ಆ್ಯಪ್ನಗರ

​ ಕಲಾತಪಸ್ವಿಯಲ್ಲಿ ಅರಳಿದ ಮಕ್ಕಳ ಪ್ರತಿಭೆ

ಒಂದೆಡೆ ಮಕ್ಕಳ ಕುಂಚದಲ್ಲಿ ಅರಳುತ್ತಿದ್ದ ಚಿತ್ರಕಲೆಗಳು. ಅಲ್ಲೇ ಮತ್ತೊಂದೆಡೆ ಛದ್ಮವೇಷ ತೊಟ್ಟ ಮಕ್ಕಳು. ಇವೆರಡೂ ದೃಶ್ಯಗಳು ನೋಡುಗಳ ಕಣ್ಣುಗಳಿಗೆ ಕಲರ್‌ಫುಲ್ ವಾತಾವರಣ ಸೃಷ್ಟಿಸಿದ್ದವು.

ವಿಕ ಸುದ್ದಿಲೋಕ 12 Jul 2017, 5:14 am
ಮಂಡ್ಯ: ಒಂದೆಡೆ ಮಕ್ಕಳ ಕುಂಚದಲ್ಲಿ ಅರಳುತ್ತಿದ್ದ ಚಿತ್ರಕಲೆಗಳು. ಅಲ್ಲೇ ಮತ್ತೊಂದೆಡೆ ಛದ್ಮವೇಷ ತೊಟ್ಟ ಮಕ್ಕಳು. ಇವೆರಡೂ ದೃಶ್ಯಗಳು ನೋಡುಗಳ ಕಣ್ಣುಗಳಿಗೆ ಕಲರ್‌ಫುಲ್ ವಾತಾವರಣ ಸೃಷ್ಟಿಸಿದ್ದವು.
Vijaya Karnataka Web childrens talent in kalatapaswi
​ ಕಲಾತಪಸ್ವಿಯಲ್ಲಿ ಅರಳಿದ ಮಕ್ಕಳ ಪ್ರತಿಭೆ


ನಗರದ ಕಲಾತಪಸ್ವಿ ಮಕ್ಕಳ ಚಿತ್ರಕಲಾ ಕುಟೀರದಲ್ಲಿ ಇಂತಹುದೊಂದು ವಿಶೇಷ ವಾತಾವರಣವಿತ್ತು. ಇದಕ್ಕೆ ಕಾರಣ ವಾದದ್ದು ಅಮ್ಮ ಕಿಡ್ಸ್ ಮತ್ತು ಕಲಾತಪಸ್ವಿ ಟ್ರಸ್ಟ್ ‘ಮಕ್ಕಳ ಪ್ರತಿಭೆ’ ಶೀರ್ಷಿಕೆಯಡಿ ಆಯೋಜಿಸಿದ್ದ ಛದ್ಮವೇಷ ಹಾಗೂ ಚಿತ್ರಕಲಾ ಸ್ಪರ್ಧೆ. ಚಿತ್ರಕಲೆಯನ್ನು ತಪಸ್ಸಿನಂತೆ ಕಲಿಯುತ್ತಿರುವ ಮಕ್ಕಳಲ್ಲಿ ಕಲೆಯ ಪ್ರತಿಭೆ ಅರಳಿತ್ತು. ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 87 ಮಕ್ಕಳು ತಮ್ಮ ಮನದಲ್ಲಿನ ಚಿತ್ರಗಳಿಗೆ ಬಿಳಿ ಹಾಳೆ ಮೇಲೆ ರೂಪ ನೀಡಿದರು.

ಪರಿಸರ ಮತ್ತು ಜಾಗತಿಕ ತಾಪಮಾನ ಕೇಂದ್ರೀಕೃತವಾಗಿದ್ದ ಚಿತ್ರಗಳಲ್ಲಿ ಹಳ್ಳಿ ವಾತಾವರಣ, ಕಾಡು, ಪಕ್ಷಿಧಾಮ, ಜಿಂಕೆ, ನದಿ ಸೃಷ್ಟಿಯಾಗಿದ್ದವು. ಮಹಾತ್ಮ ಗಾಂಧಿ, ಐನ್‌ಸ್ಟೈನ್ ಮತ್ತು ವಿವೇಕಾ ನಂದ ಅವರು ಮಕ್ಕಳ ಕುಂಚದಲ್ಲಿ ಜೀವ ಪಡೆದಿದ್ದರು. ಇದೇ ವೇಳೆ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಮಕ್ಕಳು ಶ್ರೀಕೃಷ್ಣ, ಯೋಧ, ರೈತ, ಕೃಷಿ ಕಾರ್ಮಿಕ ಮಹಿಳೆ, ದಾದಿ, ಕೊರವಂಜಿ, ಎಂಜಿನಿಯರ್, ನ್ಯಾಯದೇವತೆಯ ವೇಷ ಧರಿಸಿ ಗಮನ ಸೆಳೆದರು.

ಇದಕ್ಕೂ ಮೊದಲು ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಕೆ.ಎಂ.ಮಹೇಶ್ ಮಾತನಾಡಿ, ಮಕ್ಕಳಲ್ಲಿನ ಸೃಜನಾತ್ಮಕ ಪ್ರತಿಭೆಯನ್ನು ಹೊರತರುವಲ್ಲಿ ಕಲಾತಪಸ್ವಿ ಟ್ರಸ್ಟ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಇದರೊಂದಿಗೆ ಮಕ್ಕಳಲ್ಲಿ ದೇಶಭಕ್ತಿಯನ್ನು ಮೂಡಿಸುವ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.

ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಾ ವಂತರಾಗಿ ರೂಪಿಸಲು ಶ್ರಮಿಸಬೇಕು. ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿ ನಿಲ್ಲಬೇಕು.ಮಕ್ಕಳ ಭವಿಷ್ಯದ ದೃಷ್ಟಿಯಿಂದ, ವೈಜ್ಞಾನಿಕ ಪ್ರಪಂಚದ ಪರಿಚಯವನ್ನು ಮಾಡಿಕೊಡ ಬೇಕಿದೆ ಎಂದು ಹೇಳಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ವೇಳೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕಲಾವಿದ ವಿರೂಪಾಕ್ಷ, ಟ್ರಸ್ಟ್ ಕಾರ್ಯದರ್ಶಿ ಅನಿಲ್‌ಕುಮಾರ್, ಚಿತ್ರಕಲಾಶಿಕ್ಷಕಿ ವಿದ್ಯಾ, ಸೌಜನ್ಯ, ಸವಿತಾ ಇತರರು ಹಾಜರಿದ್ದರು.
ಚಿತ್ರಕಲಾ ಸ್ಪರ್ಧೆ ವಿಜೇತರು

ಪ್ರಥಮ ಬಹುಮನ: ವಿರಂತ್‌ರಂಜನ್‌ಗೌಡ, ಮನ್ವಿತಾ, ವಿಹಾರಿಕ ಸುಮನಗೌಡ, ಕುಶಾಲ್‌ಗೌಡ, ಶ್ರೀವತ್ಸ, ಉಲ್ಲಾಸ್‌ಗೌಡ, ನಿಧಿ ಆರ್.ಬಲ್ಲಾಳ್, ಟಿ.ಎಸ್.ಯು.ವೈಷ್ಣವಿ.
ದ್ವಿತೀಯ ಬಹುಮಾನ: ಜಿ.ತ್ರಿಷಾ, ಎಂ.ಹಿತೇಶ್‌ಸ್ಕಂದ, ಎಂ.ಎಸ್.ಹಿತೈಷಿ, ಎಂ.ಎಸನ್.ಜಾನವಿ, ಸಮರ್ಥ್ ಭಾರದ್ವಾಜ್, ಆರ್.ಹರ್ಷಿತಾ.

ತೃತೀಯ ಬಹುಮಾನ: ಎಚ್.ಆರ್.ದರ್ಶಿನಿ, ಎನ್.ಶ್ರೇಯಸ್, ಎಂ.ಸಿ.ಧನುಷ್‌ಗೌಡ, ಸೈದಫಿಜ, ಸೈದ ಸುಮೇರ, ಎಚ್.ಎಸ್.ಐಶ್ವರ್ಯ, ಎಚ್.ಎಸ್.ಸ್ವಾತಿ, ಎ.ಅನ್ವಿತಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ