ಆ್ಯಪ್ನಗರ

ರಂಗನತಿಟ್ಟಿನಲ್ಲಿ ದೋಣಿ ವಿಹಾರ ಪುನಾರಂಭ

ರಂಗನತಿಟ್ಟಿನಲ್ಲಿ ದೋಣಿ ವಿಹಾರ ಪುನಾರಂಭ ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಪಟ್ಟಣ ಹೊರವಲಯದಲ್ಲಿರುವ ಪ್ರಮುಖ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಕಾವೇರಿ ನದಿ ...

Vijaya Karnataka 21 Aug 2019, 5:00 am
ರಂಗನತಿಟ್ಟಿನಲ್ಲಿ ದೋಣಿ ವಿಹಾರ ಪುನಾರಂಭ
Vijaya Karnataka Web boating restart at ranganatitu bird sanctuary
ರಂಗನತಿಟ್ಟಿನಲ್ಲಿ ದೋಣಿ ವಿಹಾರ ಪುನಾರಂಭ

ಶ್ರೀರಂಗಪಟ್ಟಣ: ಪಟ್ಟಣ ಹೊರವಲಯದಲ್ಲಿರುವ ಪ್ರಮುಖ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಕಾವೇರಿ ನದಿ ಪ್ರವಾಹದಿಂದ ಕಳೆದ 10 ದಿನಗಳಿಂದ ಸ್ಥಗಿತಗೊಂಡಿದ್ದ ದೋಣಿವಿಹಾರ ಮಂಗಳವಾರದಿಂದ ಪುನಾರಂಭವಾಗಿದೆ.

ಆ.10ರಂದು ಕೆಆರ್‌ಎಸ್‌ ಜಲಾಶಯದಿಂದ 1.63 ಲಕ್ಷ ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಯಿತು. ಇದರಿಂದ ಜಲಾಶಯದ ತಗ್ಗು ಪ್ರದೇಶದಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಉದ್ಯಾನವನಕ್ಕೂ ನೀರು ನುಗ್ಗಿತು. ಪರಿಣಾಮವಾಗಿ ದೋಣಿ ವಿಹಾರದ ಜತೆಗೆ ಉದ್ಯಾನ ವೀಕ್ಷ ಣೆಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರಿಂದ ಪ್ರವಾಸಿಗರ ಸುರಕ್ಷ ತೆ ದೃಷ್ಟಿಯಿಂದ ಸತತ 10 ದಿನ ದೋಣಿ ವಿಹಾರ ಸ್ಥಗಿತಗೊಂಡಿತ್ತು. ಇದೀಗ ಪ್ರವಾಹ ಕಡಿಮೆಯಾಗಿರುವುದರಿಂದ ದೋಣಿ ವಿಹಾರವನ್ನು ಪುನಾರಂಭಿಸಲಾಗಿದೆ. ಉದ್ಯಾನ ವೀಕ್ಷಣೆಗೆ ನಿರ್ಬಂಧ ಹೇರಿದ್ದ ಪರಿಣಾಮ 10 ದಿನಗಳಲ್ಲಿ 25 ಲಕ್ಷ ರೂ. ಆದಾಯ ಕಡಿತಗೊಂಡಿದೆ.

ಪಕ್ಷಿಗಳು ಸುರಕ್ಷಿತ: ಪಕ್ಷಿಧಾಮದಲ್ಲಿ ನೈಟ್‌ ಹೆರಾನ್‌, ಗ್ರೇ ಹೆರಾನ್‌, ಕಿಂಗ್‌ ಫಿಷರ್‌, ಕಾಮನ್‌ ಕಿಂಗ್‌ ಫಿಷರ್‌ ಸೇರಿದಂತೆ 15ಕ್ಕೂ ಹೆಚ್ಚು ಪ್ರಭೇದದ ಎರಡು ಸಾವಿರಕ್ಕೂ ಹೆಚ್ಚು ಪಕ್ಷಿಗಳಿವೆ. ಫೆಬ್ರವರಿ, ಮಾರ್ಚ್‌ ವೇಳೆಯಲ್ಲಿ ಹೊರಗಿನಿಂದ ಬರುವ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡಿವೆ. ಆ ಮರಿ ಪಕ್ಷಿಗಳು ದೊಡ್ಡವಾಗಿದ್ದು, ಹೊರಗಿನ ಪಕ್ಷಿಗಳು ಮರಿ ಸಮೇತ ಹಿಂದಿರುಗಿವೆ. ಇಲ್ಲಿಯೇ ಇರುವ ಪಕ್ಷಿಗಳು ಸಂತಾನ ಪ್ರಕ್ರಿಯೆ ಮುಗಿಸಿವೆ. ಆ ಮರಿಗಳು ದೊಡ್ಡದಾಗಿದ್ದು, ನದಿ ನೀರಿನ ಪ್ರವಾಹದಿಂದ ಯಾವುದೇ ಹಾನಿಯಾಗಿಲ್ಲ. ಎಲ್ಲವೂ ಸುರಕ್ಷಿತವಾಗಿವೆ.

ಆದಾಯ ಖೋತಾ: ಆ.10ರಿಂದ 19ರವರೆಗೆ 10 ದಿನ ಕಾಲ ದೋಣಿ ವಿಹಾರ ಹಾಗೂ ಆ.11ರಿಂದ 16ರವರೆಗೆ 6 ದಿನ ಪಕ್ಷಿಧಾಮ ಪ್ರವೇಶ ನಿರ್ಬಂಧಿಸಲಾಗಿತ್ತು. ನಿತ್ಯ 70 ಸಾವಿರ ಶುಲ್ಕದ ರೂಪದಲ್ಲಿ ಬರುತ್ತಿದ್ದ ಆದಾಯ ಪ್ರವೇಶ ಹಾಗೂ ದೋಣಿ ವಿಹಾರ ಸ್ಥಗಿತಗೊಂಡಿದ್ದರಿಂದ ಸುಮಾರು 20 ಲಕ್ಷ ರೂ.ನಷ್ಟು ಆದಾಯ ನಷ್ಟವಾಗಿದೆ.

ನದಿ ನೀರಿನ ಪ್ರವಾಹದಿಂದ ಪಕ್ಷಿಗಳಿಗೆ ಯಾವುದೇ ಹಾನಿಯಾಗಿಲ್ಲ. 15 ಜಾತಿಯ ಪಕ್ಷಿ ಪ್ರಬೇಧಗಳು ಪಕ್ಷಿಧಾಮದಲ್ಲಿವೆ. ಎಲ್ಲ ಜಾತಿಯ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡಿದ್ದು ಮರಿಗಳು ದೊಡ್ಡದಾಗಿರುವುದರಿಂದ ನೀರಿನ ಹರಿವಿನಿಂದ ಯಾವುದೇ ಹಾನಿಯಾಗಿಲ್ಲ. ಮಂಗಳವಾರದಿಂದ ದೋಣಿ ವಿಹಾರ ಪುನಾರಂಭಿಸಲಾಗಿದೆ. ನದಿಯಲ್ಲಿ ನೀರಿನ ಹರಿವು ಮತ್ತೆ ಹೆಚ್ಚಾದರೆ ಪ್ರವಾಸಿಗರ ಹಿತದೃಷ್ಟಿಯಿಂದ ದೋಣಿ ವಿಹಾರ ಸ್ಥಗಿತಗೊಳಿಸಲಾಗುವುದು.
-ಪುಟ್ಟಮಾದೇಗೌಡ, ಪಕ್ಷಿಧಾಮದ ಡಿಆರ್‌ಎಫ್‌ಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ