ಆ್ಯಪ್ನಗರ

ರೈತರ ಹಿತ ಕಾಯುವ ಪಕ್ಷದಿಂದ ಸ್ಪರ್ಧೆ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖಂಡ ಕೆ.ಎಸ್ ನಂಜುಂಡೇಗೌಡ ಇದೇ ಮೊದಲ ಬಾರಿಗೆ ಕಾವೇರಿ ಕಣಿವೆ ರೈತರ ಹಿತ ಕಾಯುವ ರಾಜಕೀಯ ಪಕ್ಷ ಆಯ್ಕೆ ಮಾಡಿಕೊಂಡು ಆ ಪಕ್ಷದಿಂದ ಲೇ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.

Vijaya Karnataka 10 Sep 2017, 5:15 am
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖಂಡ ಕೆ.ಎಸ್ ನಂಜುಂಡೇಗೌಡ ಇದೇ ಮೊದಲ ಬಾರಿಗೆ ಕಾವೇರಿ ಕಣಿವೆ ರೈತರ ಹಿತ ಕಾಯುವ ರಾಜಕೀಯ ಪಕ್ಷ ಆಯ್ಕೆ ಮಾಡಿಕೊಂಡು ಆ ಪಕ್ಷದಿಂದ ಲೇ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.
Vijaya Karnataka Web competition from farmers waiting party
ರೈತರ ಹಿತ ಕಾಯುವ ಪಕ್ಷದಿಂದ ಸ್ಪರ್ಧೆ


ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಅವರ ಹಿತೈಷಿಗಳು ಹಾಗೂ ಬೆಂಬಲಿಗರು ಏರ್ಪಡಿಸಿದ್ದ ಕಾವೇರಿ ನೀರು ನಮ್ಮ ಜೀವ ಸೆಲೆ ಇದರ ಸಂರಕ್ಷಣೆಗಾಗಿ ರಾಜಕೀಯ ಶಕ್ತಿ ನೀಡುವ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಸತತ 6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಅದು ನನ್ನ ಸೋಲಲ್ಲ ನೈತಿಕ ವಾಗಿ ನಾನು ಗೆದ್ದಿದ್ದೇನೆ. 6 ಚುನಾವಣೆಯಲ್ಲಿ ಕ್ಷೇತ್ರದ ಮತದಾರರೇ ಚುನಾವಣೆ ಖರ್ಚು ಭರಿಸಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿಯೂ 42 ಲಕ್ಷ ಹಣ ವೆಚ್ಚ ಮಾಡಿದ್ದರು 25 ಸಾವಿರ ಮತಗಳನ್ನು ನೀಡಿದ್ದಾರೆ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಯಿಂದಾಗಿ ಚುನಾವಣೆ ಸೋಲಿನಿಂದ ಧೃತಿಗೆಟ್ಟಿಲ್ಲ ಎಂದರು.

1989 ರಲ್ಲಿ ಕಾವೇರಿ ನ್ಯಾಯಾಧೀಕರಣ ತೀರ್ಪು ಜಾರಿಯಾದಾಗಿನಿಂದ ಕಾವೇರಿ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇನೆ. ಕಾವೇರಿ ನೀರಿನ ಹೋರಾಟ ದಿಂದಾಗಿಯೇ ಜೈಲು ವಾಸ ಅನುಭವಿಸಿದ್ದೇನೆ, 10ಕ್ಕೂ ಹೆಚ್ಚು ಕೇಸುಗಳಿಗೆ ಈಗಲೂ ನ್ಯಾಯಾಲಯಕ್ಕೆ ಅಲೆಯುತ್ತಿದ್ದೇನೆ. ನಿರಂತರ ಜನರ ಮಧ್ಯದಲ್ಲಿರುವ ನಾನು ಕಾವೇರಿ ಕಣಿವೆಯ ರೈತರ ನೀರಿನ ಹಕ್ಕು ಉಳಿಸಿಕೊಳ್ಳುವ ಸಲುವಾಗಿ ವಿಧಾನಸಭೆಗೆ ಪ್ರವೇಶ ಮಾಡಲೇಬೇಕಾಗಿದೆ. ಕಾವೇರಿ ಕಣಿವೆಯ ರೈತರ ಹಿತ ಕಾಯುವ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಂಡು ಆ ಪಕ್ಷದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಪ್ರಾದೇಶಿಕ ಪಕ್ಷ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರ ಜತೆಯೂ ಮಾತುಕತೆ ನಡೆಸಿದ್ದೇನೆ ಶೀಘ್ರದಲ್ಲಿಯೇ ಪಕ್ಷ ಸೇರ್ಪಡೆಯನ್ನು ಕ್ಷೇತ್ರದ ಮತದಾರರಿಗೆ ತಿಳಿಸುತ್ತೇನೆ ಎಂದು ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕಷ್ಣೇಗೌಡ, ರೈತ ಮುಖಂಡ ಪಾ.ಲ ರಾಮೇಗೌಡ, ಪಿಎಸ್‌ಎಸ್‌ಕೆ ನಿರ್ದೇಶಕ ಬಿ.ಸಿ ಕಷ್ಣೇಗೌಡ, ಉಪನ್ಯಾಸಕ ಬಸವರಾಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿದರು.

ರೈತ ಮಹಿಳೆ ನಾಗಮ್ಮ ಕಾರ‌್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾ.ಪಂ ಅಧ್ಯಕ್ಷ ರವಿಲಕ್ಷ್ಮಣ, ಮುಖಂಡ ರಾದ ಎಲೆಚಾಕನಹಳ್ಳಿ ಸೋಮಣ್ಣ, ಕೆಆರ್‌ಎಸ್ ಮಹದೇವು, ಹನಿಯಂಬಾಡಿ ನಾಗರಾಜು, ಕಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಡಿ.ಎಂ ರವಿ, ಪಿಎಸ್‌ಎಸ್‌ಕೆ ನಿರ್ದೇಶಕ ಪಾಂಡು, ರೈತ ಸಂಘದ ಯುವ ಘಟಕದ ಅಧ್ಯಕ್ಷ ಬಾಬು, ಎಂ.ವಿ ಕಷ್ಣ, ಮಾದೇಗೌಡ,ಕೆಆರ್‌ಎಸ್ ಸ್ವಾಮಿಗೌಡ,ದೊಡ್ಡಪಾಳ್ಯ ಡೈರಿನಾಗರಾಜು, ಕೊಡಿಯಾಲ ಕೇಶವಮೂರ್ತಿ, ಕೊಲಕಾರನದೊಡ್ಡಿ ಮಹದೇವು, ಗಾರ್ವ್ಮೆಂಟ್ಸ್ ಯೂನಿಯನ್ ಅಧ್ಯಕ್ಷೆ ಪದ್ಮಮ್ಮ, ಕೆಂಪೇಗೌಡ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ