ಆ್ಯಪ್ನಗರ

ಆರೋಪಿಗಳ ಬಂಧನಕ್ಕೆ ದಸಂಸ ಆಗ್ರಹ

ನಕಲಿ ದಾಖಲೆ ಸೃಷ್ಟಿಸಿ ಮೃತ ದಲಿತ ಮಹಿಳೆಯ ಜಮೀನನ್ನು ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳ ಬಂಧನಕ್ಕೆ 2-3 ದಿನಗಳಲ್ಲಿ ಪೊಲೀಸರು ಕ್ರಮ ವಹಿಸಬೇಕು. ಇಲ್ಲದಿದ್ದರೆ ಪೊಲೀಸ್ ಮತ್ತು ಕಂದಾಯ ಇಲಾಖೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್ ಎಚ್ಚರಿಸಿದ್ದಾರೆ.

ವಿಕ ಸುದ್ದಿಲೋಕ 1 Jun 2016, 5:15 am
ಮಂಡ್ಯ: ನಕಲಿ ದಾಖಲೆ ಸೃಷ್ಟಿಸಿ ಮೃತ ದಲಿತ ಮಹಿಳೆಯ ಜಮೀನನ್ನು ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳ ಬಂಧನಕ್ಕೆ 2-3 ದಿನಗಳಲ್ಲಿ ಪೊಲೀಸರು ಕ್ರಮ ವಹಿಸಬೇಕು. ಇಲ್ಲದಿದ್ದರೆ ಪೊಲೀಸ್ ಮತ್ತು ಕಂದಾಯ ಇಲಾಖೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್ ಎಚ್ಚರಿಸಿದ್ದಾರೆ.
Vijaya Karnataka Web demanded the arrest of the accused dasansa
ಆರೋಪಿಗಳ ಬಂಧನಕ್ಕೆ ದಸಂಸ ಆಗ್ರಹ


‘‘ಜಮೀನು ನೋಂದಣಿಗೆ ಸಹಕರಿಸಿ ಸಹಿ ಹಾಕಿದ ಆಲೇನಹಳ್ಳಿ ನಿವಾಸಿಗಳಾದ ಎ.ಎಸ್.ಸುರೇಶ್, ಗಂಗಾಧರ್ ಅವರನ್ನು ಬಂಧಿಸಲಾಗಿದೆ. ಆದರೆ, ಪ್ರಮುಖ ಆರೋಪಿಗಳ ಬಂಧನಕ್ಕೆ ಈವರೆಗೆ ಯಾವುದೇ ಕ್ರಮ ವಹಿಸಿಲ್ಲ. ಆರೋಪಿ ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆಂದು’’ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಆರೋಪಿಸಿದರು.

‘‘ಕೆ.ಆರ್.ಪೇಟೆ ತಾಲೂಕು ಆಲೇನಹಳ್ಳಿ ಗ್ರಾಮದ ದಲಿತ ಮಹಿಳೆ ದೇವಮ್ಮ ಕೋಂ ಕಾಳಯ್ಯ ಅವರ ಹೆಸರಿನಲ್ಲಿದ್ದ ಜಮೀನನ್ನು ಅದೇ ಗ್ರಾಮದ ಪ್ರಭಾಕರ ಎಂಬುವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿ ಮಹಿಳೆ ಪುಟ್ಟಮ್ಮ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿದ್ದಾರೆ. ಆಲೇನಹಳ್ಳಿ ಎಲ್ಲೆಯ ಸರ್ವೆ ನಂ. 23/1ರಲ್ಲಿ 29ಗುಂಟೆ ಮತ್ತು ಸ.ನಂ.17/5ಬಿ ನಲ್ಲಿ 1ಎಕರೆ 2ಗುಂಟೆ ಜಮೀನನ್ನು 2015 ಜೂ.13ರಂದು ಶುದ್ಧ ಕ್ರಯದ ಮೂಲಕ ನೋಂದಣಿಯಾಗಿದೆ’’ ಎಂದು ತಿಳಿಸಿದರು.

‘‘ಈ ಸಂಬಂಧ ಮೃತ ಮಹಿಳೆಯ ಸಂಬಂಧಿ ಹೊಸಹೊಳಲು ಗ್ರಾಮದ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಅಕ್ಕಿಹೆಬ್ಬಾಳು ಹೋಬಳಿ ರಾಜಸ್ವ ನಿರೀಕ್ಷಕ ಮಂಜುನಾಥ್, ಆಲೇನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಪರಮೇಶ್, ಕೆ.ಆರ್.ಪೇಟೆ ಉಪ ನೋಂದಣಾಧಿಕಾರಿ ನರಸಿಂಹಯ್ಯ, ಆಲೇನಹಳ್ಳಿ ನಿವಾಸಿಗಳಾದ ಪ್ರಭಾಕರ್, ನಂಜಯ್ಯ, ಪುಟ್ಟಮ್ಮ, ಗಂಗಾಧರ್, ಸುರೇಶ್, ಸಾಕ್ಷಿಬೀಡು ಗ್ರಾಮದ ದಾಸ್ತಾವೇಜು ಬರಹಗಾರ ನಂಜೇಗೌಡ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ 180(ಯು/ಎಸ್ 465, 419, 420)ರಡಿ ಕೆ.ಆರ್.ಪೇಟೆ ಠಾನೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ’’ ಎಂದು ತಿಳಿಸಿದರು.

‘‘ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಪರಮೇಶ್ ಅವರನ್ನು ಕೂಡಲೇ ಅಮಾನತುಪಡಿಸಬೇಕು. ಕೆ.ಆರ್.ಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಇಂತಹ ಸಾಕಷ್ಟು ಪ್ರಕರಣಗಳು ನಡೆದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರ ಅಂತಹ ಪ್ರಕರಣಗಳ ಪತ್ತೆಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು’’ ಆಗ್ರಹಿಸಿದರು. ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್‌ಕುಮಾರ್, ದಲಿತ ಮುಖಂಡರಾದ ಹೊಸಹೊಳಲು ದೇವರಾಜ್, ಕೆ.ಆರ್.ಪೇಟೆ ಶ್ರೀಕಂಠಯ್ಯ, ದೂರದಾರ ಕುಮಾರ್, ವೈರಮುಡಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ