Please enable javascript.Mandya,ಮಂಡ್ಯ: ಅಧಿಕಾರಿಗಳ ಭ್ರಷ್ಟಾಚಾರ, ನಾಲೆಯ, ಕೇರಿ ಒಡೆದು ರೈತರ ಕೃಷಿ ನಾಶ - canal damaged in mandya farmers face problem - Vijay Karnataka

ಮಂಡ್ಯ: ಅಧಿಕಾರಿಗಳ ಭ್ರಷ್ಟಾಚಾರ, ನಾಲೆಯ, ಕೇರಿ ಒಡೆದು ರೈತರ ಕೃಷಿ ನಾಶ

Vijaya Karnataka Web 3 Aug 2021, 5:22 pm
Embed
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಾಲೆಯ ಹೂಳೆತ್ತಿಸುವ ಕಾರ್ಯದಲ್ಲಿ ಅ ಧಿಕಾರಿಗಳ ಭ್ರಷ್ಟಾಚಾರದಿಂದ ನಾಲೆ ಏರಿ ಒಡೆದು ರೈತರ ಬೆಳೆ ನಾಶವಾದ ಘಟನೆ ಮಂಡ್ಯದ ಜಿಲ್ಲೆಯ KR ಪೇಟೆ ತಾಲೂಕಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ KRಪೇಟೆ ತಾಲೂಕಿನ P.D.G ಕೊಪ್ಪಲು ಗ್ರಾಮದ ಸಮೀಪ ನಾಲೆಯ ಏರಿ ಒಡೆದಿದ್ದು, ನಾಲೆಬಳಿಯ ರೈತರ ಜಮೀನಿಗೆ ನೀರು ನುಗ್ಗಿ ರೈತರು ಕಷ್ಟ ಪ ಟ್ಟು ಬೆಳೆದಿದ್ದ ಬೆಳೆ ನಾಲೆ ನೀರಿನಿಂದ ನಾಶವಾಗಿದೆ ,ನಾಲೆ ಬದಿಯ ಹಲವು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದು ಊರಿನ ಜನರಿಗೂ ಸಮಸ್ಯೆಯಾಗಿದೆ. ಇದ್ರಿಂದ ರೈ ತರಿಗೆ ಬೆಳೆ ನಷ್ಟವಾಗಿದ್ದು ಪರಿಹಾರ ಕೊಡುವಂತೆ ರೈತ್ರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇನ್ನು ಈ ಘಟನೆಗೆ ನೀರಾವರಿ ಇಲಾಖೆಯ ಎಂಜಿನಿಯ ರ್ ಹೊಳ್ಳೆತ್ತುವಲ್ಲಿ ಮಾಡಿರುವ ಅಕ್ರಮವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೀರಾವರಿ ಇಲಾಖೆಅಧಿಕಾರಿಗಳು ನಾಲೆ ಹೂಳೆತ್ತಿಸದೆ ಬಂದ ಅನುದಾನದ ಲ್ಲಿ ಭ್ರಷ್ಟಾಚಾರ ನಡೆಸಿ ಸುಳ್ಳು ಮತ್ತು ಕಳಪೆ ಕಾಮಗಾರಿ ಮಾಡಿಸಿದ್ರು.ಇದರಿಂದ ನಾಲೆ ಏರಿ ಒಡೆದು ಇದೀಗ ರೈತ ರು ಸೇರಿದಂತೆ ಜನರಿಗೆ ತೊಂದರೆಯಾಗಿದೆ. ಇದೆಕ್ಕೆ ನೀರಾವರಿ ಇಲಾಖೆ ಇಂಜಿನಿಯರ್ ರವರ ನಿರ್ಲಕ್ಷ್ಯ ಕಾರಣ ಅಂತಾ ಅಸಮಧಾನ ವ್ಯಕ್ತಪಡಿಸಿದ್ದಾರೆ.