ಶ್ರೀರಂಗಪಟ್ಟಣ: ಕಾಂಗ್ರೆಸ್ ಸರಕಾರ ಖಜಾನೆ ಲೂಟಿ ಮಾಡಿದ ಹಣದಲ್ಲಿ ಚುನಾವಣೆ ನಡೆಸುತ್ತಿದೆ. ದುಡ್ಡಿನ ಮೇಲೆ ರಾಜಕಾರಣ ಮಾಡಲು ಹೊರಟ ಕಾಂಗ್ರೆಸ್ಗೆ ಬುದ್ಧಿ ಕಲಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ತಾಲೂಕಿನ ಬಾಬುರಾಯನಕೊಪ್ಪಲು ಬಳಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ನಮ್ಮಿಂದಲೇ ಬೆಳೆದವರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ನಾನು ಏನು ತಪ್ಪು ಮಾಡಿದ್ದೇನೆ? ಏಕೆ ಹೋಗಿದ್ದಾರೆ? ಎಂಬುದು ಗೊತ್ತಿಲ್ಲ. ಮಾಜಿ ಶಾಸಕ ಎ.ಬಿ ರಮೇಶಬಂಡಿಸಿದ್ದೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಎಚ್ಡಿಕೆ ಪಕ್ಷ ದ ಕಾರ್ಯಕರ್ತರೇ ಆಸ್ತಿ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ದ ಅಭ್ಯರ್ಥಿ ಗೆಲ್ಲಿಸಿ ನನ್ನ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಂಸದ ಸಿ.ಎಸ್.ಪುಟ್ಟರಾಜು, ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಹಾಜರಿದ್ದರು. ಮಹದೇವಪುರದಿಂದ ಆರಂಭವಾದ ರೋಡ್ ಶೋ ಶಾಂತಿಕೊಪ್ಪಲು, ಚಿಕ್ಕಪಾಳ್ಯ, ಹಂಗರಹಳ್ಳಿ, ದೊಡ್ಡಪಾಳ್ಯ, ಶ್ರೀನಿವಾಸ ಅಗ್ರಹಾರ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ. ಪಾಲಹಳ್ಳಿ, ಪಿ. ಹೊಸಹಳ್ಳಿ, ಬೆಳಗೊಳ, ಹುಲಿಕೆರೆ, ಕೆಆರ್ಎಸ್ನಲ್ಲಿ ರೋಡ್ ಶೋ ನಡೆಸಿದ ಎಚ್ಡಿಕೆ ನಂತರ ಕೆ.ಆರ್ ಪೇಟೆಗೆ ತೆರಳಿದರು.
ತಾಲೂಕಿನ ಬಾಬುರಾಯನಕೊಪ್ಪಲು ಬಳಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ನಮ್ಮಿಂದಲೇ ಬೆಳೆದವರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ನಾನು ಏನು ತಪ್ಪು ಮಾಡಿದ್ದೇನೆ? ಏಕೆ ಹೋಗಿದ್ದಾರೆ? ಎಂಬುದು ಗೊತ್ತಿಲ್ಲ. ಮಾಜಿ ಶಾಸಕ ಎ.ಬಿ ರಮೇಶಬಂಡಿಸಿದ್ದೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಎಚ್ಡಿಕೆ ಪಕ್ಷ ದ ಕಾರ್ಯಕರ್ತರೇ ಆಸ್ತಿ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ದ ಅಭ್ಯರ್ಥಿ ಗೆಲ್ಲಿಸಿ ನನ್ನ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಂಸದ ಸಿ.ಎಸ್.ಪುಟ್ಟರಾಜು, ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಹಾಜರಿದ್ದರು. ಮಹದೇವಪುರದಿಂದ ಆರಂಭವಾದ ರೋಡ್ ಶೋ ಶಾಂತಿಕೊಪ್ಪಲು, ಚಿಕ್ಕಪಾಳ್ಯ, ಹಂಗರಹಳ್ಳಿ, ದೊಡ್ಡಪಾಳ್ಯ, ಶ್ರೀನಿವಾಸ ಅಗ್ರಹಾರ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ. ಪಾಲಹಳ್ಳಿ, ಪಿ. ಹೊಸಹಳ್ಳಿ, ಬೆಳಗೊಳ, ಹುಲಿಕೆರೆ, ಕೆಆರ್ಎಸ್ನಲ್ಲಿ ರೋಡ್ ಶೋ ನಡೆಸಿದ ಎಚ್ಡಿಕೆ ನಂತರ ಕೆ.ಆರ್ ಪೇಟೆಗೆ ತೆರಳಿದರು.