ಮಂಡ್ಯ: ಮಳವಳ್ಳಿಯಲ್ಲಿ ಕಪ್ಪು-ಬಿಳುಪು ಹಣದ ದಂಧೆಯಲ್ಲಿ ಕಮಿಷನ್ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಹತ್ತು ಲಕ್ಷ ರೂ. ಕಳೆದುಕೊಂಡಿದ್ದಾರೆ. ಶ್ರೀನಿವಾಸ್ ಎಂಬವರು ಹಣ ಕಳೆದುಕೊಂಡವರು.
ಶೇ 20 ಕಮಿಷನ್ ನೀಡುವುದಾಗಿ ಹೇಳಿ ಶ್ರೀನಿವಾಸ್ ಎಂಬ ವ್ಯಕ್ತಿ ಎರಡು ಸಾವಿರ ರೂ.ಮುಖಬೆಲೆಯ ಹತ್ತು ಲಕ್ಷ ರೂ. ಪಡೆದುಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿರಬೇಕಾದರೆ ನಮ್ಮ ಕಾರ್ಗೆ ಮೊಟ್ಟೆ ಹೊಡೆದು ಹಣ ದೋಚಿರುವುದಾಗಿ ಹಣ ಕಳೆದುಕೊಂಡಿರುವ ಶ್ರೀನಿವಾಸ್ ಕಿರುಗಾವಲು ಠಾಣೆಗೆ ದೂರು ನೀಡಿದ್ದಾರೆ.
ನೋಟು ಬದಲಾವಣೆ ದಂಧೆಯಲ್ಲಿ ಸುಮಾರು 57 ಲಕ್ಷ ರೂ. ಮೋಸ ಆಗಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ನೋಟು ಬದಲಾವಣೆಗೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಶೇ 20 ಕಮಿಷನ್ ನೀಡುವುದಾಗಿ ಹೇಳಿ ಶ್ರೀನಿವಾಸ್ ಎಂಬ ವ್ಯಕ್ತಿ ಎರಡು ಸಾವಿರ ರೂ.ಮುಖಬೆಲೆಯ ಹತ್ತು ಲಕ್ಷ ರೂ. ಪಡೆದುಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿರಬೇಕಾದರೆ ನಮ್ಮ ಕಾರ್ಗೆ ಮೊಟ್ಟೆ ಹೊಡೆದು ಹಣ ದೋಚಿರುವುದಾಗಿ ಹಣ ಕಳೆದುಕೊಂಡಿರುವ ಶ್ರೀನಿವಾಸ್ ಕಿರುಗಾವಲು ಠಾಣೆಗೆ ದೂರು ನೀಡಿದ್ದಾರೆ.
ನೋಟು ಬದಲಾವಣೆ ದಂಧೆಯಲ್ಲಿ ಸುಮಾರು 57 ಲಕ್ಷ ರೂ. ಮೋಸ ಆಗಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ನೋಟು ಬದಲಾವಣೆಗೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.