ಆ್ಯಪ್ನಗರ

ದೇಶದ ಆರ್ಥಿಕ ಅಭ್ಯುದಯಕ್ಕೆ ಕೊಡುಗೆ ನೀಡಿ

ತಾಂತ್ರಿಕ ಪದವೀಧರರು ಹೊಸ ಹೊಸ ಸಂಶೋಧನೆ, ಆವಿಷ್ಕಾರಗಳ ಮೂಲಕ ದೇಶದ ತಾಂತ್ರಿಕತೆ ಮತ್ತು ಆರ್ಥಿಕತೆಯ ಅಭ್ಯುದಯಕ್ಕೆ ಕೊಡುಗೆ ನೀಡಬೇಕು ಎಂದು ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾನಿಲಯದ ವಿದ್ಯುತ್ ಮತ್ತು ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್ ವಿಭಾಗದ ಗೌರವ ಪ್ರಾಧ್ಯಾಪಕ ಪ್ರೊ.ರಂಗರಾಜ್ ಎಂ.ರಂಗಯ್ಯನ್ ಕರೆ ನೀಡಿದರು.

ವಿಕ ಸುದ್ದಿಲೋಕ 13 Aug 2017, 5:15 am
ಮಂಡ್ಯ: ತಾಂತ್ರಿಕ ಪದವೀಧರರು ಹೊಸ ಹೊಸ ಸಂಶೋಧನೆ, ಆವಿಷ್ಕಾರಗಳ ಮೂಲಕ ದೇಶದ ತಾಂತ್ರಿಕತೆ ಮತ್ತು ಆರ್ಥಿಕತೆಯ ಅಭ್ಯುದಯಕ್ಕೆ ಕೊಡುಗೆ ನೀಡಬೇಕು ಎಂದು ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾನಿಲಯದ ವಿದ್ಯುತ್ ಮತ್ತು ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್ ವಿಭಾಗದ ಗೌರವ ಪ್ರಾಧ್ಯಾಪಕ ಪ್ರೊ.ರಂಗರಾಜ್ ಎಂ.ರಂಗಯ್ಯನ್ ಕರೆ ನೀಡಿದರು.
Vijaya Karnataka Web contribute to the economic prosperity of the country
ದೇಶದ ಆರ್ಥಿಕ ಅಭ್ಯುದಯಕ್ಕೆ ಕೊಡುಗೆ ನೀಡಿ


ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ 8ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಮತ್ತು ಪ್ರಶಸ್ತಿ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಎಂಜಿನಿಯರ್ ಆದವರು ಹೆಚ್ಚಿನ ಕೌಶಲ್ಯವಂತಾಗಬೇಕು. ಮಾಡುವ ಕೆಲಸದಲ್ಲಿ ಆಸಕ್ತಿ, ಬದ್ಧತೆ ಮತ್ತು ಉತ್ಸಾಹವಿರಬೇಕು. ಆಗ ತೃಪ್ತಿಕರ ಫಲಿತಾಂಶ ಸಿಗುತ್ತದೆ ಎಂದು ಹೇಳಿದರು.

ತಾಂತ್ರಿಕ ಪದವೀಧರರು ಜ್ಞಾನ ಸಂಪಾದಿಸಿ, ತಾಂತ್ರಿಕ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಆಗಷ್ಟೇ ಅಭಿವೃದ್ಧಿ ಸಾಧ್ಯ. ಕೌಶಲ್ಯವಿದ್ದಾಗ ಮಾತ್ರ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜತೆಗೆ, ಕೆಲಸದಲ್ಲಿ ಹೊಸ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಕೆಲಸಕ್ಕೆ ಸೇರಿದ ನಂತರ ಲ್ಯಾಬ್ ಮತ್ತು ಇತರ ಕೆಲಸಗಳನ್ನು ಟೀಂವರ್ಕ್‌ನಲ್ಲಿ ಮಾಡಬೇಕು. ಇದರಿಂದ ಹೆಚ್ಚಿನ ಸಮಸ್ಯೆ ಗಳನ್ನು ಸುಲಭವಾಗಿ, ತ್ವರಿತವಾಗಿ ಪರಿಹರಿಸ ಬಹುದು. ಪ್ರಾಮಾಣಿಕತೆ ಮತ್ತು ಪರಿಶ್ರಮ ದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.

ಹೈದರಾಬಾದ್‌ನ ನಾಗಾರ್ಜುನ ಫರ್ಟಿಲೈಜರ್ಸ್‌ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ರಾಜು ಮಾತನಾಡಿ, ಈವರೆಗೆ ನೀವು ಕಾಲೇಜು, ಪಾಠಪ್ರವಚನ, ಪಠ್ಯಕ್ರಮವನ್ನಷ್ಟೇ ನೋಡಿಕೊಂಡು ಹಾಗೂ ಕೇಳಿಕೊಂಡಿದ್ದೀರಿ. ಆದರೆ ಇನ್ನು ಮುಂದೆ ತಾವೇನು ಎಂಬುದನ್ನು ಅರಿಯಬೇಕು. ನಿಮ್ಮ ಜ್ಞಾನದಿಂದ ತಾಂತ್ರಿಕತೆ ಯ ಬೀಜವನ್ನು ವಿಶ್ವದೆಡೆಲ್ಲೆಡೆ ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.
ಪಿಇಟಿ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ಚೌಡಯ್ಯ, ಪ್ರಾಂಶುಪಾಲ ಡಾ.ವಿ.ಶ್ರೀಧರ್, ಉಪ ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ನರಸಿಂಹಚಾರಿ, ಡೀನ್ ಡಾ.ಪಿ.ಎಸ್.ಪುಟ್ಟಸ್ವಾಮಿ, ಡಾ.ಬಿ.ಎಸ್. ಶಿವಕುಮಾರ್, ಎಂ.ಎನ್.ವೀಣಾ, ಡಾ.ಶಂಕರೇಗೌಡ, ಡಾ.ಸಂಜುಯ್ ಹಾಜರಿದ್ದರು.

ಚಿನ್ನದ ಪದಕ ಪಡೆದವರು
ವಿವಿಧ ವಿಷಯಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ಎಂ.ಎಸ್.ನಾಗನಂದನ್, ಸುಧಾರ, ಎಚ್.ಕೆ.ವಿದ್ಯಾಶ್ರೀ, ಎಚ್.ಎನ್.ಮಧುಶ್ರೀ, ಶೃತಿ ಎನ್.ವೈದ್ಯ, ಶುಭಂ ದೇ, ಎಚ್.ಎಂ.ರಚನ, ಡಿ.ಶ್ರೀನಿವಾಸ, ಇಫತ್ ಮುಜೀದ್, ಎಂ.ಅಕ್ಷತಾ, ಹರಿಪ್ರಸಾದ್, ಎನ್.ಸುದರ್ಶನ್, ಆರ್.ದೀಕ್ಷಿತ್, ಎಚ್.ಎನ್.ಚಂದುಶ್ರೀ, ಎಚ್.ಪಿ.ಹರ್ಷಿತ, ಎಸ್.ಕಾವ್ಯ ಅವರಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು. ವಿಶೇಷ ಪದಕ ಪುರಸ್ಕೃತರಾದ ಎನ್.ಶೃತಿ, ಎಂ.ಎಸ್.ನಾಗನಂದನ್, ಸುಧಾರ, ಎಚ್.ಕೆ.ವಿದ್ಯಾಶ್ರೀ, ಎಸ್.ಸಹನ, ಟಿ.ಎಸ್.ಸೌಜನ್ಯ, ನಂಜುಂಡಸ್ವಾಮಿ ಅವರಿಗೆ ಚೌಡಯ್ಯ ಮೆರಿಟ್ ಪ್ರಶಸ್ತಿ ನೀಡಲಾಯಿತು. ಪದವಿ ಪೂರೈಸಿದ 560 ವಿದ್ಯಾರ್ಥಿಗಳು ಸಮಾರಂಭದಲ್ಲಿ ಪದವಿ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ