ಆ್ಯಪ್ನಗರ

ಜಕ್ಕನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿ ಶೀಘ್ರ

ಜಕ್ಕನಹಳ್ಳಿಯಲ್ಲಿ ಹೇಮಾವತಿ ವಸತಿಗೃಹಗಳಿದ್ದ 5.60 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಚೌಕಿ, ಸಂತೆ ನಿರ್ಮಾಣಕ್ಕೆ ಸರಕಾರ ಅನುಮೋದನೆ ಸೂಚಿಸಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.

Vijaya Karnataka 13 Sep 2017, 5:15 am
ಮೇಲುಕೋಟೆ: ಜಕ್ಕನಹಳ್ಳಿಯಲ್ಲಿ ಹೇಮಾವತಿ ವಸತಿಗೃಹಗಳಿದ್ದ 5.60 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಚೌಕಿ, ಸಂತೆ ನಿರ್ಮಾಣಕ್ಕೆ ಸರಕಾರ ಅನುಮೋದನೆ ಸೂಚಿಸಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.
Vijaya Karnataka Web development work in jakkanahalli is rapid
ಜಕ್ಕನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿ ಶೀಘ್ರ


ಜಕ್ಕನಹಳ್ಳಿಯಲ್ಲಿನಾನಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಕ್ಕನಹಳ್ಳಿಯ ಹೇಮಾವತಿ ವಸತಿಗೃಹಗಳಿದ್ದ ಸ್ಥಳ ಕೊಡುಗೆ ಜಮೀನಾಗಿತ್ತು, ನೀರಾವರಿ ಇಲಾಖೆ ಈ ಸ್ಥಳದಲ್ಲಿ ಕಚೇರಿ ಮತ್ತು ವಸತಿಗೃಹಗಳು ಇಲಾಖೆ ಉಪ ಯೋಗದಲ್ಲಿರದಿದ್ದರೂ ಇತರ ಕಾರ್ಯಕ್ಕೆ ಬಳಕೆ ಮಾಡಲು ಸರಕಾರದ ಆದೇಶದ ತೊಡಕು ಎದುರಾಗಿತ್ತು.

ಈ ಕಾರಣ ನಾನು ಸಲ್ಲಿಸಿದ ಪ್ರಸ್ತಾವನೆ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡು ಬಸ್ ನಿಲ್ದಾಣ ನಿರ್ಮಾಣಕ್ಕೆ ಕೆ.ಎಸ್ ಆರ್.ಟಿ.ಸಿ, ಪ್ರಾಥಮಿಕ ಆರೋಗ್ಯಕೇಂದ್ರದ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಹೊರಠಾಣೆ ನಿರ್ಮಿಸಲು ಪೊಲೀಸ್ ಇಲಾಖೆಗೆ ಸ್ಥಳ ಮಂಜೂರಾಗಿದ್ದು, ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸಿ ಆದಷ್ಟು ಶೀಘ್ರ ಕಾಮಗಾರಿ ಮುಕ್ತಾಯಮಾಡಿ ನಾಗರೀಕರ ಬಳಕೆ ನೀಡಲಾಗುತ್ತದೆ. ಈ ಹಿಂದೆ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇತ್ತಾದರೂ ಒಪ್ಪಂದದಂತೆ ನಿವೇಶನ ನೀಡದ್ದರಿಂದ ರದ್ದಾಗಿತ್ತು. ಇದನ್ನು ಮತ್ತೆ ಮಂಜೂರು ಮಾಡಿಸಲಾಗಿದೆ ಎಂದರು.

ಜಕ್ಕನಹಳ್ಳಿಯಲ್ಲಿ ನಡೆಯುವ ಸಂತೆ ಪ್ರಖ್ಯಾತವಾಗಿದ್ದು, ಹೇಮಾವತಿ ವಸತಿಗಹಗಳ ಸ್ಥಳದಲ್ಲಿ ನಡೆಯುತ್ತಿದ್ದ ಸಂತೆ ನಡೆಯಲು ದೇವರಾಜ ಮಾರುಕಟ್ಟೆಯಂತೆ ವ್ಯವಸ್ಥೆಮಾಡಿ ಗ್ರಾಹಕರು ಮತ್ತು ಮಾರಾಟಗಾರರಿಗೆ ಅನುಕೂಲ ಕಲ್ಪಿಸಲಾಗುತ್ತದೆ. ಮೇಲುಕೋಟೆ ಹೇಮಾವತಿ ವಸತಿಜ್ಕಹಗಳನ್ನು ಭಕ್ತರ ಅನುಕೂಲಕ್ಕಾಗಿ ಯಾತ್ರಿನಿವಾಸ ಮಾಡಲು ಮುಜರಾಯಿ ಇಲಾಖೆಗೆ ನೀಡಲು ಸರಕಾರಕ್ಕೆ ಮನವಿ ಮಾಡಿದ್ದೇನೆ, ಈ ಕಾರ್ಯವೂ ಶೀಘ್ರ ನಡೆಯಲಿದೆ ಎಂದರು.

ಸೋಮವಾರ ಸಭೆ: ಹೇಮಾವತಿ ವಸತಿಗೃಹ ಸ್ಥಳವನ್ನು ಇಲಾಖೆಗೆಗಳಿಗೆ ನೀಡಿ ಸರಕಾರದ ಆದೇಶದಂತೆ ಕಾಮಗಾರಿ ಆರಂಭಿಸುವ ಸಂಬಂಧ ಸೆ.18ರ ಸೋಮವಾರ ಬೆಳಗ್ಗೆ 10.30ಕ್ಕೆ ರೈತ ಸಂಪರ್ಕ ಕೇಂದ್ರದ ಬಳಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ನಾಗರೀಕರು ಸಹ ಭಾಗವಹಿಸಿ ಸಲಹೆ ನೀಡಬಹುದು ಎಂದರು.

ಪಾಂಡವಪುರ ತಹಸೀಲ್ದಾರ್ ಹನುಮಂತರಾಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಆಶಾಲತಾ, ಮೇಲುಕೋಟೆ ದೇವಾಲಯದ ಸ್ಥಾನೀಕ ಶ್ರೀನಿವಾಸ ನರಸಿಂಹನ್ ಗುರೂಜಿ,ರೈತ ಮುಖಂಡರಾದ ಹೊಸಕೋಟೆ ವಿಜಯಕುಮಾರ್, ಅಮತಿ ರಾಜಶೇಖರ್, ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಶಂಕರ್ ಕೆ.ಟಿ ಗೋವಿಂದೇಗೌಡ ಮತ್ತಿತರರ ಗಣ್ಯರು ಭಾಗವಹಿಸಿದ್ದರು.

ಕುಡಿಯುವ ನೀರಿನ ಯೋಜನೆ 128 ಕೋಟಿ : ಮೇಲುಕೋಟೆ: ಜಕ್ಕನಹಳ್ಳಿ ಮತ್ತು ಸುತ್ತಮುತ್ತಲ 40 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 128 ಕೋಟಿ ರೂ ಮಂಜೂರಾಗಿದೆ. ಕೆ.ಆರ್.ಎಸ್.ನಿಂದ ನೇರವಾಗಿ ಮಾಣಿಕ್ಯನಹಳ್ಳಿ, ಸುಂಕಾತಣ್ಣೂರು, ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು ಸರಭರಾಜುಮಾಡಲಾಗುತ್ತದೆ. ಮೇಲುಕೋಟೆ ಬಹುಗ್ರಾಮದ ಕುಡಿಯುವ ನೀರಿನ ಯೋಜನೆಯಿದ್ದರೂ ಮೇಲುಕೋಟೆಗೆ ಸಮರ್ಪಕ ನೀರು ಪೂರೈಕೆಯಾಗದೆ ತೊಂದರೆಯಾಗುತ್ತಿದ್ದು ಅದಕ್ಕೆ ಬದಲಿ ಪೂರಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.

ರೈತ ರ‌್ಯಾಲಿಯಲ್ಲಿ ಭಾಗವಹಿಸಿ: ಮೇಲುಕೋಟೆ : ದೇಶವ್ಯಾಪಿ ರೈತಮುಕ್ತಿ ಜಾಥಾದ ಭಾಗವಾಗಿ ಪಾಂಡವಪುರದಲ್ಲಿ ಸೆ.22ರಂದು ನಡೆಯುವ ರೈತ ರ‌್ಯಾಲಿ ಮತ್ತು ಸಮಾವೇಶಕ್ಕೆ ಮೇಲುಕೋಟೆ ಹೋಬಳಿ ಹಾಗೂ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಂದ ಹೆಚ್ಚಿನ ರೈತರು ಆಗಮಿಸಬೇಕು ಎಂದು ಪುಟ್ಟಣ್ಣಯ್ಯ ಮನವಿ ಮಾಡಿದರು.

ಪಟ್ಟಣದಲ್ಲಿ ನಡೆದ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ಸರಕಾರಗಳು ಬದಲಾದರೂ, ಯೋಜನೆಗಳು ಜಾರಿಯಲ್ಲಿದ್ದರೂ ರೈತರ ಬದುಕು ಹಸನಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ರೈತರ ರಕ್ಷಣೆಗೆ ರಾಷ್ಟಿಯ ಕೃಷಿ ನೀತಿ ಜಾರಿ ತರುವ ಸಂಬಂಧ ಎರಡು ಪ್ರಮುಖ ನಿರ್ಣಯಗಳನ್ನು ಮುಂದಿಟ್ಟುಕೊಂಡು ಒತ್ತಡ ತರಲು ನಾನಾ ಕಡೆ ರೈತರ ಸಮಾವೇಶ ನಡೆಸಲಾಗುತ್ತದೆ.

ಅಂತಿಮವಾಗಿ ನವೆಂಬರ್ 20 ರಂದು ಹೊಸದಿಲ್ಲಲಿಯ ರಾಮಲೀಲಾ ಮೈದಾನದಲ್ಲಿ 20 ಲಕ್ಷ ರೈತರು ಸೇರುವ ಸಮಾವೇಶದಲ್ಲಿ ರೈತ ಸಂಸತ್ ನಡೆಯಲಿದೆ. ಇದರ ಅಂಗವಾಗಿ ಪಾಂಡವಪುರದಲ್ಲಿ ನಡೆಯುವ ರೈತ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ