ಕಾವೇರಿ ವಿವಾದ: ಬ್ರಿಟಿಷರ ಕಾಲದಿಂದಲೂ ಅನ್ಯಾಯ
ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಯಿತು. ಹಾಗಾಗಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಯಿತೆಂದು ಕಾವೇರಿ ಜಲ ಸಂರಕ್ಷ ಣಾ ಹೋರಾಟಗಾರ ಅರ್ಜುನಹಳ್ಳಿ ಪ್ರಸನ್ನ ವಿಷಾದಿಸಿದರು.
Vijaya Karnataka 15 Jul 2019, 5:00 am
ಮಂಡ್ಯ : ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಯಿತು. ಹಾಗಾಗಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಯಿತೆಂದು ಕಾವೇರಿ ಜಲ ಸಂರಕ್ಷ ಣಾ ಹೋರಾಟಗಾರ ಅರ್ಜುನಹಳ್ಳಿ ಪ್ರಸನ್ನ ವಿಷಾದಿಸಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಡೆದ ಕಾವೇರಿ ಕಗ್ಗಂಟು ಪರಿಹಾರದ ದಾರಿ ಕುರಿತ ಮುಕ್ತ ಸಂವಾದದಲ್ಲಿ ಮಾತನಾಡಿದರು.
ತಮಿಳುನಾಡಿಗೆ ಕೇವಲ ಕೆಆರ್ಎಸ್ ಆಣೆಕಟ್ಟೆಯಿಂದ ನೀರು ಹರಿಸಲು ಇದ್ದ ಒಪ್ಪಂದವನ್ನು 1991ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಕರಣದ ಮೂಲಕ ಕಾವೇರಿ ಕಣಿವೆಯ ಎಲ್ಲಾ ಜಲ ಮೂಲದ ನೀರನ್ನು ತಮಿಳುನಾಡಿಗೆ ಹರಿಸುವಂತೆ ತೀರ್ಪು ನೀಡಿತ್ತು. ಕಾವೇರಿ ಹೋರಾಟವನ್ನು ರಾಜರ ಆಡಳಿತ, ಬ್ರಿಟಿಷ್ ಸರ್ಕಾರ ಮತ್ತು ಸ್ವಾತಂತ್ರ್ಯ ನಂತರದ ಆಡಳಿತ ಹೀಗೆ ಮೂರು ಹಂತದಲ್ಲಿ ನೋಡಬಹುದಾಗಿದೆ ಎಂದರು.
ಕಾವೇರಿ ವಿವಾದಕ್ಕೆ ಶತಮಾನಗಳ ಇತಿಹಾಸ: 13ನೇ ಶತಮಾನದ ಕೇಶಿರಾಜನ ಶಬ್ದಮಣಿದರ್ಪಣದಲ್ಲಿ ತಿಳಿಸಿರುವ ಭಾಗವಾಗಿ ನೋಡಿದರೆ, ರಾಜ್ಯದಲ್ಲಿ ನೀರಿನ ಅಭಾವದಿಂದ ಕಾವೇರಿ ನದಿಯಲ್ಲಿ ನಡುಗಡ್ಡೆ ನಿರ್ಮಿಸಲಾಗುತ್ತಿತ್ತು. ಅದನ್ನು ತಮಿಳುನಾಡಿನ ಅರಸರು ರಾತ್ರೋ-ರಾತ್ರಿ ಬಂದು ಕಟ್ಟೆ ಒಡೆದು ಹಾಕಿ ನೀರು ಹರಿಸಿಕೊಂಡು ಹೋಗುತ್ತಿದ್ದರು ಎಂಬುದನ್ನು ತಿಳಿಸಲಾಗಿದೆ. ಆನಂತರ ವಿಜಯನಗರ ಅರಸರು ನೀರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕ್ರಮೇಣ ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಆದ್ಯತೆ ನೀಡಿದ ಪರಿಣಾಮ ಕಾವೇರಿ ನೀರನ್ನು ಹೆಚ್ಚು ಹರಿಸಲಾಗುತ್ತದೆ ಎಂದು ವಿವರಿಸಿದರು.
1890ರ ಬ್ರಿಟಿಷರ ಅವಧಿಯಲ್ಲಿ ಕಾವೇರಿ ನದಿಗೆ ಯಾವುದೇ ಕೆರೆ-ಕಟ್ಟೆ ನಿರ್ಮಾಣ ಮಾಡಲು ಮದ್ರಾಸ್ ಸರಕಾರದ ಅನುಮತಿ ಪಡೆಯುವಂತೆ ಆದೇಶ ನೀಡಿತು. ಅಲ್ಲಿಂದ ಕಾವೇರಿ ವಿವಾದ ಗಂಭೀರ ಸ್ವರೂಪ ಪಡೆಯಿತು. 1911ರಲ್ಲಿ ಕೋಲಾರದ ಬಂಗಾರದ ಗಣಿಗೆ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ ಕೆಆರ್ಎಸ್ ಆಣೆಕಟ್ಟೆ ನಿರ್ಮಾಣ ಮಾಡುವಂತೆ ಬ್ರಿಟಿಷ್ ಅಧಿಕಾರಿ ಅನುಮತಿ ನೀಡುತ್ತಾರೆ. ಆಗಲೂ ತಮಿಳುನಾಡು ಕ್ಯಾತೆ ತೆಗೆದಿದ್ದರಿಂದ ಕಾವೇರಿ ನ್ಯಾಯಾಧೀಕರಣ ರಚನೆ ಮಾಡಲಾಯಿತು ಎಂದು ತಿಳಿಸಿದರು.
1991ರಲ್ಲಿ ಸ್ವಾತಂತ್ರ್ಯ ನಂತರ ಸುಪ್ರೀಂಕೋರ್ಟ್ ನ್ಯಾಯಾಧೀಕರಣ ರಚನೆ ಮಾಡಲಾಗುತ್ತದೆ. ಈ ಮೂಲಕ ಕೇವಲ ಕೆಆರ್ಎಸ್ನಿಂದ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ಇದ್ದ ಒಪ್ಪಂದವನ್ನು ತಿದ್ದುಪಡಿ ಮಾಡಲಾಯಿತು. ಇದರಲ್ಲಿ ಕಾವೇರಿ ನದಿ ಸೇರುವ ಉಪನದಿ, ಕೆರೆ, ತೊರೆ, ಹಳ್ಳ ಹಾಗೂ ಅಂತರ್ಜಲದ ಎಲ್ಲ ನೀರು ಕಾವೇರಿ ನ್ಯಾಯಾಧೀಕರಣಕ್ಕೆ ಸೇರಿದೆ ಎಂದು ತೀರ್ಪು ಹೊರಡಿಸಲಾಗಿತ್ತು. ಇದರಿಂದ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜೀವ್ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ಕಾವೇರಿ ನೀರಿಗಾಗಿ ಪ್ರತಿಭಟನೆ ಮಾಡುವುದರ ಜತೆಗೆ ಕಾನೂನಾತ್ಮಕ ಹೋರಾಟಕ್ಕೆ ಬೇಕಾದ ಅಂಕಿ ಅಂಶ ಸಂಗ್ರಹ ಮಾಡಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ವಿಚಾರ ಬಂದಾಗ ಮಾತ್ರ ಮಂಡ್ಯ ಜಿಲ್ಲೆ ಹೋರಾಟ ಮಾಡುತ್ತದೆ. ಕಾವೇರಿ ಹೋರಾಟದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಭಾಗವಹಿಸುವ ಮನೋಭಾವ ಬೇಕು ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪೊ›.ಬಿ.ಜಯಪ್ರಕಾಶಗೌಡ, ಸಾಹಿತಿ ಹುಲ್ಕೆರೆ ಮಹದೇವು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ಮೋಹನ್ಕುಮಾರ್, ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಕೀಲಾರ ಕೃಷ್ಣ, ರಮೇಶ್ಗೌಡ, ಕಲ್ಲನಾ ಶಿವಣ್ಣ, ಎಂ.ಶಿವಕುಮಾರ್ ಇತರರು ಭಾಗವಹಿಸಿದ್ದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಡೆದ ಕಾವೇರಿ ಕಗ್ಗಂಟು ಪರಿಹಾರದ ದಾರಿ ಕುರಿತ ಮುಕ್ತ ಸಂವಾದದಲ್ಲಿ ಮಾತನಾಡಿದರು.
ತಮಿಳುನಾಡಿಗೆ ಕೇವಲ ಕೆಆರ್ಎಸ್ ಆಣೆಕಟ್ಟೆಯಿಂದ ನೀರು ಹರಿಸಲು ಇದ್ದ ಒಪ್ಪಂದವನ್ನು 1991ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಕರಣದ ಮೂಲಕ ಕಾವೇರಿ ಕಣಿವೆಯ ಎಲ್ಲಾ ಜಲ ಮೂಲದ ನೀರನ್ನು ತಮಿಳುನಾಡಿಗೆ ಹರಿಸುವಂತೆ ತೀರ್ಪು ನೀಡಿತ್ತು. ಕಾವೇರಿ ಹೋರಾಟವನ್ನು ರಾಜರ ಆಡಳಿತ, ಬ್ರಿಟಿಷ್ ಸರ್ಕಾರ ಮತ್ತು ಸ್ವಾತಂತ್ರ್ಯ ನಂತರದ ಆಡಳಿತ ಹೀಗೆ ಮೂರು ಹಂತದಲ್ಲಿ ನೋಡಬಹುದಾಗಿದೆ ಎಂದರು.
ಕಾವೇರಿ ವಿವಾದಕ್ಕೆ ಶತಮಾನಗಳ ಇತಿಹಾಸ: 13ನೇ ಶತಮಾನದ ಕೇಶಿರಾಜನ ಶಬ್ದಮಣಿದರ್ಪಣದಲ್ಲಿ ತಿಳಿಸಿರುವ ಭಾಗವಾಗಿ ನೋಡಿದರೆ, ರಾಜ್ಯದಲ್ಲಿ ನೀರಿನ ಅಭಾವದಿಂದ ಕಾವೇರಿ ನದಿಯಲ್ಲಿ ನಡುಗಡ್ಡೆ ನಿರ್ಮಿಸಲಾಗುತ್ತಿತ್ತು. ಅದನ್ನು ತಮಿಳುನಾಡಿನ ಅರಸರು ರಾತ್ರೋ-ರಾತ್ರಿ ಬಂದು ಕಟ್ಟೆ ಒಡೆದು ಹಾಕಿ ನೀರು ಹರಿಸಿಕೊಂಡು ಹೋಗುತ್ತಿದ್ದರು ಎಂಬುದನ್ನು ತಿಳಿಸಲಾಗಿದೆ. ಆನಂತರ ವಿಜಯನಗರ ಅರಸರು ನೀರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕ್ರಮೇಣ ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಆದ್ಯತೆ ನೀಡಿದ ಪರಿಣಾಮ ಕಾವೇರಿ ನೀರನ್ನು ಹೆಚ್ಚು ಹರಿಸಲಾಗುತ್ತದೆ ಎಂದು ವಿವರಿಸಿದರು.
1890ರ ಬ್ರಿಟಿಷರ ಅವಧಿಯಲ್ಲಿ ಕಾವೇರಿ ನದಿಗೆ ಯಾವುದೇ ಕೆರೆ-ಕಟ್ಟೆ ನಿರ್ಮಾಣ ಮಾಡಲು ಮದ್ರಾಸ್ ಸರಕಾರದ ಅನುಮತಿ ಪಡೆಯುವಂತೆ ಆದೇಶ ನೀಡಿತು. ಅಲ್ಲಿಂದ ಕಾವೇರಿ ವಿವಾದ ಗಂಭೀರ ಸ್ವರೂಪ ಪಡೆಯಿತು. 1911ರಲ್ಲಿ ಕೋಲಾರದ ಬಂಗಾರದ ಗಣಿಗೆ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ ಕೆಆರ್ಎಸ್ ಆಣೆಕಟ್ಟೆ ನಿರ್ಮಾಣ ಮಾಡುವಂತೆ ಬ್ರಿಟಿಷ್ ಅಧಿಕಾರಿ ಅನುಮತಿ ನೀಡುತ್ತಾರೆ. ಆಗಲೂ ತಮಿಳುನಾಡು ಕ್ಯಾತೆ ತೆಗೆದಿದ್ದರಿಂದ ಕಾವೇರಿ ನ್ಯಾಯಾಧೀಕರಣ ರಚನೆ ಮಾಡಲಾಯಿತು ಎಂದು ತಿಳಿಸಿದರು.
1991ರಲ್ಲಿ ಸ್ವಾತಂತ್ರ್ಯ ನಂತರ ಸುಪ್ರೀಂಕೋರ್ಟ್ ನ್ಯಾಯಾಧೀಕರಣ ರಚನೆ ಮಾಡಲಾಗುತ್ತದೆ. ಈ ಮೂಲಕ ಕೇವಲ ಕೆಆರ್ಎಸ್ನಿಂದ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ಇದ್ದ ಒಪ್ಪಂದವನ್ನು ತಿದ್ದುಪಡಿ ಮಾಡಲಾಯಿತು. ಇದರಲ್ಲಿ ಕಾವೇರಿ ನದಿ ಸೇರುವ ಉಪನದಿ, ಕೆರೆ, ತೊರೆ, ಹಳ್ಳ ಹಾಗೂ ಅಂತರ್ಜಲದ ಎಲ್ಲ ನೀರು ಕಾವೇರಿ ನ್ಯಾಯಾಧೀಕರಣಕ್ಕೆ ಸೇರಿದೆ ಎಂದು ತೀರ್ಪು ಹೊರಡಿಸಲಾಗಿತ್ತು. ಇದರಿಂದ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜೀವ್ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ಕಾವೇರಿ ನೀರಿಗಾಗಿ ಪ್ರತಿಭಟನೆ ಮಾಡುವುದರ ಜತೆಗೆ ಕಾನೂನಾತ್ಮಕ ಹೋರಾಟಕ್ಕೆ ಬೇಕಾದ ಅಂಕಿ ಅಂಶ ಸಂಗ್ರಹ ಮಾಡಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ವಿಚಾರ ಬಂದಾಗ ಮಾತ್ರ ಮಂಡ್ಯ ಜಿಲ್ಲೆ ಹೋರಾಟ ಮಾಡುತ್ತದೆ. ಕಾವೇರಿ ಹೋರಾಟದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಭಾಗವಹಿಸುವ ಮನೋಭಾವ ಬೇಕು ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪೊ›.ಬಿ.ಜಯಪ್ರಕಾಶಗೌಡ, ಸಾಹಿತಿ ಹುಲ್ಕೆರೆ ಮಹದೇವು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ಮೋಹನ್ಕುಮಾರ್, ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಕೀಲಾರ ಕೃಷ್ಣ, ರಮೇಶ್ಗೌಡ, ಕಲ್ಲನಾ ಶಿವಣ್ಣ, ಎಂ.ಶಿವಕುಮಾರ್ ಇತರರು ಭಾಗವಹಿಸಿದ್ದರು.