲೆ ನಡೆಸಲು ಮುಂದಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬೆಳ್ಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Vijaya Karnataka 24 Jun 2019, 5:00 am
ನಾಗಮಂಗಲ : ಹಳೇ ವೈಷಮ್ಯದ ಜತೆಗೆ ಜಮೀನಿನ ವಿಚಾರಕ್ಕೆ ಸಂಬಂಧಿಧಿಸಿದಂತೆ ಗ್ರಾಮಸ್ಥರ ಪರವಾಗಿ ನ್ಯಾಯ ಕೇಳಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ರಿಗೆ ಜೆಡಿಎಸ್‌ ಪಕ್ಷ ದ ಹಾಲಿ ಜಿ.ಪಂ. ಸದಸ್ಯ ಚಾಕುವಿನಿಂದ ಇರಿದು ಹಲ್ಲೆ ನಡೆಸಲು ಮುಂದಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬೆಳ್ಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
Vijaya Karnataka Web MDY-MDY23NGL2


ಬೆಳ್ಳೂರಿನ ಬಿಜಿಎಸ್‌ ವೃತ್ತದಿಂದ ಪೊಲೀಸ್‌ ಠಾಣೆವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ''ಬೆಳ್ಳೂರು ಸಮೀಪದ ನಾಯಕನಕೊಪ್ಪಲು ಗ್ರಾಮದ ಸರಕಾರಿ ಗೋಮಾಳದ ಜಮೀನಿನ ವಿಚಾರಕ್ಕೆ ಸಂಬಂಧಿಧಿಸಿದಂತೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭ್‌ ಅ.ಪಾಪಣ್ಣ ಗ್ರಾಮಸ್ಥರ ಪರವಾಗಿ ನಿಂತು ಕೆಲ ದಿನಗಳ ಹಿಂದೆ ಜಿ.ಪಂ. ಸದಸ್ಯ ಮುತ್ತಣ್ಣ ಅವರನ್ನು ಪ್ರಶ್ನೆ ಮಾಡಿದ್ದರು. ಇದೇ ದ್ವೇಷವನ್ನು ಸಾಧಿಧಿಸುತ್ತಿದ್ದ ಮುತ್ತಣ್ಣ ಬೆಳ್ಳೂರಿನ ತೊರೆ ಸರ್ಕಲ್‌ನಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಪದ್ಮನಾಭ್‌ ಅವರನ್ನು ತಡೆದು ನಾಯಕನಕೊಪ್ಪಲು ಗ್ರಾಮಸ್ಥರ ಪರ ವಕಾಲತ್ತು ವಹಿಸಲು ನೀನ್ಯಾರು ಎಂದು ಗಲಾಟೆ ಮಾಡಿ ತಳ್ಳಾಟ ನೂಕಾಟ ಮಾಡಿದ್ದಾರೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಏಕಾಏಕಿ ಕೋಪಗೊಂಡ ಮುತ್ತಣ್ಣ, ಪದ್ಮನಾಭ್‌ಗೆ ಚಾಕುವಿನಿಂದ ಇರಿಯಲು ಮುಂದಾಗಿದ್ದಾರೆ. ಈ ವೇಳೆ ಇದೇ ಮಾರ್ಗವಾಗಿ ಬರುತ್ತಿದ್ದ ಪದ್ಮನಾಭ್‌ ಸ್ನೇಹಿತ ಸುರೇಶ್‌ ಸೇರಿದಂತೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ,'' ಎಂದು ದೂರಿದರು.

307 ಪ್ರಕರಣ ದಾಖಲು: ಪದ್ಮನಾಭ್‌ ನೀಡಿರುವ ದೂರಿನ ಮೇರೆಗೆ, ಜಿ.ಪಂ.ಸದಸ್ಯ ಮುತ್ತಣ್ಣ ವಿರುದ್ಧ ಬೆಳ್ಳೂರು ಠಾಣೆಯಲ್ಲಿ ಮೊಕದ್ದಮೆ ನಂ.121/2019ರ ಕಲಂ 307, 323 ಹಾಗೂ 506 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಜಿ.ಪಂ. ಸದಸ್ಯ ಮುತ್ತಣ್ಣ ವಿರುದ್ಧ ಬೆಳ್ಳೂರಿನ ಪದ್ಮನಾಭ್‌ ಎಂಬುವವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣದ ವರದಿಯನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧಿಧೀಶರಿಗೆ ಸಲ್ಲಿಸಿದ್ದು, ಘಟನೆಯಲ್ಲಿ ಫಿರಾರ‍ಯದಿ ಪದ್ಮನಾಭ್‌ ಸೇರಿದಂತೆ ಯಾರಿಗೂ ರಕ್ತಗಾಯವಾಗಿಲ್ಲದ ಹಿನ್ನೆಲೆಯಲ್ಲಿ ಘಟನೆಯ ಸತ್ಯಾಸತ್ಯತೆಯನ್ನು ತಿಳಿಯಲು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
-ನಂಜಪ್ಪ, ಆರಕ್ಷ ಕ ವೃತ್ತ ನಿರೀಕ್ಷ ಕ. ನಾಗಮಂಗಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ