ಆ್ಯಪ್ನಗರ

ಚುಚ್ಚುಮದ್ದು ಪಡೆದ 24 ತಾಸಿನಲ್ಲಿ ಮಗು ಸಾವು !

ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಪೆಂಟವಲೆಂಟ್‌ ಚುಚ್ಚುಮದ್ದು ಪಡೆದ 2 ತಿಂಗಳ ಹೆಣ್ಣು ಮಗು ಶುಕ್ರವಾರ ಮೃತಪಟ್ಟಿದೆ.

Vijaya Karnataka 8 Dec 2018, 5:00 am
ಮಂಡ್ಯ: ಮದ್ದೂರು ತಾಲೂಕು ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಪೆಂಟವಲೆಂಟ್‌ ಚುಚ್ಚುಮದ್ದು ಪಡೆದ 2 ತಿಂಗಳ ಹೆಣ್ಣು ಮಗು ಶುಕ್ರವಾರ ಮೃತಪಟ್ಟಿದೆ.
Vijaya Karnataka Web baby death
ಚುಚ್ಚುಮದ್ದು ಪಡೆದ 24 ತಾಸಿನಲ್ಲಿ ಮಗು ಸಾವು !


ಗ್ರಾಮದ ನಿವಾಸಿಗಳಾದ ಜ್ಯೋತಿ-ಸ್ವಾಮಿ ದಂಪತಿಯ ಹೆಣ್ಣು ಮಗು ಮೃತಪಟ್ಟಿದೆ. ''ಈ ಮಗುವಿಗೆ ಗುರುವಾರ ಮಧ್ಯಾಹ್ನ ಕಾಡುಕೊತ್ತನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೆಂಟಾವಲೆಂಟ್‌ ಚುಚ್ಚುಮದ್ದು ಹಾಕಿಸಲಾಗಿತ್ತು. ಇದರೊಂದಿಗೆ ವೈದ್ಯರು ಮತ್ತೊಂದು ಚುಚ್ಚುಮದ್ದನ್ನು ಮಗುವಿಗೆ ನೀಡಿದ್ದರು,'' ಎಂದು ಮೃತ ಮಗುವಿನ ದೊಡ್ಡಪ್ಪ ಪುಟ್ಟಸ್ವಾಮಿ 'ಧಿವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಆದರೆ, ಶುಕ್ರವಾರ ಬೆಳಗ್ಗೆ ಹಾಲು ಕುಡಿಯದ ಮಗು ರಚ್ಚೆ ಹಿಡಿಯುತ್ತಾ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದೆ. ಆತಂಕಗೊಂಡ ಪೋಷಕರು ಆಶಾ ಕಾರ‍್ಯಕರ್ತೆಯರಿಗೆ ಮಾಹಿತಿ ನೀಡಿದ್ದು, ಅವರು ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸುವಂತೆ ಸಲಹೆ ನೀಡಿದ್ದಾರೆ.

ಅದರಂತೆ ಮನೆಯಿಂದ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯಕ್ಕೆ ಕರೆತರುವ ವೇಳೆಗೆ ಮಗು ಮೃತಪಟ್ಟಿದೆ. ಮಗುವಿನ ಸಾವಿಗೆ ಚುಚ್ಚುಮದ್ದು ಕಾರಣವೆಂದು ಆರೋಪಿಸಿರುವ ಪೋಷಕರು, ಪಿಎಚ್‌ಸಿ ಕೇಂದ್ರದ ಎದುರು ಜಮಾವಣೆಗೊಂಡು ಪ್ರತಿಭಟಿಸಿದರು. ಆಸ್ಪತ್ರೆ ಆವರಣದಲ್ಲಿ ಮಗುವಿನ ತಾಯಿ ಮತ್ತು ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

ಭಾನುವಾರ ನಡೆಯಬೇಕಿತ್ತು ನಾಮಕರಣ: ಮಗುವಿನ ನಾಮಕರಣ ಕಾರ‍್ಯಕ್ರಮವು ಡಿ.9ರಂದು ನಿಗದಿಯಾಗಿತ್ತು. ಅದಕ್ಕಾಗಿ ಪೋಷಕರು ಸಿದ್ಧತೆಯಲ್ಲಿದ್ದರು. ಆದರೆ, ನಾಮಕರಣಕ್ಕೂ ಮೊದಲೇ ಮಗು ಇಹಲೋಕ ತ್ಯಜಿಸಿದ್ದು, ಪೋಷಕರು ದುಃಖದಲ್ಲಿದ್ದಾರೆ.

ಮಗುವಿನ ಸಾವಿಗೆ ಪೆಂಟವಲೆಂಟ್‌ ಚುಚ್ಚುಮದ್ದು ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಬಗ್ಗೆ ಮಾಹಿತಿ ನೀಡುವಂತೆ ಕಾಡುಕೊತ್ತನಹಳ್ಳಿ ಪಿಎಚ್‌ಸಿ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ. ಅವರು ನೀಡುವ ವರದಿ ಆಧರಿಸಿ ಕ್ರಮ ವಹಿಸಲಾಗುವುದು. ಚುಚ್ಚುಮದ್ದನ್ನು ಪರೀಕ್ಷೆಗೆ ಕಳುಹಿಸಲಾಗುವುದು.

- ಡಾ.ಎಂ.ನಾಗರಾಜು, ಡಿಎಚ್‌ಒ, ಮಂಡ್ಯ

ಹಿಂದೆಯೂ ಮಕ್ಕಳ ಸಾವು...

ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲೂ ಫೆ.10ರಂದು ರೋಗನಿರೋಧಕ ಚುಚ್ಚುಮದ್ದು ನೀಡಿದ 24 ತಾಸಿನಲ್ಲಿ ಎರಡು ಮಕ್ಕಳು ಅಸುನೀಗಿದ್ದವು. ಫೆ.8ರಂದು ಏಳೆಂಟು ಮಕ್ಕಳಿಗೆ ಪೆಂಟವಲೆಂಟ್‌ ಚುಚ್ಚುಮದ್ದು ನೀಡಲಾಗಿತ್ತು. ಚಿಂದಿಗಿರಿದೊಡ್ಡಿ ನಿವಾಸಿ ಪ್ರಿಯಾಂಕ-ರವಿ ದಂಪತಿಯ ಮಗು ಪ್ರೀತಂ ಹಾಗೂ ಹೇಮಾವತಿ-ರವಿ ದಂಪತಿಯ ಮಗು ಭುವನ್‌ ಮೃತಪಟ್ಟಿದ್ದವು. ಎರಡೂ ಮಕ್ಕಳು ಒಂದೂವರೆ ತಿಂಗಳ ವಯಸ್ಸಿನವಾಗಿದ್ದವು. ಇದಾದ ಬಳಿಕ ಮಂಡ್ಯ ತಾಲೂಕು ಸೂನಗಹಳ್ಳಿ ಗ್ರಾಮದಲ್ಲೂ ಏಪ್ರಿಲ್‌ 6ರಂದು ನಂದೀಶ್‌-ಶಿಲ್ಪ ದಂಪತಿಯ ಎರಡು ತಿಂಗಳ ಮಗು ಮೃತಪಟ್ಟಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ