ಆ್ಯಪ್ನಗರ

ಚರಂಡಿಯಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ

ನಗರದ ಬೋವಿ ಕಾಲನಿಯ ಸೇತುವೆ ಬಳಿಯ ಚರಂಡಿಯಲ್ಲಿ ಶನಿವಾರ ನವಜಾತ ಗಂಡು ಶಿಶುವಿನ ಕಳೇಬರ ಪತ್ತೆಯಾಗಿದೆ.

Vijaya Karnataka 14 Jul 2019, 5:00 am
ಮಂಡ್ಯ: ನಗರದ ಬೋವಿ ಕಾಲನಿಯ ಸೇತುವೆ ಬಳಿಯ ಚರಂಡಿಯಲ್ಲಿ ಶನಿವಾರ ನವಜಾತ ಗಂಡು ಶಿಶುವಿನ ಕಳೇಬರ ಪತ್ತೆಯಾಗಿದೆ.
Vijaya Karnataka Web detection of newborns in the sewer
ಚರಂಡಿಯಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ


ಶುಕ್ರವಾರ ರಾತ್ರಿ ಮಗುವಿನ ಕಳೇಬರವನ್ನು ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಮಗುವಿನ ದೇಹವು ಚರಂಡಿ ಹೂತು ಹೋಗಿತ್ತು. ಶನಿವಾರ ಮಧ್ಯಾಹ್ನ ಇದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವಿನ ದೇಹವನ್ನು ಚರಂಡಿಯಿಂದ ಮೇಲೆತ್ತಿ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಿದ್ದಾರೆ. ಪೋಷಕರು ಮಗುವನ್ನು ಏಕೆ ಚರಂಡಿಗೆ ಎಸೆದು ಹೋಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಮಗು ಜೀವಂತವಾಗಿದ್ದಾಗಲೇ ಚರಂಡಿಗೆ ಎಸೆಯಲಾಗಿದೆಯೋ ಅಥವಾ ಸತ್ತ ಮಗುವಿನ ಕಳೆಬರವನ್ನು ಎಸೆಯಲಾಗಿದೆಯೋ ಎಂಬುದು ಸ್ಪಷ್ಟವಾಗಿಲ್ಲ. ಮಂಡ್ಯ ಪೂರ್ವ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ