ಆ್ಯಪ್ನಗರ

ಯೋಧರ ಹನಿ ರಕ್ತಕ್ಕೂ ಕೇಂದ್ರ ಪ್ರತೀಕಾರ ತೆಗೆದುಕೊಳ್ಳಲಿದೆ: ಸದಾನಂದಗೌಡ

ಬಡ ಕುಟುಂಬದಿಂದ ಬಂದವರು ಗುರು. ದೇಶ ಪ್ರೇಮದ ಬಗ್ಗೆ ಗುರು ಕುಟುಂಬದವರಿಂದ ಕಲಿಯಬೇಕು. ಅವರ ಕುಟುಂಬಕ್ಕೆ ನೆರವಾಗುವ ಹೆಜ್ಜೆಯನ್ನ ಪ್ರಧಾನಿ ಇಟ್ಟಿದ್ದಾರೆ. ಇಡೀ ದೇಶದ ಸವಾಲು. ಆ ಸವಾಲನ್ನು ಸ್ವೀಕಾರ ಮಾಡ್ತೇವೆ. ನಾವೆಲ್ಲರೂ ಗುರು ಹೆಸರಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಬೇಕಿದೆ.

Vijaya Karnataka Web 16 Feb 2019, 6:55 pm
Vijaya Karnataka Web ಸದಾನಂದಗೌಡ, ಪ್ರತಾಪ್‌, ಶೋಭಾ ಕರಂದ್ಲಾಜೆ
ಸದಾನಂದಗೌಡ, ಪ್ರತಾಪ್‌, ಶೋಭಾ ಕರಂದ್ಲಾಜೆ
ಮಂಡ್ಯ: ಜಮ್ಮು ಕಾಶ್ಮೀರದಲ್ಲಿ ನಡೆದಿರುವ ದಾಳಿ ದೊಡ್ಡ ಮಟ್ಟದ್ದಾಗಿದೆ. ಇದುವರೆಗೂ ಇಂತಹ ದಾಳಿ ನಡೆದಿಲ್ಲ. ಆದರೆ ಕೇಂದ್ರ ಸರಕಾರ ಯೋಧರ ಹನಿ ರಕ್ತಕ್ಕೂ ಪ್ರತೀಕಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.


ಮೃತ ಗುರು ಅವರ ಪತ್ನಿ, ತಮ್ಮಂದಿರಿಗೆ ಸರಕಾರಿ ಕೆಲಸ ನೀಡಬೇಕು. ಅಲ್ಲದೆ ಕೇಂದ್ರ ಸರಕಾರ ಉಗ್ರರ ಧಮನ ಮಾಡಲು ಮುಂದಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. ಸಂಸದ ಪ್ರತಾಪ್ ಸಿಂಹ ಪಾಲ್ಗೊಂಡು ಸಂತಾಪ ಸೂಚಿಸಿದರು.

ಇದು ಅತ್ಯಂತ ದುಃಖದ ಕ್ಷಣ. ಭಯೋತ್ಪಾದಕ ಚಟುವಟಿಕೆಯಲ್ಲಿ ಹಲವು ಯೋಧರ ದುರ್ಮರಣ, ಹಲವರು ಗಂಭೀರ ಗಾಯವಾಗಿದ್ದಾರೆ. ಯೋಧರ ಆತ್ಮಕ್ಕೆ ಶಾಂತಿ ಸಿಗುವ ರೀತಿಯಲ್ಲಿ ಪ್ರಧಾನಿಯವರು ಗಂಭೀರ ಚಿಂತನೆ ಮಾಡಿದ್ದಾರೆ. ಪ್ರಧಾನಿ ನಿಲುವು ದೇಶದ ಎಲ್ಲರ ನಿಲುವು. ನಾವೆಲ್ಲರೂ ಅವರ ಜೊತೆ ಇರ್ತೀವಿ ಎಂದರು.

ಬಡ ಕುಟುಂಬದಿಂದ ಬಂದವರು ಗುರು. ದೇಶ ಪ್ರೇಮದ ಬಗ್ಗೆ ಗುರು ಕುಟುಂಬದವರಿಂದ ಕಲಿಯಬೇಕು. ಅವರ ಕುಟುಂಬಕ್ಕೆ ನೆರವಾಗುವ ಹೆಜ್ಜೆಯನ್ನ ಪ್ರಧಾನಿ ಇಟ್ಟಿದ್ದಾರೆ. ಇಡೀ ದೇಶದ ಸವಾಲು. ಆ ಸವಾಲನ್ನು ಸ್ವೀಕಾರ ಮಾಡ್ತೇವೆ. ನಾವೆಲ್ಲರೂ ಗುರು ಹೆಸರಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಬೇಕಿದೆ ಎಂದು ಸದಾನಂದ ಗೌಡ ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪಾಕಿಸ್ತಾನಕ್ಕೆ ನೇರವಾಗಿ ಯುದ್ಧ ಮಾಡಲು ಆಗಲ್ಲ. ಹೀಗಾಗಿ ಹಣ ಕೊಟ್ಟು ಈ ರೀತಿ ಕೃತ್ಯ ಮಾಡ್ತಿದೆ. ನೇರವಾಗಿ ಉತ್ತರ ಕೊಡುವ ಕಾಲ ಸನಿಹವಾಗಿದೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಮತ್ತೆ ತಕ್ಕ ಪಾಠ ಕಲಿಸ್ತೇವೆ ಎಂದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕುಟುಂಬಕ್ಕೆ ಸರಕಾರ ನೆರವಾಗಬೇಕು. ಪಾಕಿಸ್ತಾನ ಮಟ್ಟ ಹಾಕುವ ಶಕ್ತಿ ಭಾರತಕ್ಕಿದೆ. ಪ್ರಪಂಚದ ಎಲ್ಲಾ ದೇಶಗಳು ಭಾರತಕ್ಕೆ ಶಕ್ತಿ ತುಂಬಬೇಕು. ಆಗ ಮಾತ್ರ ಭಯೋತ್ಪಾದನೆ ಕಡಿವಾಣ ಸಾಧ್ಯ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ