ಆ್ಯಪ್ನಗರ

ಶಾಂತಿಯುತವಾಗಿ ಯಾತ್ರೆ, ಹಬ್ಬ ಆಚರಿಸಿ

ಹಿಂದೂ ಜಾಗರಣ ವೇದಿಕೆ ಕಾರ‌್ಯಕರ್ತರ ಸಂಕೀರ್ತನ ಯಾತ್ರೆ ಹಾಗೂ ಮುಸ್ಲಿಂ ಸಮುದಾಯದ ಈದ್ ಮಿಲಾದ್ ಹಬ್ಬಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಪಿಎಸ್‌ಐ ಬ್ಯಾಟರಾಯಗೌಡ ಸಲಹೆ ನೀಡಿದರು.

Vijaya Karnataka 30 Nov 2017, 5:15 am
ಶ್ರೀರಂಗಪಟ್ಟಣ: ಹಿಂದೂ ಜಾಗರಣ ವೇದಿಕೆ ಕಾರ‌್ಯಕರ್ತರ ಸಂಕೀರ್ತನ ಯಾತ್ರೆ ಹಾಗೂ ಮುಸ್ಲಿಂ ಸಮುದಾಯದ ಈದ್ ಮಿಲಾದ್ ಹಬ್ಬಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಪಿಎಸ್‌ಐ ಬ್ಯಾಟರಾಯಗೌಡ ಸಲಹೆ ನೀಡಿದರು.
Vijaya Karnataka Web celebrate yatra and festivities peacefully
ಶಾಂತಿಯುತವಾಗಿ ಯಾತ್ರೆ, ಹಬ್ಬ ಆಚರಿಸಿ


ಡಿ.1ರಂದು ಶ್ರೀರಂಗಪಟ್ಟಣದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆ ಹಾಗೂ ಡಿ.2ರಂದು ನಡೆಯುವ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಹಿಂದೂ, ಮುಸ್ಲಿಂ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದರು.

ಹನುಮ ಮಾಲೆ ಧರಿಸಿರುವ ಹಿಂದೂ ಜಾಗರಣ ವೇದಿಕೆ ಕಾರ‌್ಯಕರ್ತರು ಡಿ.1ರಂದು ಪಟ್ಟಣದಲ್ಲಿ ನಡೆಯುವ ಸಂಕೀರ್ತನ ಯಾತ್ರೆಗಳಲ್ಲಿ ಶಾಂತಿಯುತವಾಗಿ ಭಾಗವಹಿಸಬೇಕು. ಮುಸ್ಲಿಂ ಯುವಕರು ಈದ್‌ಮಿಲಾದ್ ಹಬ್ಬದಲ್ಲಿ ರಸ್ತೆಗಳಲ್ಲಿ ಕುಣಿದು ಕುಪ್ಪಳಿಸುವುದು, ಬೈಕ್‌ನಲ್ಲಿ ಮೂವರು ಕುಳಿತು ಸಂಚಾರ ಮಾಡುವುದು. ಕಾನೂನು ಉಲ್ಲಂಘನೆಯಾಗುವ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವ ಮೂಲ ಸಹಕರಿಸಬೇಕು. ಕಾನೂನು ಉಲ್ಲಂಘಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದೂ ಜಾಗರಣ ವೇದಿಕೆ ಬಸವರಾಜು, ಅಭಿ, ಹರೀಶ್, ರಮೇಶ್, ಮುಸ್ಲಿಂ ಮುಖಂಡರಾದ ನಾಜೀರ್ ಅಹಮದ್, ಏಜಾಜ್, ಅಮ್ಜದ್ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ