ಆ್ಯಪ್ನಗರ

ಕಾಲು ಜಾರಿ ನಾಲೆಗೆ ಬಿದ್ದ ಮಹಿಳೆ ಸಾವು

ಪಾಂಡವಪುರ: ತಾಲೂಕಿನ ಕಟ್ಟೇರಿ ಸಮೀಪ ವಿ.ಸಿ. ನಾಲೆಯಲ್ಲಿ ಬುಧವಾರ ಪಾತ್ರೆ ತೊಳೆಯುವ ಸಂದರ್ಭ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟರು.

Vijaya Karnataka 27 Sep 2018, 5:00 am
ಪಾಂಡವಪುರ: ತಾಲೂಕಿನ ಕಟ್ಟೇರಿ ಸಮೀಪ ವಿ.ಸಿ. ನಾಲೆಯಲ್ಲಿ ಬುಧವಾರ ಪಾತ್ರೆ ತೊಳೆಯುವ ಸಂದರ್ಭ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟರು.
Vijaya Karnataka Web death of a woman who fell to the channel
ಕಾಲು ಜಾರಿ ನಾಲೆಗೆ ಬಿದ್ದ ಮಹಿಳೆ ಸಾವು


ಕಟ್ಟೇರಿ ಗ್ರಾಮದ ನಾಗೇಗೌಡರ ಪತ್ನಿ ವಸಂತ(55) ಮೃತೆ.

ವಸಂತ ವಿ.ಸಿ.ನಾಲೆಯಲ್ಲಿ ಪಾತ್ರೆಗಳನ್ನು ತೊಳೆಯುವ ಸಂದರ್ಭ ಕಾಲು ಜಾರಿ ನಾಲೆಗೆ ಬಿದಿದ್ದಾರೆ. ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದರಿಂದ ವಸಂತಮ್ಮ ನೀರಿನಲ್ಲಿ ಮುಳುಗಿದ್ದು, ಅರಳಕುಪ್ಪೆ ಗ್ರಾಮದ ಸಮೀಪದ ವಿಸಿ ನಾಲೆಯಲ್ಲಿ ದೇಹ ದೊರೆತಿದೆ. ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ವಸಂತ ಅವರ ಪತಿ ನಾಗೇಗೌಡ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮನೆಯ ಜವಾಬ್ದಾರಿಯನ್ನು ವಸಂತ ಅವರ ಮೇಲಿತ್ತು. ಇದೀಗ ಆ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಘಟನೆ ಸಂಬಂಧ ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ