ಆ್ಯಪ್ನಗರ

ಗಾಂಧೀಜಿ ಜೀವನ ಚರಿತ್ರೆ ಅಧ್ಯಯನ ಅಗತ್ಯ

ಗಾಂಧೀಜಿ ಜೀವನ ಚರಿತ್ರೆ ಅಧ್ಯಯನ ಅಗತ್ಯ ವಿಕ ಸುದ್ದಿಲೋಕ ಮಂಡ್ಯ ಗಾಂಧೀಜಿ ಅವರ ಜೀವನವನ್ನು ಯುವಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಗಾಂಧಿವಾದಿ ವೇಮಗಲ್‌ ಸೋಮಶೇಖರ್‌ ಸಲಹೆ ...

Vijaya Karnataka 26 Sep 2019, 5:00 am
ಗಾಂಧೀಜಿ ಜೀವನ ಚರಿತ್ರೆ ಅಧ್ಯಯನ ಅಗತ್ಯ
Vijaya Karnataka Web biography of gandhiji is necessary to study
ಗಾಂಧೀಜಿ ಜೀವನ ಚರಿತ್ರೆ ಅಧ್ಯಯನ ಅಗತ್ಯ

ಮಂಡ್ಯ: ಗಾಂಧೀಜಿ ಅವರ ಜೀವನವನ್ನು ಯುವಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಗಾಂಧಿವಾದಿ ವೇಮಗಲ್‌ ಸೋಮಶೇಖರ್‌ ಸಲಹೆ ನೀಡಿದರು.

ನಗರದ ಗಾಂಧಿಭವನದಲ್ಲಿಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್‌ ವತಿಯಿಂದ ಬುಧವಾರ ನಡೆದ ಡಾ.ಅರ್ಜುನಪುರಿ ಅಪ್ಪಾಜಿಗೌಡ ಸ್ಮಾರಕ 3ನೇ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿಮಾತನಾಡಿದರು.

''ಗಾಂಧೀಜಿ ಅವರು ಶ್ರೀಮಂತ ಕುಟುಂಬದಲ್ಲಿಹುಟ್ಟಿದರೂ ಬಡವರು, ರೈತಾಪಿ ಜನರು ಬಟ್ಟೆ ಧರಿಸದೆ ದುಡಿಯುತ್ತಿರುವುದನ್ನು ಕಂಡು ಜೀವನದುದ್ದಕ್ಕೂ ತುಂಡು ಉಡುಗೆಯನ್ನೇ ಧರಿಸಿದ್ದರು. ಬರಿ ಕಾಲಿನಲ್ಲೇ ಓಡಾಡುತ್ತಿದ್ದರು. ಅವರ ಜೀವನ ಶೈಲಿ, ಹೋರಾಟದ ದಾರಿ ಸರ್ವಕಾಲಿಕವಾಗಿದೆ. ಗಾಂಧೀಜಿ ಅವರ ಚಿಂತನೆ, ಸರಳತೆಯನ್ನು ಜೀವನದಲ್ಲಿಅಳವಡಿಸಿಕೊಂಡು ಮುನ್ನಡೆಯಬೇಕು,'' ಎಂದು ಸಲಹೆ ನೀಡಿದರು.

ಕರ್ನಾಟಕ ಗೆಜೆಟಿಯರ್‌ ನಿವೃತ್ತ ಸಂಪಾದಕ ರಾಜೇಂದ್ರಪ್ಪ ಮಹಾತ್ಮರ ಬಾಳು ಪುಸ್ತಕ ಬಿಡುಗಡೆ ಮಾಡಿದರು. ಸಾಹಿತಿ ಡಾ.ಎಚ್‌.ಎಸ್‌.ಮುದ್ದೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿಡಾ.ಅರ್ಜುನಪುರಿ ಅಪ್ಪಾಜಿಗೌಡ ಸ್ಮಾರಕ 3ನೇ ದತ್ತಿ ಪ್ರಶಸ್ತಿಯನ್ನು ಪತ್ರಕರ್ತ ಯೋಗೇಶ್‌ ಮಾರೇನಹಳ್ಳಿ ಅವರಿಗೆ ಪ್ರದಾನ ಮಾಡಲಾಯಿತು. ಗಾಂಧಿಭವನದ ಪ್ರಧಾನ ಕಾರ್ಯದರ್ಶಿ ಎನ್‌.ರಾಜು, ಡಾ.ಗುರುರಾಜ ಪೊ.ಶೆಟ್ಟಿಹಳ್ಳಿ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ