ಆ್ಯಪ್ನಗರ

ಷೋಕಿಗಾಗಿ ಗ್ರಾಮ ವಾಸ್ತವ್ಯ: ಮಾಜಿ ಶಾಸಕ ಕೆಬಿಶಿ ಟೀಕೆ

ಮಾಜಿ ಶಾಸಕ ಕೆಬಿಶಿ ಟೀಕೆ ವಿಕ ಸುದ್ದಿಲೋಕ ಮಂಡ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಷೋಕಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಕೆ...

Vijaya Karnataka 12 Jun 2019, 5:00 am
ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಷೋಕಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಟೀಕಿಸಿದ್ದಾರೆ.
Vijaya Karnataka Web cm hd kumaraswamy grama vastavya only for his fashion says ex mla kb chandrashekar
ಷೋಕಿಗಾಗಿ ಗ್ರಾಮ ವಾಸ್ತವ್ಯ: ಮಾಜಿ ಶಾಸಕ ಕೆಬಿಶಿ ಟೀಕೆ


ಕೆ.ಆರ್‌.ಪೇಟೆಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮುಖ್ಯಮಂತ್ರಿಯವರು ಗ್ರಾಮ ವಾಸ್ತವ್ಯ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ರೀತಿಯ ಗ್ರಾಮ ವಾಸ್ತವ್ಯದಿಂದ ಯಾವುದೇ ಲಾಭವೂ ಇಲ್ಲ. ರಾಜಕಾರಣಿಗಳಿಗೆ ಇದೊಂದು ಥರ ಷೋಕಿ ಇದ್ದಂತೆ,'' ಎಂದು ಲೇವಡಿ ಮಾಡಿದರು.

''ಈ ಹಿಂದೆ ನಮ್ಮದೆ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳ ಪರಿಸ್ಥಿತಿ ಏನಾಗಿದೆ? ಎಂಬುದು ಎಲ್ಲರಿಗೂ ಗೊತ್ತು. ಇಂತಹ ಕೆಲಸಕ್ಕೆ ಬಾರದ ಗ್ರಾಮ ವಾಸ್ತವ್ಯ ಬಿಟ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲಿ. ಗ್ರಾಮ ವಾಸ್ತವ್ಯ ಮಾಡುತ್ತಾರೆ ಎಂದ ತಕ್ಷ ಣ ಆ ಭಾಗದ ಜೆಡಿಎಸ್‌ ಮುಖಂಡರು ಹೋಗಿ ತುಂಬಿಕೊಳ್ತಾವೆ ಅಷ್ಟೆ. ಇದರ ಹೊರತಾಗಿ ಮೂರು ಕಾಸಿನ ಕೆಲಸ ಆಗೋದಿಲ್ಲ,'' ಎಂದರು.

''ಮಂಡ್ಯಕ್ಕೆ ಐದು ಸಾವಿರ ಕೋಟಿ ಕೊಟ್ಟಿದ್ದೇವೆ ಅಂತಿದ್ದಾರೆ. ಅದನ್ನು ಯಾವ ಬಜೆಟ್‌ನಲ್ಲಿ ತೋರಿಸಿದ್ದಾರೆ? ಮಂಡ್ಯ ಜಿಲ್ಲೆಯ ಜನರನ್ನು ಮೂರ್ಖರು ಅಂದುಕೊಂಡಿದ್ದೀರಾ? ಜನರ ಬಳಿ ಬಂದು ಸುಮ್ಮನೆ 5000 ಕೋಟಿ ಕೊಟ್ಟಿದ್ದೇನೆ ಅಂತಾ ಯಾಕೆ ನಾಟಕ ಆಡುತ್ತಿದ್ದೀರಿ. ರಾಹುಲ್‌ ಗಾಂಧಿ ಆಶೀರ್ವಾದ ಮಾಡಿದ್ದಾರೆ. ಇದನ್ನೆಲ್ಲ ಬಿಟ್ಟು ಒಳ್ಳೆ ಮಾರ್ಗದಲ್ಲಿ ಜನಗಳ ಸೇವೆ ಮಾಡಿ,'' ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ