ಬೃಂದಾವನದಲ್ಲಿ ಕಾವೇರಿ ರಥೋತ್ಸವ
ತಲಕಾವೇರಿಯಲ್ಲಿ ನಡೆಯುವ ಕಾವೇರಿ ತೀರ್ಥೋದ್ಬವದ ಹಿನ್ನೆಲೆಯಲ್ಲಿ ತಾಲೂಕಿನ ಕೆಆರ್ಎಸ್ ಬೃಂದಾವನದಲ್ಲಿ ಗುರುವಾರ ಕಾವೇರಿ ಮಾತೆಯ ರಥೋತ್ಸವ ಜರುಗಿತು.
Vijaya Karnataka 20 Oct 2018, 5:00 am
ಶ್ರೀರಂಗಪಟ್ಟಣ: ತಲಕಾವೇರಿಯಲ್ಲಿ ನಡೆಯುವ ಕಾವೇರಿ ತೀರ್ಥೋದ್ಬವದ ಹಿನ್ನೆಲೆಯಲ್ಲಿ ತಾಲೂಕಿನ ಕೆಆರ್ಎಸ್ ಬೃಂದಾವನದಲ್ಲಿ ಗುರುವಾರ ಕಾವೇರಿ ಮಾತೆಯ ರಥೋತ್ಸವ ಜರುಗಿತು.
ಜಲಾಶಯದ ಅಣೆಕಟ್ಟೆಬಳಿ ಇರುವ ಕಾವೇರಿ ಮಾತೆ ದೇವಾಲಯದಲ್ಲಿ ಜ್ಯೋತಿಷಿ ಡಾ. ಭಾನು ಪ್ರಕಾಶ್ ಶರ್ಮ ಕಾವೇರಿ ಪ್ರತಿಮೆಗೆ ವಿಶೇಷ ಅಲಂಕಾರ, ಅಭಿಷೇಕ ನಾನಾ ಪೂಜೆಗಳನ್ನು ನೆರವೇರಿದಿದರು. ಮಹಾಮಂಗಳಾರತಿ ನಡೆಯಿತು. ನಂತರ ಸರ್ವಾಲಂಕೃತ ರಥದ ಮೇಲೆ ಕಾವೇರಿ ಉತ್ಸವ ಮೂರ್ತಿ ಕೂರಿಸಿಲಾಯಿತು. ರಥೋತ್ಸವಕ್ಕೆ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ಚಾಲನೆ ನೀಡಿದರು. ಕೆಆರ್ಎಸ್ ಗ್ರಾಮಸ್ಥರು ಹಾಗೂ ಕಾವೇರಿ ನೀರಾವರಿ ಇಲಾಖೆ ಸಿಬ್ಬಂದಿ ರಥ ಎಳೆದರು. ಭಕ್ತರು ಪೂಜೆ ಸಲ್ಲಿಸಿದರು. ಪ್ರಸಾದ ವಿತರಣೆ ಮಾಡಲಾಯಿತು. ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು. ರಾತ್ರಿ ತೆಪೊ್ಪೕತ್ಸವ ನಡೆಯಿತು.
ಜಲಾಶಯದ ಅಣೆಕಟ್ಟೆಬಳಿ ಇರುವ ಕಾವೇರಿ ಮಾತೆ ದೇವಾಲಯದಲ್ಲಿ ಜ್ಯೋತಿಷಿ ಡಾ. ಭಾನು ಪ್ರಕಾಶ್ ಶರ್ಮ ಕಾವೇರಿ ಪ್ರತಿಮೆಗೆ ವಿಶೇಷ ಅಲಂಕಾರ, ಅಭಿಷೇಕ ನಾನಾ ಪೂಜೆಗಳನ್ನು ನೆರವೇರಿದಿದರು. ಮಹಾಮಂಗಳಾರತಿ ನಡೆಯಿತು. ನಂತರ ಸರ್ವಾಲಂಕೃತ ರಥದ ಮೇಲೆ ಕಾವೇರಿ ಉತ್ಸವ ಮೂರ್ತಿ ಕೂರಿಸಿಲಾಯಿತು. ರಥೋತ್ಸವಕ್ಕೆ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ಚಾಲನೆ ನೀಡಿದರು. ಕೆಆರ್ಎಸ್ ಗ್ರಾಮಸ್ಥರು ಹಾಗೂ ಕಾವೇರಿ ನೀರಾವರಿ ಇಲಾಖೆ ಸಿಬ್ಬಂದಿ ರಥ ಎಳೆದರು. ಭಕ್ತರು ಪೂಜೆ ಸಲ್ಲಿಸಿದರು. ಪ್ರಸಾದ ವಿತರಣೆ ಮಾಡಲಾಯಿತು. ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು. ರಾತ್ರಿ ತೆಪೊ್ಪೕತ್ಸವ ನಡೆಯಿತು.