ಆ್ಯಪ್ನಗರ

ಅನುಕೂಲ ಪಡೆದವರೇ ಸುಮಲತಾ ಕಣ್ಣಲ್ಲಿ ನೀರು ಹಾಕಿಸುತ್ತಿದ್ದಾರೆ: ದರ್ಶನ್‌

ಅಂಬರೀಷ್ ಪತ್ನಿ ಸುಮಲತಾ ಅವರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡವರೇ ಇಂದು ರಾಜಕೀಯಕ್ಕಾಗಿ ಅವರನ್ನು ಟೀಕಿಸುತ್ತಿದ್ದಾರೆ ಎಂದು ನಟ 'ಯಜಮಾನ' ದರ್ಶನ್ ಅವರು ಆರೋಪಿಸಿದ್ದಾರೆ.

Vijaya Karnataka Web 4 Apr 2019, 10:08 am
ಕೆ.ಆರ್‌.ಪೇಟೆ: ಮಂಡ್ಯ ಜಿಲ್ಲೆಗೆ ಕಾವೇರಿ ತೀರ್ಪಿನಲ್ಲಿ ಅನ್ಯಾಯವಾದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾವೇರಿ ಚಳವಳಿಗೆ ಧುಮುಕಿದ ಅಂಬರೀಶ್‌ ಯಾರಿಗೂ ತೊಂದರೆ ಕೊಟ್ಟವರಲ್ಲ. ಆದರೆ ಅವರಿಂದ ಅನುಕೂಲ ಪಡೆದ ಕೆಲವರು ಅವರ ಕುಟುಂಬದವರನ್ನು ಟೀಕಿಸುತ್ತಿದ್ದಾರೆ. ಇದಕ್ಕೆಲ್ಲ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕೆಂದು ನಟ ದರ್ಶನ್‌ ತಿರುಗೇಟು ನೀಡಿದರು.
Vijaya Karnataka Web Darshan at Mandya


ತಾಲೂಕಿನ ಶೀಳನೆರೆ, ಸಂತೇಬಾಚಹಳ್ಳಿ ಹೋಬಳಿಯ ಹಲವು ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರವಾಗಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು,

''ಅಂಬರೀಷ್‌ ಅವರಿಂದ ಅನುಕೂಲ ಪಡೆದ ಕೆಲವರು ಇಂದು ಸುಮಲತಾ ಕಣ್ಣಲ್ಲಿ ನೀರು ತರಿಸುತ್ತಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡಬೇಕು. ಅಭಿಮಾನಿಗಳು ಮನೆಮನೆಗೆ ಹೋಗಿ ಪ್ರಚಾರ ಮಾಡುವ ಮೂಲಕ ನನ್ನ ಮೇಲೆ ಇಟ್ಟಿರುವ ಗೌರವವನ್ನು ಉಳಿಸಬೇಕು,'' ಎಂದರು.

ಸಚಿವ ಜಿಟಿಡಿಗೆ ಟಾಂಗ್‌

''ಅಭಿಮಾನಿಗಳು ನಟರನ್ನು ನೋಡಲು ಬರುತ್ತಾರೆ. ಆದರೆ ವೋಟ್‌ ಹಾಕುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕೆಂದು,'' ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ದರ್ಶನ್‌ ತಿರುಗೇಟು ನೀಡಿದರು.

ಸೇಬಿನ ಹಾರ: ಶೀಳನೆರೆಯಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್‌.ಅಂಬರೀಶ್‌ ನೇತೃತ್ವದಲ್ಲಿ ಸುಮಾರು 300 ಕೆ.ಜಿ. ಸೇಬಿನ ಹಣ್ಣಿನ ಹಾರವನ್ನು ಹಾಕಿ ದರ್ಶನ್‌ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಕೈಗೋನಹಳ್ಳಿಯಲ್ಲಿ ಮನ್‌ಮುಲ್‌ ನಿರ್ದೇಶಕ ಡಾಲು ರವಿ ನೇತೃತ್ವದಲ್ಲಿ ಬೃಹತ್‌ ಹಾರವನ್ನು ಜೆಸಿಬಿ ಕ್ರೇನ್‌ ಮೂಲಕ ಹಾಕಿ ಭರ್ಜರಿ ಸ್ವಾಗತ ಕೋರಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ