ಆ್ಯಪ್ನಗರ

ವಾರ್ಕಿಗ್‌ ಶುಲ್ಕ ಪಾವತಿ ವಿಚಾರಕ್ಕೆ ಘರ್ಷಣೆ

ಬಳಸಿದ್ದೇವೆ/ ಗ್ರಾಮಾಂತರಕ್ಕೂ ಕೊಟ್ಟಿದ್ದೇವೆ...

Vijaya Karnataka 18 May 2019, 5:00 am
Vijaya Karnataka Web conflict war wig for parking fee issue in srirangapattana
ವಾರ್ಕಿಗ್‌ ಶುಲ್ಕ ಪಾವತಿ ವಿಚಾರಕ್ಕೆ ಘರ್ಷಣೆ
ಶ್ರೀರಂಗಪಟ್ಟಣ: ಪಟ್ಟಣ ಹೊರವಲಯದ ಗಂಜಾಂನ ದೊಡ್ಡ ಗೀಸಾಯಿ ಗಾಟ್‌ ಬಳಿ ಪಾರ್ಕಿಂಗ್‌ ಶುಲ್ಕ ಪಾವತಿ ಮಾಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಹುಣಸೂರು ಮೂಲದ 9 ಪ್ರವಾಸಿಗರು ಎರಡು ಕಾರಿನಲ್ಲಿ ಗೋಸಾಯಿ ಗಾಟ್‌ಗೆ ಆಗಮಿಸಿದ್ದರು. ಆ ವೇಳೆ ಮುಜರಾಯಿ ಇಲಾಖೆ ನೌಕರ ಚಂದ್ರು ಎಂಬುವರು ಕಾರಿನ ಪಾರ್ಕಿಂಗ್‌ ಹಣ ಕೇಳಿದ್ದಾರೆ. ನಾವು ಸಹ ಸ್ಥಳೀಯರೇ, ಪಾರ್ಕಿಂಗ್‌ ಹಣ ನೀಡುವುದಿಲ್ಲ ಎಂದು ಪ್ರವಾಸಿಗರು ವಾಗ್ವಾದ ಆರಂಭಿಸಿದ್ದಾರೆ.
ಈ ವೇಳೆ ಚಂದ್ರ ಹಾಗೂ ಪ್ರವಾಸಿಗರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಪ್ರವಾಸಿಗರು ಚಂದ್ರು ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಚಂದ್ರು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರವಾಸಿಗ ಮಿರ್ಜಾರಾಜಿಕ್‌ ಬೇಗ್‌ ಎಂಬುವರು ತೀರ್ವವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಎರಡೂ ಕಡೆಯವರು ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ