ಆ್ಯಪ್ನಗರ

ವಿಧಾನಸೌಧದಲ್ಲಿ ಯಾವುದೇ ಕಡತಕ್ಕೆ ಸಹಿ ಹಾಕಿದರೂ ಒಂದು ಪ್ರತಿ ನನಗೆ ಬರುತ್ತೆ: ರೇವಣ್ಣ

ಕೆಎಂಎಫ್‌ಗೆ ಐಎಎಸ್ ಅಧಿಕಾರಿಯನ್ನು ಎಂಡಿ ಮಾಡಿದ್ದಾರೆ. ಆ ಎಂಡಿ ನಮ್ಮ ಕೈಗೆ ಸಿಗದೆ ಎಲ್ಲಿ ಹೋಗುತ್ತಾರೆ ಎಂದು ಹೆಸರು ಹೇಳದೆ ಮಾಜಿ ಸಚಿವ ಎಚ್‌ಡಿ ರೇವಣ್ಣ ವಾಗ್ದಾಳಿ ನಡೆಸಿದರು.

Vijaya Karnataka Web 12 Sep 2019, 7:29 pm
ಹಾಸನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಷ್ಟುದಿನ ದ್ವೇಷದ ರಾಜಕಾರಣ ಮಾಡುತ್ತಾರೋ ಮಾಡಲಿ, ಅವರನ್ನು ರಿಪೇರಿ ಮಾಡುವುದು ಗೊತ್ತಿದೆ. ಅವರಂತಹ ಎಷ್ಟು ಜನರನ್ನು ನೋಡಿದ್ದೇವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದ್ದಾರೆ.
Vijaya Karnataka Web ಎಚ್‌ಡಿ ರೇವಣ್ಣ
ಎಚ್‌ ಡಿ ರೇವಣ್ಣ


ನಗರದ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಚ್‌ಡಿ ರೇವಣ್ಣ ಮಾತನಾಡಿದರು.

ಯಡಿಯೂರಪ್ಪ ಅವರನ್ನು ರಿಪೇರಿ ಮಾಡುವ ಕೀ ನನ್ನ ಕೈಯಲ್ಲಿದೆ, ಅವರು ವಿಧಾನನಸೌಧದಲ್ಲಿ ಕಡತಕ್ಕೆ ಸಹಿ ಹಾಕಿದ ಕೂಡಲೇ ನನಗೊಂದು ಪ್ರತಿ ರವಾನೆಯಾಗುತ್ತದೆ ರಾಜಕೀಯ ಹೇಗೆ ಮಾಡಬೇಕು ಎಂಬುದು ತಿಳಿದಿದೆ ಎಂದು ಗುಡುಗಿದರು.

ಸಮ್ಮಿಶ್ರ ಸರಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿಯೇ ಸಿಎಂ ಆಗಿದ್ದರು. ಆ 14 ತಿಂಗಳಲ್ಲಿ ಮನಸ್ಸು ಮಾಡಿದ್ದರೆ. ನಾನೇ ಹಾಲು ಮಹಾಮಂಡಳದ ಅಧ್ಯಕ್ಷನಾಗುತ್ತಿದೆ. ನಾಲ್ಕು
ತಿಂಗಳು ಕಾಯಲಿ ಸಿಎಂ ಏನೇನು ಮಾಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸುತ್ತೇನೆ ಎಂದು ರೇವಣ್ಣ ಎಚ್ಚರಿಸಿದರು.

ಎಚ್.ಡಿ.ಕುಮಾರಸ್ವಾಮಿಯೇ ಸಿಎಂ ಆಗಿದ್ದರು. ಆ 14 ತಿಂಗಳಲ್ಲಿ ಜಿಲ್ಲೆಗೆ ಏನೇನು ಆಗಬೇಕು ಎಲ್ಲವನ್ನು ಮಾಡಿ ಮುಗಿಸಿದ್ದೇನೆ, ಅದ್ಯಾವ ಕಾಮಗಾರಿಗೆ ಅಡ್ಡಿಪಡಿಸುತ್ತಾರೆ ನೋಡುತ್ತೇನೆ. ಇದು ಬಹಿರಂಗ ಸವಾಲು ಎಂದು ಆಕ್ರೋಶ ಹೊರಹಾಕಿದರು.

ಬಿಎಸ್‌ವೈ ಜತೆ ಸೇರಿ ಒಬ್ಬ ಗಿರಾಕಿ ಕಾಲೇಜು ತೆರೆದಿದ್ದಾನೆ, ಒಂದು ಸೀಟಿಗೆ 20 ಲಕ್ಷ ಪಡೆಯುತ್ತಿದ್ದಾರೆ ಆದರೆ ನಾನು ಮಂತ್ರಿಯಾಗಿದ್ದ ವೇಳೆ ಬಡ ವಿದ್ಯಾರ್ಥಿಗಳ ದೃಷ್ಟಿಯಿಂದ 30 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಕಾಲೇಜು, ಹಾಸ್ಟಲ್‌ಗೆ ಮಂಜೂರಾತಿ ಪಡೆದಿದ್ದೇ ಎಂದು ರೇವಣ್ಣ ಹೇಳಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ದ್ವೇಷದ ರಾಜಕಾರಣ ಮಾಡುತ್ತಿದೆ. ಹಾಸನ ಒಕ್ಕೂಟದಿಂದ ಚಿಕ್ಕಮಗಳೂರನ್ನು ಬೇರ್ಪಡಿಸಿದರು ಅದಕ್ಕೆ ನನ್ನ ವಿರೋಧವಿಲ್ಲ,
ದೇವೇಗೌಡರು ಈ ಹಿಂದೆ ಪ್ರಧಾನಿಯಾಗಲು ಚಿಕ್ಕಮಗಳೂರು ಜನತೆಯ ಕೊಡುಗೆಯೂ ಇದೆ ಎಂದು ರೇವಣ್ಣ ಸ್ಮರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ