ಆ್ಯಪ್ನಗರ

ಮಾಣಿಕ್ಯನಹಳ್ಳಿಯಲ್ಲಿ ಮಕ್ಕಳ ಮನೆ ಆರಂಭ

ವಿಕ ಸುದ್ದಿಲೋಕ ಮೇಲುಕೋಟೆ ಸರಕಾರಿ ಶಾಲೆ ಉಳಿಸಲು ಮೇಲುಕೋಟೆ ಹೋಬಳಿಯ ಮಾಣಿಕ್ಯನಹಳ್ಳಿ ನಿವಾಸಿಗಳು ಕಾನ್ವೆಂಟ್‌ಗೆ ಸೆಡ್ಡು ಹೊಡೆಯುವಂತೆ 'ಮಕ್ಕಳ ಮನೆ' ಆರಂಭಿಸಿದ್ದಾರೆ...

Vijaya Karnataka 13 Sep 2018, 5:00 am
ಮೇಲುಕೋಟೆ: ಸರಕಾರಿ ಶಾಲೆ ಉಳಿಸಲು ಮೇಲುಕೋಟೆ ಹೋಬಳಿಯ ಮಾಣಿಕ್ಯನಹಳ್ಳಿ ನಿವಾಸಿಗಳು ಕಾನ್ವೆಂಟ್‌ಗೆ ಸೆಡ್ಡು ಹೊಡೆಯುವಂತೆ 'ಮಕ್ಕಳ ಮನೆ' ಆರಂಭಿಸಿದ್ದಾರೆ. ಪರಸ್ಪರ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಆರಂಭವಾದ ಸರಕಾರಿ ಶಾಲೆಯ ಎಲ್‌.ಕೆ.ಜಿ, ಯು.ಕೆ.ಜಿ.ಯಲ್ಲಿ 20 ಮಕ್ಕಳು ದಾಖಲಾಗಿದ್ದಾರೆ.
Vijaya Karnataka Web childrens house begins in manikayanahalli
ಮಾಣಿಕ್ಯನಹಳ್ಳಿಯಲ್ಲಿ ಮಕ್ಕಳ ಮನೆ ಆರಂಭ


5 ವರ್ಷಗಳ ಹಿಂದೆ ಕ್ಲಸ್ಟರ್‌ನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಮಾಣಿಕ್ಯನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ 42ಕ್ಕೆ ಕುಸಿದ ಪರಿಣಾಮ ಗ್ರಾಮಸ್ಥರು ಮತ್ತು ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ಮಕ್ಕಳ ಮನೆ ಆರಂಭಿಸಿ ಎಲ್‌.ಕೆ.ಜಿ.ಯಿಂದಲೇ ಮಕ್ಕಳನ್ನು ಶಾಲೆಗೆ ಸೆಳೆಯುವ ಪ್ರಯತ್ನ ಮಾಡುವ ಜತೆಗೆ ಗುಣಾತ್ಮಕ ಶಿಕ್ಷ ಣ ನೀಡಲು ಯೋಜನೆ ರೂಪಿಸಿ ಕಾರ್ಯಾರಂಭ ಮಾಡಿದ್ದಾರೆ.

ಮಕ್ಕಳ ಮನೆಯ ಪ್ರಯತ್ನಕ್ಕೆ ಗ್ರಾಮದಲ್ಲಿ ಉತ್ತಮ ಪ್ರೋತ್ಸಾಹ ದೊರೆತ್ತಿದ್ದು, ಮನತುಂಬಿ ಸಹಕಾರ ನೀಡಿದ್ದಾರೆ. ಬೆಂಗಳೂರಿನ ಅರವಿಂದ ರಾಘವನ್‌ ಕಂಪ್ಯೂಟರ್‌ ಶಿಕ್ಷ ಕಿಗೆ ಮಾಸಿಕ 5000 ರೂ. ಹಾಗೂ ಶಾಲೆಗೆ ಒಂದು ದಿನದ ಉಚಿತ ಪ್ರವಾಸ, ಆಡಿಟರ್‌ ಮಂಜುನಾಥ್‌ ಮಕ್ಕಳಮನೆ ಶಿಕ್ಷ ಕಿಗೆ ಮಾಸಿಕ 5000 ರೂ.ವೇತನ, ಪ್ರತಿ ಮಕ್ಕಳಿಗೆ ಸಾವಿರ ರೂ. ವಾರ್ಷಿಕ ಪ್ರೋತ್ಸಾಹ ಧನ, ನಿವೃತ್ತ ಶಿಕ್ಷ ಣಾಧಿಕಾರಿ ಪಾಪಣ್ಣೇಗೌಡ 20 ಸಾವಿರ ಮೌಲ್ಯದ ಪುಸ್ತಕ, ಆಟಿಕೆ ನೀಡಿದ್ದಾರೆ. ಜಿಲ್ಲಾ ಉತ್ತಮ ಶಿಕ್ಷ ಕ ಪ್ರಶಸ್ತಿಗೆ ಭಾಜನರಾದ ಕೆ.ಕೆಂಪೇಗೌಡ ತಮಗೆ ಲಭಿಸಿದ 5000 ರೂ.ನಗದು ಪುರಸ್ಕಾರವನ್ನು ಮಕ್ಕಳಮನೆ ಅಂದ ಹೆಚ್ಚಿಸುವ ಅಕ್ಷ ರ ಮತ್ತು ಚಿತ್ರ ಬರಣಿಗೆಗೆ ನೀಡಿದ್ದಾರೆ. ಯಜಮಾನ ಸಿಂಗ್ರೀಗೌಡ ಮತ್ತು ಜಗದೀಶ್‌ ಆಯಾ ವೇತನ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿಂಗ್ರೀಗೌಡನ ಕೊಪ್ಪಲಿನ ಚಂದನ್‌ ಮಕ್ಕಳಿಗೆ ಶೂ, ಸಾಕ್ಸ್‌, ಎ.ಪಿ.ಎಂ.ಸಿ ನಿರ್ದೇಶಕ ಜಗದೀಶ್‌ ಬ್ಯಾಗ್‌ ಕೊಡುಗೆ ನೀಡಿದ್ದಾರೆ. ಉದ್ಘಾಟನಾ ಸಮಾರಂಭದ ವೆಚ್ಚವನ್ನು ಹಿರಿಯ ವಿದ್ಯಾರ್ಥಿಗಳು ವಹಿಸಿಕೊಂಡು ಕಾರ್ಯಕ್ರಮ ನಡೆಸಿಕೊಟ್ಟರು.

ಮಕ್ಕಳ ಮನೆಯ ಉದ್ಘಾಟನೆಯನ್ನು ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಿಗೌಡ ಇತ್ತೀಚೆಗೆ ನೆರವೇರಿಸಿ ಸರಕಾರಿ ಶಾಲೆ ಉಳಿಸಲು ಗ್ರಾಮಸ್ಥರು ಸಹಕಾರ ನೀಡಬೇಕು. ಗುಣಾತ್ಮಕ ಶಿಕ್ಷ ಣ ನೀಡಲು ಶಿಕ್ಷ ಕರೊಂದಿಗೆ ಗ್ರಾಮಸ್ಥರೂ ಸ್ಪಂದಿಸಿದರೆ ಶಾಲಾ ಮಾದರಿಯಾಗಬಲ್ಲದು ಎಂದರು.

ಮಕ್ಕಳಮನೆ ಅಧ್ಯಕ್ಷ ಜವರೇಗೌಡ ಅಧ್ಯಕ್ಷ ತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷೆ ಅನಿತಾರಾಣಿ , ಮಾಜಿ ಅಧ್ಯಕ್ಷ ಎಂ.ಎನ್‌.ಕೆಂಪೇಗೌಡ, ಎಂ.ಎಸ್‌.ಕುಮಾರ್‌ ಗ್ರಾ.ಪಂ.ಸದಸ್ಯರಾದ ಸುಧಾ, ಭವ್ಯ, ಅರ್ಪಿತ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನರಸಿಂಹೇಗೌಡ, ಸದಸ್ಯರು, ಸಿ.ಆರ್‌.ಪಿ.ಗೀತಾ, ಐ.ಆರ್‌.ಟಿ.ಸಂಪತ್‌ಕುಮಾರ್‌, ಮುಖ್ಯ ಶಿಕ್ಷ ಕ ಮಹದೇವೇಗೌಡ ಶಿಕ್ಷ ಕ ಇಮ್ರಾನ್‌, ಜಯಮ್ಮ, ಸೌಮ್ಯ, ಭಾರತಿ, ಲಕ್ಷ್ಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ