ಆ್ಯಪ್ನಗರ

ಸಾಲಬಾಧೆ: ಮೂಡ್ಯ ಗ್ರಾಮದ ರೈತ ಆತ್ಮಹತ್ಯೆ

ವಿಕ ಸುದ್ದಿಲೋಕ ಮದ್ದೂರು ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿಯ ಮೂಡ್ಯ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ...

Vijaya Karnataka 31 Aug 2018, 5:00 am
ಮದ್ದೂರು: ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿಯ ಮೂಡ್ಯ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
Vijaya Karnataka Web debt farmer suicide in moodya village in mandya district
ಸಾಲಬಾಧೆ: ಮೂಡ್ಯ ಗ್ರಾಮದ ರೈತ ಆತ್ಮಹತ್ಯೆ


ಮೂಡ್ಯ ಗ್ರಾಮದ ಚಿಕ್ಕೇಗೌಡ ಅವರ ಪುತ್ರ ಎಂ.ಸಿ.ರಾಜೇಗೌಡ(45) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು, ಈತನಿಗೆ ಪತ್ನಿ ಲತಾ ಸೇರಿದಂತೆ ಪುತ್ರಿ, ಪುತ್ರ ಇದ್ದಾರೆ.

ಗುರುವಾರ ಮಧ್ಯಾಹ್ನ ಎಂ.ಸಿ. ರಾಜೇಗೌಡರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಹಾಕಿಕೊಂಡಿದ್ದಾರೆ. ಈತನಿಗೆ ಎರಡು ಎಕರೆ ಜಮೀನಿದ್ದು, ಭತ್ತ, ರಾಗಿ, ಕಬ್ಬು ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಿದ್ದ ಎನ್ನಲಾಗಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ವ್ಯವಸಾಯ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಉಜ್ಜೀವನ್‌, ಎಲ್‌ಎನ್‌ಟಿ ಸಂಸ್ಥೆ 2 ಲಕ್ಷ ರೂ. ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ 50 ಸಾವಿರ ರೂ. ಒಡವೆ ಅಡವಿಟ್ಟಿದ್ದು, ಜತೆಗೆ 1 ಲಕ್ಷ ಕ್ಕೂ ಅಧಿಕ ಕೈಸಾಲ ಮಾಡಿರುವುದಾಗಿ ತಿಳಿದು ಬಂದಿದೆ.

ಅಧಿಕ ಕೈಸಾಲ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ಜುಗುಪ್ಸೆಗೊಂಡು ನೇಣಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ಮೃತನ ಪತ್ನಿ ಲತಾ ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ