ಆ್ಯಪ್ನಗರ

ದೇಗುಲದ ಹುಂಡಿಯಲ್ಲಿ 10.96 ಲಕ್ಷ ಸಂಗ್ರಹ

ತಾಲೂಕಿನ ಸಾಸಲು ಗ್ರಾಮದ ಶಂಭುಲಿಂಗೇಶ್ವರ ಹಾಗೂ ಸೋಮೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಸಮಯದಲ್ಲಿ ಹುಂಡಿಯಲ್ಲಿ 10.96 ಲಕ್ಷ ಸಂಗ್ರಹವಾಗಿದೆ.

Vijaya Karnataka 30 Nov 2017, 5:15 am
ಕಿಕ್ಕೇರಿ: ತಾಲೂಕಿನ ಸಾಸಲು ಗ್ರಾಮದ ಶಂಭುಲಿಂಗೇಶ್ವರ ಹಾಗೂ ಸೋಮೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ಸಮಯದಲ್ಲಿ ಹುಂಡಿಯಲ್ಲಿ 10.96 ಲಕ್ಷ ಸಂಗ್ರಹವಾಗಿದೆ.
Vijaya Karnataka Web collection of 10 96 lakhs at the shrine
ದೇಗುಲದ ಹುಂಡಿಯಲ್ಲಿ 10.96 ಲಕ್ಷ ಸಂಗ್ರಹ


ತಾಲೂಕಿನಲ್ಲಿ ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿ ಪಡೆದಿರುವ ಕಿಕ್ಕೇರಿ ಹೋಬಳಿಯ ನಾಗ ಕೇಂದ್ರ ಸಾಸಲು ಗ್ರಾಮದ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ಕ್ಷೇತ್ರದಲ್ಲಿ ಕಡೆಯ ಕಾರ್ತಿಕ ಸೋಮವಾರಗಳ ಪೂಜೆ ಮುಕ್ತಾಯ ಗೊಂಡ ಹಿನ್ನೆಲೆ ಹುಂಡಿ ಎಣಿಕೆ ಕಾರ‌್ಯ ನಡೆಯಿತು.

ಬೆಳಗ್ಗೆಯಿಂದಲೇ ಹುಂಡಿಯಲ್ಲಿ ಸಂಗ್ರಹವಾಗದ ಹಣದ ಎಣಿಕೆ ಕಾರ‌್ಯ ನಡೆಯಿತು, ರಾತ್ರಿ ಸುಮಾರು 9ರವರೆಗೆ ಎಣಿಕೆ ಕಾರ‌್ಯ ಸಂಪೂರ್ಣವಾಗಿ ಮುಕ್ತಯ ಗೊಂಡಿದ್ದು, 10.96 ಲಕ್ಷ ರೂ. ಸಂಗ್ರಹವಾಗಿದ್ದು, ವಿಜಯ ಬ್ಯಾಂಕ್‌ನಲ್ಲಿರುವ ದೇವಾಲಯದ ಖಾತೆಗೆ ಜಮಾ ಮಾಡ ಲಾಯಿತು. ಎಣಿಕೆ ಕಾರ‌್ಯಕ್ಕೆ 30 ಮಂದಿ ಗ್ರಾಮ ಲೆಕ್ಕಿಗರು, 10ಮಂದಿ ಗ್ರಾಮ ಸಹಾಯಕರು, ನಾಲ್ಕು ಮಂದಿ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.

ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ಮಾತನಾಡಿ, ದೇವಾಲಯಕ್ಕೆ ರಾಜ್ಯಾದ್ಯಂತ ತನ್ನದೇ ಆದ ಭಕ್ತರನ್ನು ಹೊಂದಿದ್ದು, ಕಾರ್ತಿಕ ಮಾಸದಲ್ಲಿ ಹುಂಡಿ ಹಣ ಹಾಗೂ ಹರಾಜು ಪ್ರಕ್ರಿಯೆಯಿಂದ 30 ಲಕ್ಷದಷ್ಟು ಹಣ ಸಂಗ್ರಹ ವಾಗುತ್ತದೆ. ಆದರೆ, ದೇವಾಲಯದ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ದೇವಾಲಯಕ್ಕೆ ಬರುವ ಭಕ್ತರಿಗೆ ಮೂಲ ಸೌಕರ‌್ಯಗಳಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಿಗುತ್ತಿಲ್ಲ. ದೇವಾಲಯಕ್ಕೆ ಹೆಚ್ಚಿನ ಭಕ್ತರು ಬರುವ ದೃಷ್ಟಿಯ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ದೇವಾಲಯಕ್ಕೆ ವಿಶೇಷ ಆಧಿಕಾರಿಯನ್ನು ನೇಮಕ ಮಾಡಿ ಎಲ್ಲಾ ವ್ಯವಹಾರ ವನ್ನು ನೋಡಿಕೊಳ್ಳುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಎರಡು ದೇವಾಲಯಗಳು ಶಿಥಿಲಾವಸ್ಥೆ ತಲುಪಿವೆ. ಆದಷ್ಟು ಬೇಗ ದೇವಾಲಯ ಮೇಲ್ಭಾಗವನ್ನು ಸರಿಪಡಿಸಬೇಕು, ಜತೆಗೆ ಪ್ರಯಾಣಿಕರಿಗೆ ರಾತ್ರಿ ತಂಗುವ ವ್ಯವಸ್ಥೆ ಮಾಡಬೇಕು ಇದರೊಂದಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಎಣಿಕೆ ಕಾರ‌್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ಡಾರ್ ಮಾದೇಗೌಡ, ಮುಜರಾಯಿ ಇಲಾಖೆ ಸಹಾಯಕಿ ಚಂದ್ರಿಕ, ಉಪ ತಹಸೀಲ್ದಾರ್ ಲಕ್ಷ್ಮೀಕಾಂತ್, ಚಂದ್ರಶೇಖರ್, ಪ್ರಭಾರ ಉಪ ತಹಸೀಲ್ದಾರ್ ರಾಮಚಂದ್ರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ