ಆ್ಯಪ್ನಗರ

ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತರಿಸಿದ್ದೇ ನಾನು: ಸಿಎಂ ಕುಮಾರಸ್ವಾಮಿ

ಮಿಲಿಟರಿ ವಿಮಾನ ತರಿಸಿ ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಿಸಿದ್ದೆ. ಅದು ಸಿಎಂ ಆಗಿ ಅಲ್ಲ. ಅಂಬಿ ಅಭಿಮಾನಿಯಾಗಿ.

Vijaya Karnataka Web 14 Mar 2019, 7:35 pm
ಮಂಡ್ಯ: ಮಿಲಿಟರಿ ವಿಮಾನ ತರಿಸಿ ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಿಸಿದ್ದೆ. ಅದು ಸಿಎಂ ಆಗಿ ಅಲ್ಲ. ಅಂಬಿ ಅಭಿಮಾನಿಯಾಗಿ. ಅಂದು ತಮ್ಮನಾಗಿ ಅವರ ಪಾರ್ಥಿವ ಶರೀರದ ಮುಂದೆಯೇ ಕುಳಿತಿದ್ದೆ. ಆದರೂ, ನನ್ನ ಬಗ್ಗೆ ಅಂಬಿ ಅಭಿಮಾನಿಗಳು ಟೀಕೆ ಮಾಡುತ್ತಿದ್ದಾರೆ. ನನ್ನ ಹಾಗೂ ಅಂಬರೀಷ್ ಸಂಬಂಧ ನಿಮಗೇನು ಗೊತ್ತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
Vijaya Karnataka Web cm2


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಹಾಗೂ ಮಾಜಿ ಸಚಿವರಾದ ಅಂಬರೀಷ್ ನಿಧನದ ಸುದ್ದಿಯನ್ನು ನನಗೆ ಮೊದಲು ತಿಳಿಸಿದ್ದೆ ನನ್ನ ಮಗ ನಿಖಿಲ್ ಎಂದರು.

ನನ್ನ ಮಗ ಬೇರೆ ಅಲ್ಲ. ಅಂಬಿ ಮಗ ಬೇರೆ ಅಲ್ಲ. ಅಂಬರೀಷ್ ನಿಧನವಾದಾಗ ಅವರ ಮನೆ ದುರಸ್ಥಿ ಕೆಲಸ ಆಗಿರಲಿಲ್ಲ. ಅವರ ಪಾರ್ಥಿವ ಶರೀರ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎನ್ನುವುದೇ ಗೊತ್ತಿರಲಿಲ್ಲ. ಆಗ ಅಧಿಕಾರಿಗಳನ್ನು ಕಳಿಸಿ ಅವರ ಮನೆ ಕ್ಲೀನ್ ಮಾಡಿಸಿದ್ದೆ. ಅಂಬಿಗೆ ಅಣ್ಣನ ಸ್ಥಾನ ನೀಡಿದ್ದೇನೆ ಎಂದು ಹೇಳಿಕೊಂಡರು.

ಅಂಬಿ ನಿಧನದ ದಿನ ಪಾರ್ಥಿವ ಶರೀರ ತೆಗೆದುಕೊಂಡು ಹೋಗಬಾರದು ಎಂದವರು ಇಂದು ಈ ಜಿಲ್ಲೆಯ ಮಣ್ಣಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯ ಜಿಲ್ಲೆಗೆ 8751 ಕೋಟಿ ರೂಪಾಯಿ ಅನುಧಾನ ನೀಡಿದ್ದು ನನ್ನ ಮಗನನ್ನು ಸಂಸದ ಮಾಡಕಲ್ಲ. ನಿಮ್ಮ ಋಣ ತೀರಿಸೋಕೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ