ಆ್ಯಪ್ನಗರ

ಮಂಡ್ಯಕ್ಕೆ ಅಮಂಗಳವಾರ: 10 ಸಾವು

ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಐದು ಪ್ರತ್ಯೇಕ ಅವಘಡಗಳಲ್ಲಿ ಹತ್ತು ಮಂದಿ ಮೃತಪಟ್ಟರು. ಗುತ್ತಲು ರಸ್ತೆಯ ಸಾದತ್‌ ನಗರದ ಬಳಿ ಬ್ರೇಕ್‌ ಫೇಲ್‌ ಆದ ಲಾರಿಯೊಂದು ನಾಲ್ವರು ಪಾದಚಾರಿಗಳನ್ನು ಬಲಿ ತೆಗೆದುಕೊಂಡಿದೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

Vijaya Karnataka 3 Oct 2018, 5:00 am
ಮಂಡ್ಯ: ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಐದು ಪ್ರತ್ಯೇಕ ಅವಘಡಗಳಲ್ಲಿ ಹತ್ತು ಮಂದಿ ಮೃತಪಟ್ಟರು. ಗುತ್ತಲು ರಸ್ತೆಯ ಸಾದತ್‌ ನಗರದ ಬಳಿ ಬ್ರೇಕ್‌ ಫೇಲ್‌ ಆದ ಲಾರಿಯೊಂದು ನಾಲ್ವರು ಪಾದಚಾರಿಗಳನ್ನು ಬಲಿ ತೆಗೆದುಕೊಂಡಿದೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
Vijaya Karnataka Web bad tuesday for mandya 10 dead
ಮಂಡ್ಯಕ್ಕೆ ಅಮಂಗಳವಾರ: 10 ಸಾವು


ಮಳವಳ್ಳಿ ತಾಲೂಕು ಹಾಡ್ಲಿ ಗ್ರಾಮದಲ್ಲಿ ಹೊಸದಾಗಿ ತಂದಿದ್ದ ಜೋಡಿ ಹಸುಗಳಿಗೆ ಎತ್ತಿನಗಾಡಿ ಎಳೆಯುವುದನ್ನು ರೂಢಿ ಮಾಡುವ ಪ್ರಯತ್ನದಲ್ಲಿ ತಂದೆ-ಮಗ ಇಬ್ಬರೂ ಕೆರೆಪಾಲಾಗಿದ್ದಾರೆ.

ಮಳವಳ್ಳಿ ತಾಲೂಕಿನ ಕನ್ನಹಳ್ಳಿ ಗ್ರಾಮದ ಬಳಿ ಬೈಕ್‌ ಸೇತುವೆಗೆ ಡಿಕ್ಕಿ ಹೊಡೆದು, ತಾಲೂಕಿನ ಕುರುಬನಪುರ ಗ್ರಾಮದ ಇಬ್ಬರು ಮೃತಪಟ್ಟಿದ್ದಾರೆ.

ಇದೇ ತಾಲೂಕಿನ ಕ್ಯಾತೇಗೌಡನದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಮನೆಯ ನೀರಿನ ಸಂಪ್‌ಗೆ ಬಿದ್ದು ಯುವತಿಯೊಬ್ಬಳು ಮೃತಪಟ್ಟಳು.

ಕೆ.ಆರ್‌.ಪೇಟೆಯ ಮುರುಕನಹಳ್ಳಿಯಲ್ಲಿ ಕೆಸರಿನಲ್ಲಿ ಸಿಲುಕಿದ ಎಮ್ಮೆಯನ್ನು ರಕ್ಷಿಸಲು ಹೋದ ವೃದ್ಧ ರೈತರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ