ಆ್ಯಪ್ನಗರ

ಒಡೆದಾಳುವ ನೀತಿ ಅಪಾಯಕಾರಿ

12ನೇ ಶತಮಾನದ ಮಹಾಪುರುಷ ಬಸವಣ್ಣ ಅವರು ಜಾತೀಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಆದರೆ ಇಂದಿನ ರಾಜಕಾರಣಿಗಳು ಜಾತಿ, ಜಾತಿಗಳನ್ನೇ ಒಡೆದಾಳುವ ನೀತಿ ಅನುಸರಿಸು ತ್ತಿರುವುದು ಬೇಸರದ ಸಂಗತಿ ಎಂದು ಪ್ರಜಾಪ್ರಿಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಟಿ.ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.

Vijaya Karnataka 21 Apr 2018, 5:15 am
ಭಾರತೀನಗರ: 12ನೇ ಶತಮಾನದ ಮಹಾಪುರುಷ ಬಸವಣ್ಣ ಅವರು ಜಾತೀಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಆದರೆ ಇಂದಿನ ರಾಜಕಾರಣಿಗಳು ಜಾತಿ, ಜಾತಿಗಳನ್ನೇ ಒಡೆದಾಳುವ ನೀತಿ ಅನುಸರಿಸು ತ್ತಿರುವುದು ಬೇಸರದ ಸಂಗತಿ ಎಂದು ಪ್ರಜಾಪ್ರಿಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಟಿ.ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
Vijaya Karnataka Web broken policy is dangerous
ಒಡೆದಾಳುವ ನೀತಿ ಅಪಾಯಕಾರಿ


ಪ್ರಜಾಪ್ರಿಯಾ ಸೇವಾಟ್ರಸ್ಟ್, ಲೋಕೇಶ್ ಸ್ಟುಡಿಯೋ ಆರ್ಗ್ಯಾನಿಕ್ ಸೆಂಟರ್ ಸಂಯುಕ್ತಾಶ್ರ ಯದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ಸಿದ್ಧಗಂಗಾ ಮಠದ ಜಗದ್ಗುರು ಶ್ರೀಶಿವ ಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನಾಚರಣೆ ಸಂದರ್ಭ ರೈತರಿಗೆ ಸಸಿ ವಿತರಿಸಿ ಮಾತನಾಡಿದರು.

‘‘ಬಸವಣ್ಣ ಅವರು ಲಿಂಗಾಯಿತ ಮತದ ಸಂಸ್ಥಾಪಕರೆಂದು ಹೇಳುತ್ತಾರಾದರೂ ಅವರು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿಕೊಳ್ಳದೆ ಇಡೀ ಮನುಕುಲವನ್ನು ಒಂದೇ ಎಂದು ಸಾರಿ ಹೇಳಲು ಅನುಭವ ಮಂಟಪವನ್ನು ಕಟ್ಟಿದ್ದರು. ಪ್ರಸ್ತುತ ಬಸವಣ್ಣ ಅವರ ಧ್ಯೇಯವನ್ನು ಗಾಳಿಗೆ ತೂರಿ, ರಾಜಕೀಯ ಲಾಭಕ್ಕಾಗಿ ಕೆಲವರು ಜಾತಿಗಳನ್ನು ಒಡೆದು ಆಳಲು ಮುಂದಾಗಿದ್ದಾರೆ,’’ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಸಂದರ್ಭ ನೂರಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಆರ್ಗ್ಯಾನಿಕ್ ಸೆಂಟರ್‌ನ ವೈ.ಬಿ.ಶ್ರೀಕಂಠಸ್ವಾಮಿ ಅವರು ರೈತರಿಗೆ ನೀಡಿದರು. ಇದಕ್ಕೂ ಮೊದಲು ಬಸವಣ್ಣ ಹಾಗೂ ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು.

ಟ್ರಸ್ಟ್‌ನ ಉಪಾಧ್ಯಕ್ಷ ಅರುಣ್, ಖಜಾಂಚಿ ಎಸ್.ವಿ.ಚಂದನ್, ಕಾರ್ಯದರ್ಶಿಗಳಾದ ನಂದನ್, ಅರುಣ್‌ಕುಮಾರ್, ಸದಸ್ಯರಾದ ಯೋಗೇಶ್, ಬಿ.ವಿ.ನವೀನ್, ಜೆ.ಯೋಗೇಶ್, ಸುನಿಲ್‌ಕುಮಾರ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ