ಆ್ಯಪ್ನಗರ

ಕಾಂಗ್ರೆಸ್‌ ನಾಯಕರಿಂದ ಪಕ್ಷಕ್ಕೆ ಮೋಸ: ಸುಮಲತಾ

ಸುಮಲತಾ -ಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ, ರೋಡ್‌ ಶೋ ವಿಕ ಸುದ್ದಿಲೋಕ ಮೇಲುಕೋಟೆ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನಟಿ ಸುಮಲತಾ ...

Vijaya Karnataka 15 Mar 2019, 5:00 am
-ಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ, ರೋಡ್‌ ಶೋ
Vijaya Karnataka Web cheat to congress by his own party leaders says sumalatha ambarish
ಕಾಂಗ್ರೆಸ್‌ ನಾಯಕರಿಂದ ಪಕ್ಷಕ್ಕೆ ಮೋಸ: ಸುಮಲತಾ

ಮೇಲುಕೋಟೆ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನಟಿ ಸುಮಲತಾ ಅಂಬರೀಶ್‌ ವೈರಮುಡಿ ಜಾತ್ರಾಮಹೋತ್ಸವದ ಮೊದಲ ದಿನ ಧ್ವಜಾರೋಹಣ ಕಾರ್ಯಕ್ರಮದಂದು ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದರು.

ಗುರುವಾರ ಮಧ್ಯಾಹ್ನ ಮೇಲುಕೋಟೆಗೆ ಆಗಮಿಸಿದ ಸುಮಲತಾ ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ನಡೆಸಿ, ಮತದಾರರ ಗಮನ ಸೆಳೆದರು. ಬಳಿಕ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿ ತಿರುನಾರಾಯಣ ಸ್ವಾಮಿ ಹಾಗೂ ಮಹಾಲಕ್ಷ್ಮೀ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್‌ ನನಗೆ ಮೋಸ ಮಾಡಿಲ್ಲ. ಆದರೆ ನಾಯಕರ ನಿರ್ಧಾರಗಳಿಂದ ಮಂಡ್ಯದಲ್ಲಿ ಪಕ್ಷ ಕ್ಕೆ ಮೋಸವಾಗುತ್ತಿದೆ. ಆದರೆ ನನ್ನ ಜತೆ ಮಂಡ್ಯದಲ್ಲಿ ಅಂಬಿ ಸಂಪಾದಿಸಿದ ಜನರ ಪ್ರೀತಿ ಇದೆ. ನನ್ನ ಬೆಂಬಲಕ್ಕೆ ಜನರಿದ್ದಾರೆ,''ಎಂದರು. ಸಚಿವ ಡಿ.ಸಿ ತಮ್ಮಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ''ಜೆಡಿಎಸ್‌ ಅಭ್ಯರ್ಥಿ ನನಗೆ ಆಹ್ವಾನ ನೀಡಿಲ್ಲ. ಆದರೆ ಅಂಬರೀಷ್‌ ಸಹೋದರನ ಪುತ್ರನನ್ನು ಸಂಪರ್ಕ ಮಾಡಿದ್ದರು,''ಎಂದರು.

ಸ್ವಾಗತ: ಮೇಲುಕೋಟೆಗೆ ಆಗಮಿಸಿದ ಸುಮಲತಾ ಅವರನ್ನು ಅಂಬರೀಶ್‌ ಅಭಿಮಾನಿಗಳು ಹಾಗೂ ರೈತ ಸಂಘ ಹಾಗೂ ಕಾಂಗ್ರೆಸ್‌ ಮುಖಂಡರು ಸ್ವಾಗತಿಸಿದರು.

''ಮಂಡ್ಯ ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರು ನಿಷ್ಠವಂತ ಕಾರ್ಯಕರ್ತರನ್ನು ನಿರ್ಲಕ್ಷ ್ಯ ಮಾಡಿದ್ದಾರೆ. ಮಂಡ್ಯದಲ್ಲಿ ನಡೆಯುವ ಬಹುತೇಕ ಚುನಾವಣೆ ಮತಗಳಿಕೆ ಶೇಕಡಾ ಪ್ರಮಾಣದಲ್ಲಿ ನಮ್ಮ ಪಕ್ಷ ವೇ ಮುಂದೆ ಇದೆ. ಆದರೆ ನಾಯಕರ ನಿರ್ಲಕ್ಷ ್ಯದಿಂದ ಇತರೆ ಪಕ್ಷ ಗಳು ಅನುಕೂಲ ಪಡೆಯುವಂತಾಗಿದೆ. ಈ ಬಗ್ಗೆ ಗಮನಹರಿಸಬೇಕು,'' ಎಂದು ಸ್ಥಳೀಯ ಕಾರ್ಯಕರ್ತರು ಪಕ್ಷ ದ ಮುಖಂಡರ ನಡವಳಿಕೆ ಕುರಿತು ಅಸಮಾಧಾನ ತೋಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ