ಆ್ಯಪ್ನಗರ

ಲೋಕಸರದಲ್ಲಿ ತೆಂಗು ದಿನಾಚರಣೆ

ತೆಂಗು ಬೆಳೆಯ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ತಾಲೂಕಿನ ಲೋಕಸರ ಗ್ರಾಮದಲ್ಲಿ ವಿಶೇಷವಾಗಿ ತೆಂಗು ದಿನಾಚರಣೆ ಆಚರಿಸಲಾಯಿತು. ಸಾರ್ವಜನಿಕರಿಗೆ ತೆಂಗಿನ ಸಸಿಗಳನ್ನು ವಿತರಿಸುವ ಜತೆಗೆ, ತೆಂಗಿನ ಸಸಿಗಳನ್ನು ನೆಟ್ಟು ನೀರೆರೆದರು.

Vijaya Karnataka 6 Sep 2017, 5:15 am
ಮಂಡ್ಯ: ತೆಂಗು ಬೆಳೆಯ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ತಾಲೂಕಿನ ಲೋಕಸರ ಗ್ರಾಮದಲ್ಲಿ ವಿಶೇಷವಾಗಿ ತೆಂಗು ದಿನಾಚರಣೆ ಆಚರಿಸಲಾಯಿತು. ಸಾರ್ವಜನಿಕರಿಗೆ ತೆಂಗಿನ ಸಸಿಗಳನ್ನು ವಿತರಿಸುವ ಜತೆಗೆ, ತೆಂಗಿನ ಸಸಿಗಳನ್ನು ನೆಟ್ಟು ನೀರೆರೆದರು.
Vijaya Karnataka Web coconut day in loksar
ಲೋಕಸರದಲ್ಲಿ ತೆಂಗು ದಿನಾಚರಣೆ


ಕಲ್ಪವೃಕ್ಷ ಯುವಕರ ಸಂಘವು ಆಯೋಜಿಸಿದ್ದ ಈ ಕಾರ‌್ಯಕ್ರಮವನ್ನು ಜಿಲ್ಲಾ ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಶಿವರುದ್ರಯ್ಯ ಉದ್ಘಾಟಿಸಿ ಮಾತಾಡಿ ದರು. ಹೈಬ್ರಿಡ್ ತಳಿಗಳಿಂದ ಇಂದು ಮಣ್ಣಿನ ಸತ್ವ ಹಾಗೂ ದೇಶೀಯ ತಿಪಟೂರು ತೆಂಗು ತಳಿಯು ನಶಿಸಿಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂತರ ಬೇಸಾಯ ಪದ್ಧತಿಯಲ್ಲಿ ಈವರೆಗೆ ತೆಂಗು ಬೆಳೆ ಬೆಳೆಯಲಾಗುತ್ತಿದೆ. ಆದರೆ, ತೆಂಗನ್ನೇ ಪ್ರಮುಖ ಬಹು ವಾರ್ಷಿಕ ಬೆಳೆಯಾಗಿ ರೈತರು ಬೆಳೆದರೆ ನಿರಂತರ ಆದಾಯ ಗಳಿಸಬಹುದು. ತೆಂಗಿನ ಇತರ ಉತ್ಪನ್ನಗಳಿಂದಲೂ ಆದಾಯ ಬರಲಿದೆ. ಹೀಗಾಗಿ ಪ್ರಗತಿಪರ ರೈತರು ದೇಶಿಯ ತಳಿಯ ತೆಂಗನ್ನು ರಕ್ಷಿಸಿ, ಮುಂದಿನ ತಲೆಮಾರಿಗೂ ಕೊಡುಗೆಯಾಗಿ ನೀಡಬೇಕು ಎಂದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್ ಮಾತನಾಡಿ, ಬಹು ಉಪಯೋಗಿ ತೆಂಗು ಇಂದು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರಗಾಲ ಹಾಗೂ ನೀರಿನ ಕೊರತೆಯಿಂದ ನಾಶವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತೆಂಗು ಬೆಳೆ ರಕ್ಷಣೆಗಾಗಿ ಕೆಲವೆಡೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿ ಕೊಳ್ಳಲಾಗಿದೆ. ತೆಂಗಿನ ಯಾವುದೇ ಉತ್ಪನ್ನಗಳು, ಭಾಗಗಳೂ ನಿರುಪಯೋಗಿ ಯಲ್ಲ. ತೆಂಗಿನ ಎಲ್ಲ ಭಾಗಗಳೂ ಉಪಯುಕ್ತ ಎಂದು ತಿಳಿಸಿದರು.

ಮಂಗಲ ಗ್ರಾ.ಪಂ. ಅಧ್ಯಕ್ಷ ಎಂ.ಎಚ್.ಗಿರೀಶ್, ಸದಸ್ಯರಾದ ಜಯ ಶಂಕರ್, ಎಲ್.ಎನ್.ಸತೀಶ್, ಪುಟ್ಟೀರಮ್ಮ, ನಸೀಮಾಬಿ, ವ್ಯವಸಾಯ ಸೇವಾ ಸಹಕಾರ ಸಂಘದ ಎಂ.ಸಿ.ಕುಮಾರ ಗೌಡ, ಕಲ್ಪವೃಕ್ಷ ಯುವಕರ ಸಂಘದ ಅದ್ಯಕ್ಷ ಮಹದೇವಸ್ವಾಮಿ, ಎಂಪಿಸಿಎಸ್ ಕಾರ‌್ಯದರ್ಶಿ ಎಲ್.ಬಿ.ಪ್ರಸಾದ್, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಎಲ್.ಸಿ.ಗಂಗಾಧರ್, ಕುಮಾರ, ನೆಲದನಿ ಸಂಘಟನೆಯ ಯೋಗೇಶ್, ಶಿವಮಲ್ಲು, ರಘು, ಮಹೇಶ್, ಹರ್ಷ, ಕಾಂತರಾಜು, ಜನಾರ್ಧನ್ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ