ಆ್ಯಪ್ನಗರ

ಮಂಡ್ಯ ಮಗಳನ್ನು ಸಂಸತ್‌ಗೆ ಕಳುಹಿಸಿ

ಜಿಲ್ಲೆಯ ಸ್ವಾಭಿಮಾನದ ...

Vijaya Karnataka 5 Apr 2019, 5:00 am
ನಾಗಮಂಗಲ: ಜಿಲ್ಲೆಯ ಸ್ವಾಭಿಮಾನದ ಉಳಿವಿಗಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಆಯ್ಕೆ ಮಾಡುವ ಮೂಲಕ ಸಂಸತ್‌ಗೆ ಕಳುಹಿಸಿಕೊಡಬೇಕೆಂದು ನಟ ದರ್ಶನ್‌ ಮನವಿ ಮಾಡಿದರು.
Vijaya Karnataka Web choose sumalatha in lok sabha election says darshan
ಮಂಡ್ಯ ಮಗಳನ್ನು ಸಂಸತ್‌ಗೆ ಕಳುಹಿಸಿ


ತಾಲೂಕಿನ ಚಿಣ್ಯ ಹಾಗೂ ಹೊಣಕೆರೆ ಸೇರಿದಂತೆ ತಾಲೂಕಿನ ನಾನಾ ಭಾಗಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರ ಗುರುವಾರ ಪ್ರಚಾರ ನಡೆಸಿದ ಅವರು, ಅಂಬರೀಷ್‌ ಅವರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಜಿಲ್ಲೆಯ ಜನರ ಋುಣತೀರಿಸಲು ಸುಮಲತಾ ಅವರಿಗೆ ಅವಕಾಶ ಕೊಡಬೇಕು ಎಂದರು.

ಜಿಲ್ಲೆಯಲ್ಲಿ ಸ್ವಾಭಿಮಾನಕ್ಕೆ ಬೆಲೆಕೊಡುವ ಮುಗ್ದ ಹಾಗೂ ಪ್ರಜ್ಞಾವಂತ ಜನರಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಅಂಬರೀಷ್‌ ಅಪಾರಕೊಡುಗೆಯಿದೆ. ಹಾಗಾಗಿ ಅಂಬರೀಷ್‌ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೂ ತೋರಿಸಿದರೆ, ಜಿಲ್ಲೆಯ ಮತದಾರರು ಸ್ವಾಭಿಮಾನಿಗಳೆಂಬುದನ್ನು ರಾಷ್ಟ್ರಕ್ಕೆ ತಿಳಿಸಿಕೊಡಬಹುದು. ಪ್ರತಿಸ್ಪಧಿರ್ಧಿಗಳು ನಮ್ಮ ವಿರುದ್ಧ ಏನೇ ದೂರಿದರೂ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಸುಮಲತಾ ಅವರಿಗೆ ನೀವು ನೀಡುವ ಮತಗಳೇ ಅವರಿಗೆ ಉತ್ತರವಾಗಬೇಕು ಎಂದರು.

ತಾಲೂಕಿನ ಹೊಣಕೆರೆ ಹೋಬಳಿಯ ಚಿಣ್ಯಗೆ ದರ್ಶನ್‌ ಭೇಟಿ ನೀಡುತ್ತಿದ್ದಂತೆ ಸಹಸ್ರಾರು ಅಭಿಮಾನಿಗಳು ಜಯಘೋಷ ಮೊಳಗಿಸಿ, ಪಟಾಕಿಸಿಡಿಸಿ ಸ್ವಾಗತಕೋರಿದರು.

ಒಟ್ಟಿಗೆ ಹಾರಾಡಿದ ಕಮಲ-ಕಾಂಗ್ರೆಸ್‌ ಬಾವುಟ

ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬೆಂಬಲಕ್ಕೆ ನಿಂತಿರುವ ಕಮಲ ಪಾಳಯದ ಮುಖಂಡರೊಂದಿಗೆ ಕೈ ಜೋಡಿಸಿರುವ ಕಾಂಗ್ರೆಸ್‌ನ ಹಲವು ಮುಖಂಡರು ಪಕ್ಷ ದ ವರಿಷ್ಠರ ಆದೇಶವನ್ನು ಧಿಧಿಕ್ಕರಿಸಿ ಸುಮಲತಾ ಪರವಾಗಿ ಬಹಿರಂಗ ಪ್ರಚಾರಕ್ಕಿಳಿದಿರುವುದು ಕಂಡುಬಂತು.

ದರ್ಶನ್‌ ತಾಲೂಕಿನ ನಾನಾ ಗ್ರಾಮಗಳಲ್ಲಿ ರೋಡ್‌ಶೋ ನಡೆಸುತ್ತಿದ್ದ ವೇಳೆ ಅಂಬರೀಷ್‌ ಅಭಿಮಾನಿಗಳ ಜತೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸ್ಥಳೀಯ ಕಾರ್ಯಕರ್ತರು ಹಿಡಿದಿದ್ದ ಎರಡೂ ಪಕ್ಷ ಗಳ ಬಾವುಟಗಳು ರಾರಾಜಿಸಿದವು. ತಾಲೂಕಿನ ಚಿಣ್ಯ, ಹೊಣಕೆರೆ, ಬ್ರಹ್ಮದೇವರಹಳ್ಳಿ, ಕೆ.ಮಲ್ಲೇನಹಳ್ಳಿ, ಕಾಂತಾಪುರ, ಬೋಗಾದಿ ಮಾರ್ಗವಾಗಿ ಮಠದಭೂವನಹಳ್ಳಿ ಗ್ರಾಮಕ್ಕೆ ಆಗಮಿಸಿದ ನಟ ದರ್ಶನ್‌ ಮರದಕೆಳಗೆ ನಿಂತು ಕಾರ್ಯಕರ್ತರು ತಂದಿದ್ದ ಮೊಸರನ್ನ ಹಾಗೂ ಪುಳಿಯೋಗರೆ ಸೇವಿಸಿ ರೋಡ್‌ಶೋ ಮುಂದುವರಿಸಿದರು.

ರೋಡ್‌ಶೋ ವೇಳೆ ತಾಲೂಕಿನ ಹೊಣಕೆರೆ, ಅದ್ದೀಹಳ್ಳಿ ಹಾಗೂ ಬಿಂಡಿಗನವಿಲೆಯಲ್ಲಿ ಸ್ಥಳೀಯ ಮುಖಂಡರು ಸಹಸ್ರಾರು ಸಂಖ್ಯೆಯಲ್ಲಿದ್ದ ಅಭಿಮಾನಿ ಹಾಗೂ ಕಾರ್ಯಕರ್ತರಿಗೆ ಮಜ್ಜಿಗೆ ವಿತರಿಸಿ ದಣಿವು ನೀಗಿಸಿದರೆ, ಬಿಂಡಿಗನವಿಲೆಯಲ್ಲಿ ಪಾನಕ ವಿತರಣೆ ಮಾಡಿದರು.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕದಬಹಳ್ಳಿ ಸರ್ಕಲ್‌ಗೆ ನಟ ದರ್ಶನ್‌ ರೋಡ್‌ ಶೋ ಆಗಮಿಸುತ್ತಿದ್ದಂತೆ ಹೆದ್ದಾರಿ ಎರಡೂ ಬದಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಕೆಲ ಕಾಲ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಬೆಳ್ಳೂರು ಕ್ರಾಸ್‌, ಬೆಳ್ಳೂರು, ಚುಂಚನಗಿರಿ, ನೆಲ್ಲಿಗೆರೆ ಕ್ರಾಸ್‌, ಅಂಚೆಚಿಟ್ಟನಹಳ್ಳಿ, ನಾಗಮಂಗಲ ಟೌನ್‌, ಮೈಲಾರಪಟ್ಟಣ, ದೇವಲಾಪುರ ಸೇರಿದಂತೆ ತಾಲೂಕಿನ 26ಕ್ಕೂ ಹೆಚ್ಚು ಗ್ರಾಮಗಳಲ್ಲಿ ದರ್ಶನ್‌ ಮತಪ್ರಚಾರ ನಡೆಸಿದರು.

ಮುಖಂಡ ಇಂಡುವಾಳು ಸಚ್ಚಿದಾನಂದ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಚ್‌.ಟಿ.ಕೃಷ್ಣೇಗೌಡ, ಎನ್‌.ಜೆ.ರಾಜೇಶ್‌, ಎಂಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಿ.ರಾಜೇಗೌಡ, ಎಂ.ಪ್ರಸನ್ನ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ