ಆ್ಯಪ್ನಗರ

ಸುಮಲತಾ, ಗುರು ಕುಟುಂಬದವರಿಗೆ ಬಿಎಸ್ಪಿ ಆಹ್ವಾನ

ವಿಕ ಸುದ್ದಿಲೋಕ ಮಂಡ್ಯ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದು, ಸುಮಲತಾ ಅಂಬರೀಷ್‌ ಅಥವಾ ಹುತಾತ್ಮ ಯೋಧ ಗುರು ಕುಟುಂಬದವರು ...

Vijaya Karnataka 9 Mar 2019, 5:00 am
ಮಂಡ್ಯ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದು, ಸುಮಲತಾ ಅಂಬರೀಷ್‌ ಅಥವಾ ಹುತಾತ್ಮ ಯೋಧ ಗುರು ಕುಟುಂಬದವರು ಪಕ್ಷದಿಂದ ಸ್ಪರ್ಧಿಸಲು ಆಹ್ವಾನ ನೀಡಲಾಗುತ್ತಿದೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಹೇಳಿದರು.
Vijaya Karnataka Web bsp party invitation for sumalatha and martyred soldiers guru family
ಸುಮಲತಾ, ಗುರು ಕುಟುಂಬದವರಿಗೆ ಬಿಎಸ್ಪಿ ಆಹ್ವಾನ


''ಬಿಎಸ್ಪಿ ಲೋಕಸಭೆ ಚುನಾವಣೆಯಲ್ಲಿ ಜೆæಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಈ ಪೈಕಿ ಮಂಡ್ಯ ಸೇರಿದಂತೆ ಆರು ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಂಡ್ಯದಿಂದ ಸುಮಲತಾ ಮತ್ತು ಗುರು ಕುಟುಂಬದವರಿಗೆ ಆಹ್ವಾನಿಸಲಾಗುತ್ತಿದೆ. ಅಂತಿಮ ನಿರ್ಧಾರ ಅವರಿಗೆ ಬಿಟ್ಟದ್ದು,''ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ಚುನಾವಣಾ ದೃಷ್ಟಿಯಿಂದ ಈಗಾಗಲೇ ಗ್ರಾಮ ಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗಿದ್ದು, ಕಾರ‍್ಯಕರ್ತರನ್ನು ಸಜ್ಜುಗೊಳಿಸಲಾಗಿದೆ. ಅಂತೆಯೇ, ಮಂಡ್ಯ ಕ್ಷೇತ್ರದಲ್ಲಿ ನಾವು ಕೂಡ ಪ್ರಬಲ ಪೈಪೋಟಿ ನೀಡುತ್ತೇವೆ,''ಎಂದರು. ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ‍್ಯದರ್ಶಿ ಎಂ.ಕೃಷ್ಣಮೂರ್ತಿ, ವಿಭಾಗೀಯ ಉಸ್ತುವಾರಿ ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ನಲ್ಲಹಳ್ಳಿ ಸುರೇಶ್‌, ಖಜಾಂಚಿ ಶಿವಶಂಕರ್‌, ಮುಖಂಡರಾದ ವೆಂಕಟೇಶ್‌, ಅಭಿಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ