ಆ್ಯಪ್ನಗರ

ಜಮೀನಿನಲ್ಲಿ ವಿದ್ಯುತ್‌ ತಂತಿ ತುಳಿದು ರೈತ ಸಾವು

ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ ವಿಕ ಸುದ್ದಿಲೋಕ ಪಾಂಡವಪುರ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ತಾಲೂಕಿನ ಗಾಣದಹೊಸೂರು ಗ್ರಾಮದ ರೈತ ...

Vijaya Karnataka 13 Jul 2019, 5:00 am
ಪಾಂಡವಪುರ: ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ತಾಲೂಕಿನ ಗಾಣದಹೊಸೂರು ಗ್ರಾಮದ ರೈತ ಯೋಗೇಶ್‌ ಕುಟುಂಬಕ್ಕೆ ಸೆಸ್ಕ್‌ ಇಲಾಖೆ ವತಿಯಿಂದ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದ್ದು, ಅದರಲ್ಲಿ 2 ಲಕ್ಷ ರೂ.ನ ಚೆಕ್‌ನ್ನು ಮೃತರ ಕುಟುಂಬಕ್ಕೆ ವಿತರಿಸಲಾಯಿತು.
Vijaya Karnataka Web cesc officials paid composition to farmer family
ಜಮೀನಿನಲ್ಲಿ ವಿದ್ಯುತ್‌ ತಂತಿ ತುಳಿದು ರೈತ ಸಾವು


ಗುರುವಾರ ರಾತ್ರಿ ತಾಲೂಕಿನ ಗಾಣದಹೊಸೂರು ಗ್ರಾಮದ ಮೃತ ರೈತ ಯೋಗೇಶ್‌ ಮನೆಗೆ ತೆರಳಿದ ಜಿಪಂ ಸದಸ್ಯರಾದ ಸಿ.ಅಶೋಕ್‌, ತಿಮ್ಮೇಗೌಡ, ತಹಸೀಲ್ದಾರ್‌ ಪ್ರಮೋದ್‌ ಎಲ್‌.ಪಾಟೀಲ್‌, ಸೆಸ್ಕ್‌ ಇಇ ಸೋಮರಾಜ್‌, ಎಇಇ ಪುಟ್ಟಸ್ವಾಮಿ ಅವರು ಮೃತ ಯೋಗೇಶ್‌ ಕುಟುಂಬಕ್ಕೆ ಸಾಂತ್ವನ ಹೇಳಿ ಅವರ ಪತ್ನಿ ರೂಪ ಅವರಿಗೆ 2 ಲಕ್ಷ ರೂ.ಚೆಕ್‌ ನೀಡಿದರು.

ಬಳಿಕ ಮಾತನಾಡಿದ ಜಿಪಂ ಸದಸ್ಯ ಸಿ.ಅಶೋಕ್‌, ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತುಂಡಾಗಿ ಬಿದಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ರೈತ ಯೋಗೇಶ್‌ ಕುಟುಂಬಕ್ಕೆ ಸೆಸ್ಕ್‌ ಇಲಾಖೆ ವತಿಯಿಂದ 5 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ. ಸದ್ಯಕ್ಕೆ 2 ಲಕ್ಷ ರೂ. ಚೆಕ್‌ನ್ನು ಮೃತರ ಕುಟುಂಬಕ್ಕೆ ವಿತರಿಸಲಾಗುತ್ತಿದ್ದು, ಉಳಿದ ಬಾಕಿ 3 ಲಕ್ಷ ರೂ.ವನ್ನು ನಂತರ ನೀಡುವುದಾಗಿ ಸೆಸ್ಕ್‌ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಜಿಪಂ ಸದಸ್ಯ ಸೂಚನೆ: ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆ ವಿದ್ಯುತ್‌ ಕಂಬಗಳಲ್ಲಿ ವೈರ್‌ಗಳು ಜೋತುಬಿದ್ದಿವೆ. ಕೆಲವೆಡೆ ವಿದ್ಯುತ್‌ ಕಂಬಗಳು ಶಿಥಿಲಗೊಂಡಿವೆ ಎಂಬ ಹಲವು ದೂರುಗಳು ಸಾರ್ವಜನಿಕರಿಂದ ಬಂದಿದೆ. ಹಾಗಾಗಿ ಸೆಸ್ಕ್‌ ಅಧಿಕಾರಿಗಳು ಎಲ್ಲಾ ಜೆಇಗಳು, ಲೈನ್‌ಮೆನ್‌ಗಳ ತ್ವರಿತವಾಗಿ ಸಭೆ ನಡೆಸಿ ಜೋತುಬಿದ್ದಿರುವ ವಿದ್ಯುತ್‌ ವೈರ್‌ಗಳು, ಶಿಥಿಲಗೊಂಡಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳು, ತಂತಿಗಳನ್ನು ಹಾಕುವಂತೆ ಜಿಪಂ ಸದಸ್ಯ ಸಿ.ಅಶೋಕ್‌ ಸೆಸ್ಕ್‌ ಇಇ ಅವರಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ