ಮಂಡ್ಯ: ಡಿಜಿಟಲ್ ಇಂಡಿಯಾ ಭಾಗವಾಗಿ ತಯಾರಿಸಿರುವ ಕಾಮನ್ ಸರ್ವೀಸ್ ಸೆಂಟರ್ನಿಂದ ಸಾರ್ವಜನಿಕರು ಸೇವೆಗಳನ್ನು ಸುಲಭವಾಗಿ ಪಡಯಲು ಸಾಧ್ಯವಿದೆ ಎಂದು ಅಪರ ಜಿಲ್ಲಾಧಿ
ಕಾರಿ ಬಿ.ಆರ್.ಪೂರ್ಣಿಮಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಡಿಜಿಟಲ್ ಇಂಡಿಯಾ ಅಭಿಯಾನದಡಿ ‘ದೊರಕಿದೆ ನನ್ನ ಪ್ರಗತಿಗೆ ವೇಗ’ ಶಿರ್ಷಿಕೆಯಡಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನು ಮುಂದೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಾಮನ್ ಸರ್ವಿಸ್ ಸೆಂಟ್ರ್ (ಸಿಎಚ್ಸಿ) ಡಿಜಿಟಲೀಕರಣ ಪ್ರಾರಂಭವಾಗಲಿದ್ದು. ಈ ಸಂಬಂಧ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಡಿಜಿಟಲ್ ಇಂಡಿಯಾ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ನಗರ ತಾಲೂಕು, ಹೋಬಳಿ ಕೇಂದ್ರಗಳಿಗಷ್ಟೇ ಸೀಮಿತವಾಗಿದ್ದ ಡಿಜಿಟಲೀಕರಣ ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತಾರವಾಲಿದ್ದು, ಈ ಸಂಬಂಧ ಡಿಜಿಟಲ್ ಇಂಡಿಯಾ ವತಿಯಿಂದ ಜಿಲ್ಲೆಯಾದ್ಯಂತ ಬೀದಿ ನಾಟಕದ ಮೂಲಕ ಕಾಮನ್ ಸರ್ವೀಸ್ ಸೆಂಟರ್ ಬಗ್ಗೆ ಜಾಗೃತಿ ಮೂಡಿಸಲು ತಂಡವೊಂದು ನಿಮ್ಮ ಗ್ರಾಪಂಗಳಿಗೆ ಆಗಮಿಸಲಿವೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವ ಜತೆಗೆ ಈ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಪ್ರಚಾರ ವ್ಯವಸ್ಥಾಪಕಿ ಸಿ.ಎಸ್.ಶ್ವೇತಾ ಮಾತನಾಡಿ, ಡಿಜಿಟಲ್ ಇಂಡಿಯಾ ಅಭಿಯಾನದಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಆ.30 ರಿಂದ ಸೆ.20ರವರೆಗೆ (20 ದಿನಗಳ ಕಾಲ) ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಮೂಲಕ ಅರಿವು ಮೂಡಿಸಲಾಗುವುದು ಎಂದರು.
ಆಧಾರ್ ಕಾರ್ಡ್, ಸಾರ್ವಜನಿಕ ಸೇವಾ ಕೇಂದ್ರ (ಡಿಜಿಟಲ್ ಸೇವೆ) ಡಿಜಿ ಲಾಕರ್, ಈ ಆಸ್ಪತ್ರೆ, ಈ ಪೋಸ್ಟ್, ಭಾರತ್ ನೆಟ್, ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸ್ಥಳೀಯವಾಗಿಯೇ ಡಿಜಿಟಲೀಕರಣದಿಂದ ಮಾಹಿತಿ ಪಡೆಯಬಹುದು ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲೂ ‘ಕಾಮನ್ ಸರ್ವೀಸ್ ಸೆಂಟರ್’ ಡಿಜಿಟಲೀಕರಣ ಪ್ರವೇಶ ಮಾಡಲಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹೋಬಳಿ ಕೇಂದ್ರಗಳಲ್ಲಿದ್ದ ನಾಡಕಚೇರಿಗಳಲ್ಲಿ ಪಡೆಯುತ್ತಿದ್ದ ಎಲ್ಲ ಸೌಲಭ್ಯಗಳನ್ನು ನಾಗರಿಕರು ಕಾಮನ್ ಸರ್ವೀಸ್ ಸೆಂಟರ್ಗಳಲ್ಲಿಯೇ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜನಕ ಮುನಿರಾಜ್ ಮತ್ತಿತರರು ಹಾಜರಿದ್ದರು.
ಸೆಂಟರ್ನಲ್ಲಿ ಸಿಗುವ ಸೌಲಭ್ಯ: ಸರಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ. ಜನನ-ಮರಣ ನೊಂದಣಿ, ಪ್ಯಾನ್ ಕಾರ್ಡ್, ಮೃತ್ಯು ನೋಂದೀಕರಣ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಭೂಮಿ ದಸ್ತಾವೇಜು, ವೋಟರ್ ಕಾರ್ಡ್, ಪರೀಕ್ಷೆಯ ಪರಿಣಾಮ, ಮನರೇಗಾ ಸಂದಾಯ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರೆ ಸೇವೆಗಳಾದ ನೀರಿನ ಬಿಲ್ನ ಸಂದಾಯ, ಟೆಲಿಫೋನ್ ಬಿಲ್ನ ಸಂದಾಯ, ಕಾಮನ್ ಸರ್ವಿಸ್ ಸೆಂಟರ್ ಆಫ್ ಬಳಸಿ ಸಾರ್ವಜನಿಕರು ತಾವು ಇರುವ ಸ್ಥಳದಿಂದಲೇ ವಿದ್ಯುತ್ ಬಿಲ್ ಸಹ ಸಂದಾಯ ಹಾಗೂ ರೈಲ್ವೆ ಟಿಕೆಟ್ಗಳ ಸೌಲಭ್ಯದ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ.
ಕಾರಿ ಬಿ.ಆರ್.ಪೂರ್ಣಿಮಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಡಿಜಿಟಲ್ ಇಂಡಿಯಾ ಅಭಿಯಾನದಡಿ ‘ದೊರಕಿದೆ ನನ್ನ ಪ್ರಗತಿಗೆ ವೇಗ’ ಶಿರ್ಷಿಕೆಯಡಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನು ಮುಂದೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕಾಮನ್ ಸರ್ವಿಸ್ ಸೆಂಟ್ರ್ (ಸಿಎಚ್ಸಿ) ಡಿಜಿಟಲೀಕರಣ ಪ್ರಾರಂಭವಾಗಲಿದ್ದು. ಈ ಸಂಬಂಧ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಡಿಜಿಟಲ್ ಇಂಡಿಯಾ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ನಗರ ತಾಲೂಕು, ಹೋಬಳಿ ಕೇಂದ್ರಗಳಿಗಷ್ಟೇ ಸೀಮಿತವಾಗಿದ್ದ ಡಿಜಿಟಲೀಕರಣ ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೂ ವಿಸ್ತಾರವಾಲಿದ್ದು, ಈ ಸಂಬಂಧ ಡಿಜಿಟಲ್ ಇಂಡಿಯಾ ವತಿಯಿಂದ ಜಿಲ್ಲೆಯಾದ್ಯಂತ ಬೀದಿ ನಾಟಕದ ಮೂಲಕ ಕಾಮನ್ ಸರ್ವೀಸ್ ಸೆಂಟರ್ ಬಗ್ಗೆ ಜಾಗೃತಿ ಮೂಡಿಸಲು ತಂಡವೊಂದು ನಿಮ್ಮ ಗ್ರಾಪಂಗಳಿಗೆ ಆಗಮಿಸಲಿವೆ. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವ ಜತೆಗೆ ಈ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಪ್ರಚಾರ ವ್ಯವಸ್ಥಾಪಕಿ ಸಿ.ಎಸ್.ಶ್ವೇತಾ ಮಾತನಾಡಿ, ಡಿಜಿಟಲ್ ಇಂಡಿಯಾ ಅಭಿಯಾನದಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಆ.30 ರಿಂದ ಸೆ.20ರವರೆಗೆ (20 ದಿನಗಳ ಕಾಲ) ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಮೂಲಕ ಅರಿವು ಮೂಡಿಸಲಾಗುವುದು ಎಂದರು.
ಆಧಾರ್ ಕಾರ್ಡ್, ಸಾರ್ವಜನಿಕ ಸೇವಾ ಕೇಂದ್ರ (ಡಿಜಿಟಲ್ ಸೇವೆ) ಡಿಜಿ ಲಾಕರ್, ಈ ಆಸ್ಪತ್ರೆ, ಈ ಪೋಸ್ಟ್, ಭಾರತ್ ನೆಟ್, ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸ್ಥಳೀಯವಾಗಿಯೇ ಡಿಜಿಟಲೀಕರಣದಿಂದ ಮಾಹಿತಿ ಪಡೆಯಬಹುದು ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲೂ ‘ಕಾಮನ್ ಸರ್ವೀಸ್ ಸೆಂಟರ್’ ಡಿಜಿಟಲೀಕರಣ ಪ್ರವೇಶ ಮಾಡಲಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹೋಬಳಿ ಕೇಂದ್ರಗಳಲ್ಲಿದ್ದ ನಾಡಕಚೇರಿಗಳಲ್ಲಿ ಪಡೆಯುತ್ತಿದ್ದ ಎಲ್ಲ ಸೌಲಭ್ಯಗಳನ್ನು ನಾಗರಿಕರು ಕಾಮನ್ ಸರ್ವೀಸ್ ಸೆಂಟರ್ಗಳಲ್ಲಿಯೇ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜನಕ ಮುನಿರಾಜ್ ಮತ್ತಿತರರು ಹಾಜರಿದ್ದರು.
ಸೆಂಟರ್ನಲ್ಲಿ ಸಿಗುವ ಸೌಲಭ್ಯ: ಸರಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ. ಜನನ-ಮರಣ ನೊಂದಣಿ, ಪ್ಯಾನ್ ಕಾರ್ಡ್, ಮೃತ್ಯು ನೋಂದೀಕರಣ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಭೂಮಿ ದಸ್ತಾವೇಜು, ವೋಟರ್ ಕಾರ್ಡ್, ಪರೀಕ್ಷೆಯ ಪರಿಣಾಮ, ಮನರೇಗಾ ಸಂದಾಯ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರೆ ಸೇವೆಗಳಾದ ನೀರಿನ ಬಿಲ್ನ ಸಂದಾಯ, ಟೆಲಿಫೋನ್ ಬಿಲ್ನ ಸಂದಾಯ, ಕಾಮನ್ ಸರ್ವಿಸ್ ಸೆಂಟರ್ ಆಫ್ ಬಳಸಿ ಸಾರ್ವಜನಿಕರು ತಾವು ಇರುವ ಸ್ಥಳದಿಂದಲೇ ವಿದ್ಯುತ್ ಬಿಲ್ ಸಹ ಸಂದಾಯ ಹಾಗೂ ರೈಲ್ವೆ ಟಿಕೆಟ್ಗಳ ಸೌಲಭ್ಯದ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ.