ಆ್ಯಪ್ನಗರ

ತೆಂಗು ಬೆಳೆ:ಕೀಟ ನಿರ್ವಹಣಾ ಕ್ರಮ

‘ಈರಿಯೋಫಿಡ್ ಮೈಟ್’ ಎಂಬ ನುಸಿಯ ಹಾವಳಿಯಿಂದ ತೆಂಗಿನ ಮರಗಳು ಹಾನಿಗೊಳಗಾಗುತ್ತಿವೆ. ಹೀಗಾಗಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ವಿಧಾನದಿಂದ ಈ ನುಸಿ ಹಾವಳಿಯನ್ನು ಕಡಿಮೆ ಮಾಡಬಹುದು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಸಲಹೆ ನೀಡಿದ್ಧಾರೆ.

Vijaya Karnataka 8 Feb 2018, 5:15 am
ಮಂಡ್ಯ: ‘ಈರಿಯೋಫಿಡ್ ಮೈಟ್’ ಎಂಬ ನುಸಿಯ ಹಾವಳಿಯಿಂದ ತೆಂಗಿನ ಮರಗಳು ಹಾನಿಗೊಳಗಾಗುತ್ತಿವೆ. ಹೀಗಾಗಿ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ವಿಧಾನದಿಂದ ಈ ನುಸಿ ಹಾವಳಿಯನ್ನು ಕಡಿಮೆ ಮಾಡಬಹುದು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಸಲಹೆ ನೀಡಿದ್ಧಾರೆ.
Vijaya Karnataka Web coconut crop pest management method
ತೆಂಗು ಬೆಳೆ:ಕೀಟ ನಿರ್ವಹಣಾ ಕ್ರಮ


ನುಸಿಗಳು ಎಳೆಯ ಕಾಯಿಗಳ ಮೇಲೆ ದಾಳಿಯಿಡಲು ಆರಂಭಿಸುತ್ತವೆ. ಕಾಯಿಯ ತೊಟ್ಟಿನ ಕೆಳಭಾಗದಲ್ಲಿ ರಸವ ನ್ನು ಹೀರುತ್ತವೆ. ಕಾಯಿ ಬೆಳೆದು ದಪ್ಪವಾದಂತೆಲ್ಲಾ ತೊಟ್ಟಿನ ಒಳಗಿನಿಂದ ತ್ರಿಕೋನಾಕಾರದ ಬಿಳಿ ಮಚ್ಚೆ ಕಂಡು ಬಂದು, ನಂತರ ಕಂದು ಬಣ್ಣಕ್ಕೆ ತಿರುತ್ತದೆ. ಅದೇ ಜಾಗದಲ್ಲಿ ಉದ್ದನೆ ಯ ಬಿರುಕು ಉಂಟಾಗುತ್ತದೆ. ನಂತರ ಕಾಯಿ ಉದುರು ವುದು ಹಾನಿಯ ಲಕ್ಷಣಗಳಾಗಿರುತ್ತವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ನಿವರ್ಹಣೆಗೆ ತೆಂಗಿನ ತಾಕುಗಳಲ್ಲಿ ಜೈವಿಕ ಕೀಟನಾಶಕವಾದಂತಹ ಬೇವಿನ ಎಣ್ಣೆ, ಬೆಳ್ಳುಳಿ ದ್ರವರೂಪದ ಸಾವಯವ ಗೊಬ್ಬರ ಮತ್ತು ಫಿಶ್ ಆಯಿಲ್ ರೊಜಿನ್ ಸೋಪ್‌ಅನ್ನು ಹಾನಿಗೀಡಾದ ಮರಗಳಿಗೆ ನೀಡಿ ಉಪಚರಿಸ ಬೇಕು. ನುಸಿ ಬಾಧೆಯನ್ನು ನೋಡಿಕೊಂಡು ವರ್ಷದಲ್ಲಿ 3 ಬಾರಿ ಕರಗುವ 5 ಗ್ರಾಂ ಗಂಧಕವನ್ನು ಪ್ರತಿ 1 ಲೀಟರ್ ನೀರಿಗೆ ಬೆರಿಸಿ ಕಾಯಿ ಗೊಂಚಲಿಗೆ ಸಿಂಪಡಿಸಬೇಕು ಎಂದಿದ್ದಾರೆ.

ನುಸಿ ಬಾಧೆಯನ್ನು ತಡೆಗಟ್ಟಲು ಮೋನೋಕ್ರೋ ಟೋಪಸ್ 10 ಮಿಲೀ ಮತ್ತು 10 ಮಿಲೀ ನೀರಿಗೆ ಬೆರೆಸಿ ಒಂದು ಪಾಲಿಥಿನ್ ಬ್ಯಾಗ್ ಅಥವಾ ಬಾಟೆಲ್‌ನಲ್ಲಿ ಹಾಕಿ 10 ವರ್ಷದ ಕೆಳಗಿರುವ ತೆಂಗಿನ ಎಳೆ ಬೇರಿಗೆ ಉಣಿಸಬೇಕು. ನಿಮೊಝೋಲ್ 7.5 ಮಿಲೀ ಅಥವಾ ಇಕೊನೀಮ್ ಪ್ಲಸ್ 10 ಮಿ.ಲೀ ಅನುಕ್ರಮವಾಗಿ ಸಮ ಪ್ರಮಾಣದಲ್ಲಿ ನೀರಿನಲ್ಲಿ ಬೆರೆಸಿ ಬೇರಿನ ಮೂಲಕ ಉಣಿಸಬೇಕು. ಇದರಿಂದ ತೆಂಗನ್ನು ಕೀಟಗಳಿಂದ ರಕ್ಷಿಸಬಹುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮಂಡ್ಯ 08232-225735, ಮದ್ದೂರು: 08232-233450, ಕೆ.ಆರ್.ಪೇಟೆ;08237-262540.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ