ನಾಗಮಂಗಲ: ಯುಗಕ್ಕೊಂದು ಪ್ರತಿಭೆ ಜಗವನ್ನು ಬೆಳಗುತ್ತದೆ ಎನ್ನುವಂತೆ 12ನೇ ಶತಮಾನದಲ್ಲಿ ಬಸವಣ್ಣ ಅವರು ನಡೆಸಿದ ಕ್ರಾಂತಿಯಂತೆ ಇಂದಿನ ದಿನಗಳಲ್ಲಿ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳು ಶೈಕ್ಷ ಣಿಕ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಶ್ಲಾಘಿಸಿದರು.
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀಗುರುಪೂರ್ಣಿಮ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಚುಂಚಾದ್ರಿ ಕಲೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿದರು.
ಪ್ರತಿಭಾ ಪುರಸ್ಕಾರ, ಕಲೋತ್ಸವ ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಧಕರನ್ನು ಕರೆಸಿ ಉಪನ್ಯಾಸ ಕೊಡಿಸುವುದರ ಹಿಂದೆ ದೊಡ್ಡ ಹಿನ್ನೆಲೆ ಇರುತ್ತದೆ. ಅಂತಹ ಸಾಧಕರ ಅನುಭವದ ನುಡಿಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಾಧನಾ ಪುರುಷರಾಗಿ ಬೆಳೆಯಬೇಕು. ನಮ್ಮ ಸುತ್ತಮುತ್ತಲ ವಾತಾವರಣ ನಮ್ಮ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸಿ ಅವುಗಳಲ್ಲಿರುವ ಒಳ್ಳೆಯ ಅಂಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿದಿಸೆಯಲ್ಲಿ ನಮ್ಮ ಗುರಿ ನಮ್ಮ ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಇನ್ನುಳಿದ ಬದುಕಿನಲ್ಲಿ ನಿಮ್ಮ ಜೀವನವೂ ಸರಿದಿಕ್ಕಿನಲ್ಲಿ ಸಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿತ್ಯವೂ ಹೊಸತು ಕಲಿಯಬೇಕು. ಎಲ್ಲ ಕಾಲಕ್ಕೂ ಒಳಿತು ಕೆಡಕು ಇರುವುದು ಸಹಜವೇ. ಆ ನಡುವೆ ನಾನು ಏನಾಗಬೇಕು ಎಂಬುದನ್ನು ವಿದ್ಯಾರ್ಥಿದಿಸೆಯಲ್ಲಿಯೇ ನಿರ್ಧರಿಸಿಕೊಳ್ಳಬೇಕು ಎಂದು ಹೇಳಿದರು.
ನಿಮ್ಮ ಬದುಕಿಗೆ ನೀವೇ ನಾಯಕರು, ನಾಯಕನಾಗುವವನು ಶೈರ್ಯಶಾಲಿಯಾಗಿರಬೇಕು. ನ್ಯಾಯದ ಪರ ನಿಲ್ಲಬೇಕು ಪರೋಪಕಾರಿ ಗುಣ ಬೆಳೆಸಿಕೊಳ್ಳಬೇಕು. ಈ ಎಲ್ಲವನ್ನೂ ವಿದ್ಯಾರ್ಥಿ ಜೀವನದಲ್ಲಿಯೇ ಸ್ಪಷ್ಟವಾಗಿ ಮೈಗೂಡಿಸಿಕೊಳ್ಳುವುದರಿಂದ ಮನುಷ್ಯ ಸದೃಢವಾಗಿ ಬೆಳೆಯುವುದು ಸುಲಭಸಾಧ್ಯ. ನಿಮ್ಮಲ್ಲಿರುವ ಕಲೆಯನ್ನು ಗುರುತಿಸಿಕೊಳ್ಳಬೇಕು. ಎಲ್ಲ ಬಗೆಯ ಪ್ರತಿಭೆ ಇದ್ದರೂ ಆತ ಜೀವನದಲ್ಲಿ ಸೋಲುತ್ತಿದ್ದಾನೆ ಎಂದರೆ ಆತನಲ್ಲಿ ಧೈರ್ಯ ಇಲ್ಲ ಎಂದೇ ಅರ್ಥ. ವಿದ್ಯಾರ್ಥಿ ಜೀವನದಲ್ಲಿಯೇ ಧೈರ್ಯಶಾಲಿಗಳಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಧಿಕಾರಿ ಮಂಜುಶ್ರೀ ಮಾತನಾಡಿ, ಪ್ರತಿಭೆ ಎನ್ನುವುದು ಕೇವಲ ಚೆನ್ನಾಗಿ ಓದುವವರಿಗೆ ಮಾತ್ರ ಸೀಮಿತವಲ್ಲ. ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಮುಖ್ಯ. ಆ ಕೆಲಸವನ್ನು ಆದಿಚುಂಚನಗಿರಿಯ ಶ್ರೀಮಠ ಮಾಡುತ್ತಿದೆ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅದು ಇತರರಿಗೂ ಸಾಧನೆ ಮಾಡಲು ಉತ್ತೇಜನ ನೀಡಿದಂತಾಗುತ್ತದೆ. ಯಾವುದೇ ಸಾಧನೆಯನ್ನು ಮಾಡಲು ಗುರಿ ಮತ್ತು ಗುರು ಇರಬೇಕು. ಗುರುಗಳನ್ನು ಎಷ್ಟು ಭಕ್ತಿಯಿಂದ ಕಾಣುತ್ತೇವೆಯೋ ಅಷ್ಟು ಬೇಗ ನಾವು ಗುರಿ ತಲುಪುವುದು ಸುಲಭವಾಗುತ್ತದೆ ಎಂದರು.
ಆಂಧ್ರ ಪ್ರದೇಶದ ವಿಶೇಷ ಯೋಜನಾಧಿಕಾರಿ ವಿನೋದ್ಕುಮಾರ್ ಮಾತನಾಡಿ, ಆದಿಚುಂಚನಗಿರಿ ಶಿಕ್ಷ ಣ ಸಂಸ್ಥೆ ಬೃಹತ್ ಆಲದ ಮರದಂತೆ ಬೆಳೆದಿದೆ. ನನ್ನಂತಹ ಅಸಂಖ್ಯಾತ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದೆ ಎಂದು ತಾವೊಬ್ಬ ಶ್ರೀಮಠದ ಹಳೇ ವಿದ್ಯಾರ್ಥಿ ಎಂಬುದನ್ನು ಸ್ಮರಿಸಿದರು. ವಿದ್ಯಾರ್ಥಿ ಜೀವನ ಎಂಬುದು ತಪಸ್ಸಿದ್ದಂತೆ. ಯಾರು ಶ್ರದ್ಧೆಯಿಂದ ಇದರಲ್ಲಿ ತೊಡಗಿಕೊಳ್ಳುತ್ತಾರೋ ಅಂತಹವರು ಮುಂದೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ಏಕಲವ್ಯ ಆದರ್ಶವಾಗಬೇಕು. ಯಾರೂ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಗುರುಗಳ ಬಗ್ಗೆ ಶ್ರದ್ಧೆ ಭಕ್ತಿಯಿಂದಿರುತ್ತಾರೋ ಅಂತಹ ವಿದ್ಯಾರ್ಥಿ ಭವಿಷ್ಯದ ಜೀವನ ಬಂಗಾರವಾಗುತ್ತದೆ ಎಂದರು.
ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೃಷ್ಟಿ ವಿಶೇಷಚೇತನ ಮಕ್ಕಳು ನಡೆಸಿಕೊಟ್ಟ ಗೀತಗಾಯನ ಕಾರ್ಯಕ್ರಮ ಮನ ಸೆಳೆಯಿತು. ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಸುಧಾಕರರೆಡ್ಡಿ, ಜಿಲ್ಲಾ ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ ರಘುನಂದನ್, ತಹಸೀಲ್ದಾರ್ ಎಂ.ವಿ.ರೂಪಾ, ಕ್ಷೇತ್ರ ಶಿಕ್ಷ ಣಾಧಿಕಾರಿ ನಾಗೇಶ್ ಇತರರು ಇದ್ದರು.
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀಗುರುಪೂರ್ಣಿಮ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಚುಂಚಾದ್ರಿ ಕಲೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿದರು.
ಪ್ರತಿಭಾ ಪುರಸ್ಕಾರ, ಕಲೋತ್ಸವ ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಧಕರನ್ನು ಕರೆಸಿ ಉಪನ್ಯಾಸ ಕೊಡಿಸುವುದರ ಹಿಂದೆ ದೊಡ್ಡ ಹಿನ್ನೆಲೆ ಇರುತ್ತದೆ. ಅಂತಹ ಸಾಧಕರ ಅನುಭವದ ನುಡಿಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಾಧನಾ ಪುರುಷರಾಗಿ ಬೆಳೆಯಬೇಕು. ನಮ್ಮ ಸುತ್ತಮುತ್ತಲ ವಾತಾವರಣ ನಮ್ಮ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸಿ ಅವುಗಳಲ್ಲಿರುವ ಒಳ್ಳೆಯ ಅಂಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿದಿಸೆಯಲ್ಲಿ ನಮ್ಮ ಗುರಿ ನಮ್ಮ ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಇನ್ನುಳಿದ ಬದುಕಿನಲ್ಲಿ ನಿಮ್ಮ ಜೀವನವೂ ಸರಿದಿಕ್ಕಿನಲ್ಲಿ ಸಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿತ್ಯವೂ ಹೊಸತು ಕಲಿಯಬೇಕು. ಎಲ್ಲ ಕಾಲಕ್ಕೂ ಒಳಿತು ಕೆಡಕು ಇರುವುದು ಸಹಜವೇ. ಆ ನಡುವೆ ನಾನು ಏನಾಗಬೇಕು ಎಂಬುದನ್ನು ವಿದ್ಯಾರ್ಥಿದಿಸೆಯಲ್ಲಿಯೇ ನಿರ್ಧರಿಸಿಕೊಳ್ಳಬೇಕು ಎಂದು ಹೇಳಿದರು.
ನಿಮ್ಮ ಬದುಕಿಗೆ ನೀವೇ ನಾಯಕರು, ನಾಯಕನಾಗುವವನು ಶೈರ್ಯಶಾಲಿಯಾಗಿರಬೇಕು. ನ್ಯಾಯದ ಪರ ನಿಲ್ಲಬೇಕು ಪರೋಪಕಾರಿ ಗುಣ ಬೆಳೆಸಿಕೊಳ್ಳಬೇಕು. ಈ ಎಲ್ಲವನ್ನೂ ವಿದ್ಯಾರ್ಥಿ ಜೀವನದಲ್ಲಿಯೇ ಸ್ಪಷ್ಟವಾಗಿ ಮೈಗೂಡಿಸಿಕೊಳ್ಳುವುದರಿಂದ ಮನುಷ್ಯ ಸದೃಢವಾಗಿ ಬೆಳೆಯುವುದು ಸುಲಭಸಾಧ್ಯ. ನಿಮ್ಮಲ್ಲಿರುವ ಕಲೆಯನ್ನು ಗುರುತಿಸಿಕೊಳ್ಳಬೇಕು. ಎಲ್ಲ ಬಗೆಯ ಪ್ರತಿಭೆ ಇದ್ದರೂ ಆತ ಜೀವನದಲ್ಲಿ ಸೋಲುತ್ತಿದ್ದಾನೆ ಎಂದರೆ ಆತನಲ್ಲಿ ಧೈರ್ಯ ಇಲ್ಲ ಎಂದೇ ಅರ್ಥ. ವಿದ್ಯಾರ್ಥಿ ಜೀವನದಲ್ಲಿಯೇ ಧೈರ್ಯಶಾಲಿಗಳಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಧಿಕಾರಿ ಮಂಜುಶ್ರೀ ಮಾತನಾಡಿ, ಪ್ರತಿಭೆ ಎನ್ನುವುದು ಕೇವಲ ಚೆನ್ನಾಗಿ ಓದುವವರಿಗೆ ಮಾತ್ರ ಸೀಮಿತವಲ್ಲ. ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಮುಖ್ಯ. ಆ ಕೆಲಸವನ್ನು ಆದಿಚುಂಚನಗಿರಿಯ ಶ್ರೀಮಠ ಮಾಡುತ್ತಿದೆ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅದು ಇತರರಿಗೂ ಸಾಧನೆ ಮಾಡಲು ಉತ್ತೇಜನ ನೀಡಿದಂತಾಗುತ್ತದೆ. ಯಾವುದೇ ಸಾಧನೆಯನ್ನು ಮಾಡಲು ಗುರಿ ಮತ್ತು ಗುರು ಇರಬೇಕು. ಗುರುಗಳನ್ನು ಎಷ್ಟು ಭಕ್ತಿಯಿಂದ ಕಾಣುತ್ತೇವೆಯೋ ಅಷ್ಟು ಬೇಗ ನಾವು ಗುರಿ ತಲುಪುವುದು ಸುಲಭವಾಗುತ್ತದೆ ಎಂದರು.
ಆಂಧ್ರ ಪ್ರದೇಶದ ವಿಶೇಷ ಯೋಜನಾಧಿಕಾರಿ ವಿನೋದ್ಕುಮಾರ್ ಮಾತನಾಡಿ, ಆದಿಚುಂಚನಗಿರಿ ಶಿಕ್ಷ ಣ ಸಂಸ್ಥೆ ಬೃಹತ್ ಆಲದ ಮರದಂತೆ ಬೆಳೆದಿದೆ. ನನ್ನಂತಹ ಅಸಂಖ್ಯಾತ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದೆ ಎಂದು ತಾವೊಬ್ಬ ಶ್ರೀಮಠದ ಹಳೇ ವಿದ್ಯಾರ್ಥಿ ಎಂಬುದನ್ನು ಸ್ಮರಿಸಿದರು. ವಿದ್ಯಾರ್ಥಿ ಜೀವನ ಎಂಬುದು ತಪಸ್ಸಿದ್ದಂತೆ. ಯಾರು ಶ್ರದ್ಧೆಯಿಂದ ಇದರಲ್ಲಿ ತೊಡಗಿಕೊಳ್ಳುತ್ತಾರೋ ಅಂತಹವರು ಮುಂದೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ಏಕಲವ್ಯ ಆದರ್ಶವಾಗಬೇಕು. ಯಾರೂ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಗುರುಗಳ ಬಗ್ಗೆ ಶ್ರದ್ಧೆ ಭಕ್ತಿಯಿಂದಿರುತ್ತಾರೋ ಅಂತಹ ವಿದ್ಯಾರ್ಥಿ ಭವಿಷ್ಯದ ಜೀವನ ಬಂಗಾರವಾಗುತ್ತದೆ ಎಂದರು.
ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೃಷ್ಟಿ ವಿಶೇಷಚೇತನ ಮಕ್ಕಳು ನಡೆಸಿಕೊಟ್ಟ ಗೀತಗಾಯನ ಕಾರ್ಯಕ್ರಮ ಮನ ಸೆಳೆಯಿತು. ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಸುಧಾಕರರೆಡ್ಡಿ, ಜಿಲ್ಲಾ ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ ರಘುನಂದನ್, ತಹಸೀಲ್ದಾರ್ ಎಂ.ವಿ.ರೂಪಾ, ಕ್ಷೇತ್ರ ಶಿಕ್ಷ ಣಾಧಿಕಾರಿ ನಾಗೇಶ್ ಇತರರು ಇದ್ದರು.