ಆ್ಯಪ್ನಗರ

ಕಂಟೇನರ್‌ ಅಡ್ಡಗಟ್ಟಿ ದರೋಡೆ

ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಬೊಮ್ಮೂರು ಅಗ್ರಹಾರ ಬಳಿ ಬುಧವಾರ ತಡರಾತ್ರಿ ಕಂಟೇನರ್‌ವೊಂದನ್ನು ಅಡ್ಡಗಟ್ಟಿದ 8 ಮಂದಿ ದರೋಡೆಕೋರರು ಮಾರಕಾಸ್ತ್ರ ತೋರಿಸಿ ಚಾಲಕನ ಬಳಿಯಿದ್ದ 35,900 ರೂ. ಹಾಗೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

Vijaya Karnataka 21 Jun 2019, 5:00 am
ಶ್ರೀರಂಗಪಟ್ಟಣ : ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ಬೊಮ್ಮೂರು ಅಗ್ರಹಾರ ಬಳಿ ಬುಧವಾರ ತಡರಾತ್ರಿ ಕಂಟೇನರ್‌ವೊಂದನ್ನು ಅಡ್ಡಗಟ್ಟಿದ 8 ಮಂದಿ ದರೋಡೆಕೋರರು ಮಾರಕಾಸ್ತ್ರ ತೋರಿಸಿ ಚಾಲಕನ ಬಳಿಯಿದ್ದ 35,900 ರೂ. ಹಾಗೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.
Vijaya Karnataka Web container robbery in mandya
ಕಂಟೇನರ್‌ ಅಡ್ಡಗಟ್ಟಿ ದರೋಡೆ


ಉತ್ತರಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಮಾನಪಟ್ಟಿ ಗ್ರಾಮದ ಶಾರುಖ್‌ಶೇಖ್‌ ಹಣ ಕಳೆದುಕೊಂಡವರು.

ಕಾರು ಹಾಗೂ ಬೈಕ್‌ನಲ್ಲಿ ಬಂದ 8 ಮಂದಿ ದರೋಡೆಕೋರರು ಮೈಸೂರಿನಿಂದ ಬೆಂಗಳೂರು ಕಡೆಗೆ ರಾತ್ರಿ 10.30ರ ಸುಮಾರಿಗೆ ತೆರಳುತ್ತಿದ್ದ ಕಂಟೇನರ್‌ ಅಡ್ಡಗಟ್ಟಿ ಹಣ ಮತ್ತು ಮೊಬೈಲ್‌ ಕಸಿದು ಪರಾರಿಯಾದರು ಎಂದು ಕಂಟೇನರ್‌ ಲಾರಿ ಚಾಲಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ