ಆ್ಯಪ್ನಗರ

ದೇವೇಗೌಡರ ದುರಾಸೆ, ಸಿದ್ದರಾಮಯ್ಯ ದೊಂಬರಾಟಕ್ಕೆ ದೋಸ್ತಿ ಸರಕಾರ ಪತನ: ಕೆಆರ್‌ ಪೇಟೆ ಕೃಷ್ಣ

ಕರ್ನಾಟಕದಲ್ಲಿ ನಡೆದ ರಾಜಕೀಯ ಕ್ಷಿಪ್ರಕ್ರಾಂತಿಯಿಂದಾಗಿ ದೋಸ್ತಿ ಸರಕಾರ ಪತನಗೊಂಡಿದೆ. ಇದು ಪತನಗೊಳ್ಳಲು ಎಚ್‌ಡಿ ದೇವೇಗೌಡ, ಸಿದ್ದರಾಮಯ್ಯ ಕಾರಣ ಎಂದು ಮಾಜಿ ಸ್ಪೀಕರ್‌ ಆರೋಪಿಸಿದ್ದಾರೆ.

Vijaya Karnataka Web 28 Jul 2019, 5:49 pm
ಮಂಡ್ಯ: 14 ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ ತೀರ್ಮಾನ ಸರಿಯಾಗಿದೆ ಎಂದು ಮಾಜಿ ಸ್ಪೀಕರ್ ಕೆ.ಆರ್‌. ಪೇಟೆ ಕೃಷ್ಣ ತಿಳಿಸಿದ್ದಾರೆ.
Vijaya Karnataka Web ಕೆಆರ್‌ ಪೇಟೆ ಕೃಷ್ಣ
ಕೆಆರ್‌ ಪೇಟೆ ಕೃಷ್ಣ


ಕೆ.ಆರ್.ಪೇಟೆಯಲ್ಲಿ ಮಾಜಿ ಸ್ಪೀಕರ್ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಪೀಕರ್ ರಮೇಶ್ ಕುಮಾರ್ ತೀರ್ಮಾನ ಸರಿ ಇದೆ. ಅತೃಪ್ತರ ವಿರುದ್ದ ಸಲ್ಲಿಕೆಯಾದ ದಾಖಲೆ ಪರಿಶೀಲಿಸಿಯೇ ತೀರ್ಪು ಕೊಟ್ಟಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಪಕ್ಷದ ನಾಯಕರು ಸ್ಪೀಕರ್ ಗೆ ಅಗತ್ಯ ದಾಖಲೆಗಳನ್ನ ಒದಗಿಸಿದ್ದಾರೆ. ತೀರ್ಪು ಪ್ರಶ್ನಿಸಿ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು ಎಂದರು.

ಸಿಕ್ಕಿರುವ ಅಧಿಕಾರ ಉಳಿಸಿಕೊಳ್ಳುವ ಯೋಗ್ಯತೆ ಜೆಡಿಎಸ್- ಕಾಂಗ್ರೆಸ್ ಗೆ ಇಲ್ಲ. ಇಬ್ಬರ ಆಂತರಿಕ ಕಲಹದಿಂದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಜಕೀಯ ದೊಂಬರಾಟಕ್ಕೆ ಸಿದ್ದರಾಮಯ್ಯ ಕಾರಣ ಎಂದು ಕೆ.ಆರ್‌. ಪೇಟೆ ಕೃಷ್ಣ ಆರೋಪಿಸಿದರು.

ಅವರ ಬೆಂಬಲಿಗರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರೋದು, ಜೆಡಿಎಸ್- ಕಾಂಗ್ರೆಸ್ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೊಂಡಿದ್ರೆ ಸಮಸ್ಯೆ ಇರ್ತಿರ್ಲಿಲ್ಲ. ಎಚ್‌ಡಿ ದೇವೇಗೌಡರ ಐದು ವರ್ಷದ ಅಧಿಕಾರದ ಆಸೆಗೆ ಮೈತ್ರಿ ಕುಸಿದು ಬಿದ್ದಿದೆ ಎಂದರು.

ದೇವೇಗೌಡರಿಗೆ ದುರಾಸೆ ಜಾಸ್ತಿ. ಅಧಿಕಾರ ಹಂಚಿಕೆ ಆಗಿದ್ರೆ ಕಾಂಗ್ರೆಸ್ ನವ್ರು ನಾಯಿ ಥರ ಅಧಿಕಾರಕ್ಕಾಗಿ ಕಾಯ್ತಿರೋರು. ರೇವಣ್ಣ ಉಪಮುಖ್ಯಮಂತ್ರಿ ಆಗುವ ಆಸೆ ಸಹ ಈಡೇರುತ್ತಿತ್ತು ಎಂದು ಕೆ.ಆರ್.ಪೇಟೆ ಕೃಷ್ಣ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ