ಆ್ಯಪ್ನಗರ

ಮಂಡ್ಯ ರೈತರಿಗೆ ನೀರು ಹರಿಸಿ, ಸಮಸ್ಯೆಯಾದರೆ ನಾನೇ ಜವಾಬ್ದಾರಿ: ಎಚ್‌ಡಿಕೆ

ನಮ್ಮ ರೈತರನ್ನು ಉಳಿಸಬೇಕು, ಮಂಡ್ಯ ಭಾಗದಲ್ಲಿ ಕಬ್ಬು ಉಳಿಯಬೇಕಿದೆ. ತಕ್ಷಣ ನೀರು ಹರಿಸಿ ಎಂದು ಅಧಿಕಾರಿಗೆಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka Web 21 Jun 2018, 1:06 pm
ರಾಮನಗರ: 'ನಮ್ಮ ರೈತರನ್ನು ಉಳಿಸಬೇಕು, ಮಂಡ್ಯ ಭಾಗದಲ್ಲಿ ಕಬ್ಬು ಉಳಿಯಬೇಕಿದೆ. ತಕ್ಷಣ ನೀರು ಹರಿಸಿ ಎಂದು ಅಧಿಕಾರಿಗೆಳಿಗೆ ಸೂಚನೆ ನೀಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶದಂತೆ ನೀರು ಹರಿಸಲಾಗಿದೆ. ಏನೇ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆ ಬಂದರೂ ನಾನು ಜವಬ್ದಾರಿ ತೆಗೆದುಕೊಳ್ಳುತ್ತೇನೆ,' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web kumaraswamy 1


ಕುರುಬರಹಳ್ಳಿ ಗ್ರಾಮದಲ್ಲಿ ಉದ್ಭವ ಆಂಜನೇಯ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.

ಮಂಡ್ಯ ಭಾಗದಲ್ಲಿ ಬೆಳೆ ಒಣಗುವ ವಿಚಾರವನ್ನು ಇವತ್ತು ಬೆಳಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ತಕ್ಷಣ ನೀರು ಬಿಡುವಂತೆ ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ತಮಿಳುನಾಡಿಗೆ ಈ ತಿಂಗಳು ಹರಿಸಬೇಕಾದ ನೀರು ಹರಿಸಲಾಗಿದೆ. ನಮ್ಮ ರೈತರನ್ನು ಉಳಿಸಬೇಕು ನೀರು ಹರಿಸಿ,

ಏನೇ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆ ಬಂದರೂ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿರುವುದಾಗಿ ಸಿಎಂ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ