ಆ್ಯಪ್ನಗರ

ಬ್ಯಾಂಕುಗಳು ಸಾಲನೀಡುವ ವಿಧಾನವನ್ನು ಸರಳಗೊಳಿಸಬೇಕು

ಸರಕಾರದ ಬಡತನ ನಿರ್ಮೂಲನೆ ಯೋಜನೆಗಳ ಅಡಿಯಲ್ಲಿ ಅರ್ಜಿಗಳು ಕೊರೊನಾ ವೈರಸ್ ಲಾಕ್‌ಡೌನ್ ಪರಿಣಾಮ ಸೆಪ್ಟೆಂಬರ್ 2020ರ ಅಂತ್ಯದ ವೇಳೆಗೆ ಬ್ಯಾಂಕ್‍ಗಳಿಗೆ ತಲುಪದೇ ಇರುವುದರಿಂದ ಸಾಧನೆಯಾಗಿರುವುದಿಲ್ಲ.

Vijaya Karnataka Web 16 Dec 2020, 8:47 pm
ಮಂಡ್ಯ: ಬ್ಯಾಂಕುಗಳು ಸಾರ್ವಜನಿಕರಿಗೆ ಸಾಲ ನೀಡುವ ವಿಧಾನವನ್ನು ಸರಳಗೊಳಿಸಬೇಕು ಮತ್ತು ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಎಂವಿ ವೆಂಕಟೇಶ್ ತಿಳಿಸಿದರು.
Vijaya Karnataka Web ಮಂಡ್ಯ
ಮಂಡ್ಯ


ಬ್ಯಾಂಕ್ ಆಫ್ ಬರೋಡ ವತಿಯಿಂದ ನಗರದ ವಿಬ್‍ಸೆಟಿ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಹಾಗೂ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಜಿಲ್ಲಾಧಿಕಾರಿ ಮಾತನಾಡಿದರು.

ಪ್ರಧಾನಮಂತ್ರಿ ಸ್ವಾ ನಿಧಿ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್ ಆಫ್ ಇಂಡಿಯಾ ಉತ್ತಮ ಪ್ರಗತಿ ಸಾಧಿಸಿದೆ. ಇನ್ನುಳಿದ ಸರಕಾರಿ ಮತ್ತು ಸರಕಾರೇತರ ಬ್ಯಾಂಕುಗಳು ಅರ್ಜಿಗಳನ್ನು ಶೀಘ್ರವೇ ಅನುಮೋದನೆ ಮತ್ತು ವಿತರಣೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

2020-21ನೇ ಸಾಲಿನ ಎರಡನೇ ತ್ರೈಮಾಸಿಕದ 2405.65 ಕೋಟಿ ರೂ. ಗುರಿಯಲ್ಲಿ ಪ್ರತಿಶತ ಶೇ.97ರಷ್ಟು ಸಾಧನೆಯಾಗಿದೆ. ಆದ್ಯತಾ ರಂಗ ಶೇ.86 , ಕೃಷಿರಂಗ ಶೇ.81 , ಕೈಗಾರಿಕಾ ರಂಗ ಶೇ.102 ಇತರೆ ಆದ್ಯತಾ ರಂಗ ಶೇ.90 ರಷ್ಟು ಗುರಿಯನ್ನು ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುಲ್ಫಿಕರ್ ಉಲ್ಲಾ ತಿಳಿಸಿದರು.

ತಾಲೂಕುವಾರು ಸಾಧನೆಯಲ್ಲಿ ಶ್ರೀರಂಗಪಟ್ಟಣ ಪ್ರಥಮ ಸ್ಥಾನದಲ್ಲಿದ್ದರೆ, ಕೆ.ಆರ್.ಪೇಟೆ ದ್ವಿತೀಯ ಸ್ಥಾನದಲ್ಲಿದೆ. ಪಾಂಡವಪುರ, ಮಂಡ್ಯ, ಮಳವಳ್ಳಿ, ಮದ್ದೂರು, ಹಾಗೂ ನಾಗಮಂಗಲ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ ಎಂದು ತಿಳಿಸಿದರು.

ಸರಕಾರದ ಬಡತನ ನಿರ್ಮೂಲನೆ ಯೋಜನೆಗಳ ಅಡಿಯಲ್ಲಿ ಅರ್ಜಿಗಳು ಕೊರೊನಾ ವೈರಸ್ ಲಾಕ್‌ಡೌನ್ ಪರಿಣಾಮ ಸೆಪ್ಟೆಂಬರ್ 2020ರ ಅಂತ್ಯದ ವೇಳೆಗೆ ಬ್ಯಾಂಕ್‍ಗಳಿಗೆ ತಲುಪದೇ ಇರುವುದರಿಂದ ಸಾಧನೆಯಾಗಿರುವುದಿಲ್ಲ. ಮುಂದಿನ ಸಭೆಯೊಳಗೆ ಎಲ್ಲವೂ ಪ್ರಗತಿಯಾಗಿರಬೇಕು. 2019-20 ನೇ ಸಾಲಿನಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಕೂಡಲೇ ಹಣ ಬಿಡುಗಡೆ ಮಾಡಲು ಎಲ್ಲ ಬ್ಯಾಂಕ್ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬ್ಯಾಂಕ್ ಆಫ್ ಬರೋಡಾದ ವಲಯ ವ್ಯವಸ್ಥಾಪಕರಾದ ಕೆ.ಆರ್ ಕಪಿಲೇಶ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕರಾದ ಕದರಪ್ಪ ಹಾಗೂ ನಬಾರ್ಡ್‍ನ ವ್ಯವಸ್ಥಾಪಕರಾದ ಹರ್ಷಿತಾ ರವರು ವಿವಿಧ ಬ್ಯಾಂಕುಗಳ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ