ಪಾಂಡವಪುರ : ರೈತರ ಬಗ್ಗೆ ಸ್ವಲ್ಪವೂ ಕಾಳಜಿಯೇ ಇಲ್ಲದ ಕೇಂದ್ರದ ಆಳುವ ಸರಕಾರ ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಟಾದ ಬಳಿಕ ರೈತರ ಸಮಸ್ಯೆಗಳನ್ನು ವಿಷಯವಾಗಿಟ್ಟುಕೊಂಡು ಚುನಾವಣೆಗೆ ಮುಂದಾಗುತ್ತಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷ ದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಯೋಗೇಂದ್ರ ಯಾದವ್ ಟೀಕಿಸಿದರು.
ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆ, ಕೆ.ಎಸ್. ಪುಟ್ಟಣ್ಣಯ್ಯನವರ ಅಭಿಮಾನಿ ಬಳಗದ ವತಿಯಿಂದ ಹಸಿರು ನಕ್ಷ ತ್ರ ದಿ. ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ಥಳಿ ಅನಾವರಣ ಹಾಗೂ ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
''ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ದೇಶದ ರೈತರ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಬಿಜೆಪಿ ಸರಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ದೇಶದ ರೈತರನ್ನು ನಿರ್ಲಕ್ಷಿಸಿತ್ತು. ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಡ ಬಳಿಕ ತಮ್ಮ ರಾಜಕೀಯ ಹಿತಕ್ಕಾಗಿ ಇದೀಗ ರೈತರ ಸಮಸ್ಯೆಗಳ ಬಗ್ಗೆ ಬಿಜೆಪಿ ಮುಖಂಡರು ಟಿವಿ ಮಾಧ್ಯಮಗಳಲ್ಲಿ ಕುಳಿತು ಮಾತನಾಡುತ್ತಿದ್ದಾರೆ,''ಎಂದು ಕಿಡಿಕಾರಿದರು.
''ರಾಜಕಾರಣದ ಚರಿತ್ರೆಯ ಇತಿಹಾಸದಲ್ಲಿ ಚುನಾವಣೆಯ ಸಂದರ್ಭದಲ್ಲಿ ಹಿಂದಿನ ಸರಕಾರದ ಭ್ರಷ್ಟಾಚಾರ, ಹಗರಣಗಳನ್ನು ಚರ್ಚ ವಿಷಯವಾಗಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದ ರಾಷ್ಟ್ರೀಯ ಪಕ್ಷ ಗಳು ಅಧಿಕಾರದ ಆಸೆಗಾಗಿ ರೈತರ ಸಾಲಮನ್ನಾ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವು ಮೂಲಕ ಜನತೆಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ,''ಆಕ್ರೋಶ ವ್ಯಕ್ತಪಡಿಸಿದರು.
''ದಿ. ಕೆ.ಎಸ್. ಪುಟ್ಟಣ್ಣಯ್ಯನವರು ಸದಾ ರೈತರ ಪರ ಧ್ವನಿಯಾಗಿ ಕೆಲಸ ಮಾಡುತ್ತ ಹೋರಾಟ ಮಾಡಿದ ಧೀಮಂತ ನಾಯಕ. ಅವರು ರಾಜಕೀಯದಲ್ಲಿದ್ದ ಅಷ್ಟೂ ದಿನದಲ್ಲಿ ಎಂದಿಗೂ ತನ್ನ ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಎಂದಿಗೂ ಮತ್ತೊಂದು ಪಕ್ಷ ಕ್ಕೂ ಸಹ ಹೋಗಲಿಲ್ಲ. ಸಾಯುವವರೆಗೂ ರೈತರ ಪರವಾಗಿಯೇ ಹೋರಾಟ ಮಾಡಿದರು,''ಎಂದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ''ರಾಜ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಳೆದ 30 ವರ್ಷಗಳಿಂದಲ್ಲೂ ಸಹ ರೈತ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ರೈತ ಸಂಘದ ನಾಯಕರು ಬೆಳೆದಿದ್ದಾರೆ. ರೈತ ಸಂಘದ ಇದೀಗ ಇರುವ ಸಂಘಟನೆಯ ಜತೆಗೆ ಮತ್ತಷ್ಟು ಬಲಿಷ್ಠವಾಗಬೇಕು,'' ಎಂದು ಹೇಳಿದರು.
''ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದೆ. 13 ಪಂಚವಾರ್ಷಿಕ ಯೋಜನೆಯನ್ನು ಮಂಡಿಸಿ ಹಣವನ್ನು ಲೂಟಿ ಮಾಡಿದ್ದಾರೆಯೇ ಹೊರತು ದೇಶ ಅಭಿವೃದ್ಧಿ ಹೊಂದಿಲ್ಲ. ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಿದ್ದಾರೆ. ಬಡವರಿಂದ ಎಲ್ಲಾ ಸಹಕಾರಗಳನ್ನು ಪಡೆಯುವ ಸರಕಾರಗಳು ಬಡವರ ಅಭಿವೃದ್ಧಿಗೆ ಅನುಕೂಲವನ್ನು ಮಾಡಿಕೊಡದೆ ನಿರ್ಲಕ್ಷ್ಯಿಸುತ್ತಿದೆ,''ಎಂದು ಸರಕಾರಗಳ ವಿರುದ್ಧ ಕಿಡಿಕಾರಿದರು.
''ರಾಜ್ಯದಲ್ಲಿ ರೈತ ಸಂಘಗಳು ಮತ್ತಷ್ಟು ಬಲಿಷ್ಠಗೊಂಡು ರೈತರ ಅಭಿವೃದ್ಧಿಗೆ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳಬೇಕಿದೆ. ವಸತಿ, ನಿವೇಶನ ಇಲ್ಲದವರಿಗೆ ವಸತಿ, ನಿವೇಶನ ಕೊಡಿಸಬೇಕು. ಭೂಮಿ ಇಲ್ಲದವರಿಗೆ ಭೂಮಿ ಕೊಡಿಸುವ ಹೋರಾಟ ಹಮ್ಮಿಕೊಳ್ಳಬೇಕಿದೆ. ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ಸಂದರ್ಭದಲ್ಲಿ ನಾವೆಲ್ಲರು ಸೇರಿ ಸಿಎಂ ಸಿದ್ದರಾಮಯ್ಯನವರಿಗೆ ರೈತರ ಸಮಸ್ಯೆಗಳ ಕುರಿತು ಹಲವು ಎಚ್ಚರಿಕೆ ನೀಡಿದ್ದೆವು. ಅದಾದ ಬಳಿಕ ಸಿದ್ದರಾಮಯ್ಯನವರು ವಸತಿ, ನಿವೇಶನ ರಹಿತರಿಗೆ ಹಾಗೂ ಭೂಮಿ ಇಲ್ಲದರಿಗೆ ಭೂಮಿ ಕೊಡಿಸುವ ಸಂಬಂಧ ಸರಕಾರಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸರಕಾರಿ ಕೆಲಸ ಕಾರ್ಯಗಳು ಆಮೆಗತಿಯಲ್ಲಿ ಸಾಗುವುದರಿಂದ ಅದು ಸರಕಾರದ ಹಂತದಲ್ಲಿಯೇ ಇದೆ,''ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ''ಇತ್ತೀಚೆಗೆ ಕೆಲವು ಮಾಧ್ಯಮಗಳು ದರ್ಶನ್ ಪುಟ್ಟಣ್ಣಯ್ಯ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬುದಾಗಿ ಹಲವು ವದಂತಿ ಸುದ್ದಿಗಳನ್ನು ಹಬ್ಬಿಸಿದ್ದವು. ಇದೆಲ್ಲ ಸುಳ್ಳು. ನಾನು ಯಾವುದೇ ಪಕ್ಷ ಕ್ಕೂ ಹೋಗುವುದಿಲ್ಲ. ನನ್ನ ತಂದೆ ನಡೆದು ಬಂದ ದಾರಿಯಲ್ಲಿಯೇ ಸಾಗುತ್ತೇನೆ. ನಾನು ಶಾಸಕನಾಗದಿದ್ದರೂ ಪರವಾಗಿಲ್ಲ, ಕೊನೆಯವರೆಗೂ ರೈತಸಂಘದಲ್ಲಿಯೇ ಇರುತ್ತೇನೆ,''ಎಂದು ತಿಳಿಸಿದರು.
''ದರ್ಶನ್ ಪುಟ್ಟಣ್ಣಯ್ಯ ಮತ್ತೆ ಅಮೆರಿಕಕ್ಕೆ ಹೋಗುತ್ತಾರೆ, ಅವರು ಬರೋದಿಲ್ಲ ಎಂಬುದಾಗಿ ವದಂತಿ ಹಬ್ಬಿಸುತ್ತಿದ್ದಾರೆ. ನಾನು ಬರುತ್ತೇನೆ, ನನಗೆ ವೈಯುಕ್ತಿಕ ಸಮಸ್ಯೆಗಳು ಇರುವುದರಿಂದ ಅವುಗಳನ್ನು ಸರಿಪಡಿಸಿ ಚಳವಳಿಗೆ ಬರುತ್ತೇನೆ. ಅದಕ್ಕಾಗಿ ನನಗೆ ಸ್ವಲ್ಪ ಕಾಲಾವಕಾಶ ನೀಡಿ,''ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯನವರ ಸಮಾಧಿಗೆ ಪೂಜೆಸಲ್ಲಿಸಿ ಪುಷ್ಪಾರ್ಚನೆ ಮಾಡಿ ಬಳಿಕ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿನ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ಥಳಿಯನ್ನು ಪ್ರೊ.ಯೋಗೇಂದ್ರ ಯಾದವ್, ಎಚ್.ಎಸ್.ದೊರೆಸ್ವಾಮಿ, ದೇವನೂರು ಮಹದೇವ, ದರ್ಶನ್ಪುಟ್ಟಣ್ಣಯ್ಯ ಸೇರಿದಂತೆ ಹಲವರು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು 30 ಮಂದಿಗೆ ಪುಟ್ಟಣ್ಣಯ್ಯ ಹೆಸರಿನ ಕಾಯಕ ಶ್ರೀ ಪ್ರಶಸ್ತಿ ವಿತರಣೆ ಮಾಡಲಾಯಿತು.
ಹಿರಿಯ ರೈತ ಮುಖಂಡ ವೈ.ಜಿ.ಬಾಲಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಸಾಹಿತಿ ದೇವನೂರು ಮಹದೇವ, ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧÜರ್, ಸ್ವರಾಜ್ ಇಂಡಿಯಾ ಪಕ್ಷ ದ ರಾಜ್ಯಾಧ್ಯಕ್ಷ ಚಾಮರಸಮಾಲೀಪಾಟಿಲ್, ಸುನೀತಾ ಪುಟ್ಟಣ್ಣಯ್ಯ, ಪುತ್ರಿಯರಾದ ಸ್ಮಿತಾ, ಅಕ್ಷ ತಾ, ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ, ರೈತ ಮುಖಂಡರಾದ ನಂದಿನಿ ಜಯರಾಮ್, ಕೆಂಪೂಗೌಡ, ಪುರುಷೋತ್ತಮ್, ವೈ.ಪಿ.ಮಂಜುನಾಥ್, ರಘು ಸೇರಿದಂತೆ ಹಲವರು ಹಾಜರಿದ್ದರು.
ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆ, ಕೆ.ಎಸ್. ಪುಟ್ಟಣ್ಣಯ್ಯನವರ ಅಭಿಮಾನಿ ಬಳಗದ ವತಿಯಿಂದ ಹಸಿರು ನಕ್ಷ ತ್ರ ದಿ. ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ಥಳಿ ಅನಾವರಣ ಹಾಗೂ ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
''ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ದೇಶದ ರೈತರ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಬಿಜೆಪಿ ಸರಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ದೇಶದ ರೈತರನ್ನು ನಿರ್ಲಕ್ಷಿಸಿತ್ತು. ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಡ ಬಳಿಕ ತಮ್ಮ ರಾಜಕೀಯ ಹಿತಕ್ಕಾಗಿ ಇದೀಗ ರೈತರ ಸಮಸ್ಯೆಗಳ ಬಗ್ಗೆ ಬಿಜೆಪಿ ಮುಖಂಡರು ಟಿವಿ ಮಾಧ್ಯಮಗಳಲ್ಲಿ ಕುಳಿತು ಮಾತನಾಡುತ್ತಿದ್ದಾರೆ,''ಎಂದು ಕಿಡಿಕಾರಿದರು.
''ರಾಜಕಾರಣದ ಚರಿತ್ರೆಯ ಇತಿಹಾಸದಲ್ಲಿ ಚುನಾವಣೆಯ ಸಂದರ್ಭದಲ್ಲಿ ಹಿಂದಿನ ಸರಕಾರದ ಭ್ರಷ್ಟಾಚಾರ, ಹಗರಣಗಳನ್ನು ಚರ್ಚ ವಿಷಯವಾಗಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದ ರಾಷ್ಟ್ರೀಯ ಪಕ್ಷ ಗಳು ಅಧಿಕಾರದ ಆಸೆಗಾಗಿ ರೈತರ ಸಾಲಮನ್ನಾ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವು ಮೂಲಕ ಜನತೆಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ,''ಆಕ್ರೋಶ ವ್ಯಕ್ತಪಡಿಸಿದರು.
''ದಿ. ಕೆ.ಎಸ್. ಪುಟ್ಟಣ್ಣಯ್ಯನವರು ಸದಾ ರೈತರ ಪರ ಧ್ವನಿಯಾಗಿ ಕೆಲಸ ಮಾಡುತ್ತ ಹೋರಾಟ ಮಾಡಿದ ಧೀಮಂತ ನಾಯಕ. ಅವರು ರಾಜಕೀಯದಲ್ಲಿದ್ದ ಅಷ್ಟೂ ದಿನದಲ್ಲಿ ಎಂದಿಗೂ ತನ್ನ ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಎಂದಿಗೂ ಮತ್ತೊಂದು ಪಕ್ಷ ಕ್ಕೂ ಸಹ ಹೋಗಲಿಲ್ಲ. ಸಾಯುವವರೆಗೂ ರೈತರ ಪರವಾಗಿಯೇ ಹೋರಾಟ ಮಾಡಿದರು,''ಎಂದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ''ರಾಜ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಳೆದ 30 ವರ್ಷಗಳಿಂದಲ್ಲೂ ಸಹ ರೈತ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ರೈತ ಸಂಘದ ನಾಯಕರು ಬೆಳೆದಿದ್ದಾರೆ. ರೈತ ಸಂಘದ ಇದೀಗ ಇರುವ ಸಂಘಟನೆಯ ಜತೆಗೆ ಮತ್ತಷ್ಟು ಬಲಿಷ್ಠವಾಗಬೇಕು,'' ಎಂದು ಹೇಳಿದರು.
''ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದೆ. 13 ಪಂಚವಾರ್ಷಿಕ ಯೋಜನೆಯನ್ನು ಮಂಡಿಸಿ ಹಣವನ್ನು ಲೂಟಿ ಮಾಡಿದ್ದಾರೆಯೇ ಹೊರತು ದೇಶ ಅಭಿವೃದ್ಧಿ ಹೊಂದಿಲ್ಲ. ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಿದ್ದಾರೆ. ಬಡವರಿಂದ ಎಲ್ಲಾ ಸಹಕಾರಗಳನ್ನು ಪಡೆಯುವ ಸರಕಾರಗಳು ಬಡವರ ಅಭಿವೃದ್ಧಿಗೆ ಅನುಕೂಲವನ್ನು ಮಾಡಿಕೊಡದೆ ನಿರ್ಲಕ್ಷ್ಯಿಸುತ್ತಿದೆ,''ಎಂದು ಸರಕಾರಗಳ ವಿರುದ್ಧ ಕಿಡಿಕಾರಿದರು.
''ರಾಜ್ಯದಲ್ಲಿ ರೈತ ಸಂಘಗಳು ಮತ್ತಷ್ಟು ಬಲಿಷ್ಠಗೊಂಡು ರೈತರ ಅಭಿವೃದ್ಧಿಗೆ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳಬೇಕಿದೆ. ವಸತಿ, ನಿವೇಶನ ಇಲ್ಲದವರಿಗೆ ವಸತಿ, ನಿವೇಶನ ಕೊಡಿಸಬೇಕು. ಭೂಮಿ ಇಲ್ಲದವರಿಗೆ ಭೂಮಿ ಕೊಡಿಸುವ ಹೋರಾಟ ಹಮ್ಮಿಕೊಳ್ಳಬೇಕಿದೆ. ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ಸಂದರ್ಭದಲ್ಲಿ ನಾವೆಲ್ಲರು ಸೇರಿ ಸಿಎಂ ಸಿದ್ದರಾಮಯ್ಯನವರಿಗೆ ರೈತರ ಸಮಸ್ಯೆಗಳ ಕುರಿತು ಹಲವು ಎಚ್ಚರಿಕೆ ನೀಡಿದ್ದೆವು. ಅದಾದ ಬಳಿಕ ಸಿದ್ದರಾಮಯ್ಯನವರು ವಸತಿ, ನಿವೇಶನ ರಹಿತರಿಗೆ ಹಾಗೂ ಭೂಮಿ ಇಲ್ಲದರಿಗೆ ಭೂಮಿ ಕೊಡಿಸುವ ಸಂಬಂಧ ಸರಕಾರಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸರಕಾರಿ ಕೆಲಸ ಕಾರ್ಯಗಳು ಆಮೆಗತಿಯಲ್ಲಿ ಸಾಗುವುದರಿಂದ ಅದು ಸರಕಾರದ ಹಂತದಲ್ಲಿಯೇ ಇದೆ,''ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ''ಇತ್ತೀಚೆಗೆ ಕೆಲವು ಮಾಧ್ಯಮಗಳು ದರ್ಶನ್ ಪುಟ್ಟಣ್ಣಯ್ಯ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬುದಾಗಿ ಹಲವು ವದಂತಿ ಸುದ್ದಿಗಳನ್ನು ಹಬ್ಬಿಸಿದ್ದವು. ಇದೆಲ್ಲ ಸುಳ್ಳು. ನಾನು ಯಾವುದೇ ಪಕ್ಷ ಕ್ಕೂ ಹೋಗುವುದಿಲ್ಲ. ನನ್ನ ತಂದೆ ನಡೆದು ಬಂದ ದಾರಿಯಲ್ಲಿಯೇ ಸಾಗುತ್ತೇನೆ. ನಾನು ಶಾಸಕನಾಗದಿದ್ದರೂ ಪರವಾಗಿಲ್ಲ, ಕೊನೆಯವರೆಗೂ ರೈತಸಂಘದಲ್ಲಿಯೇ ಇರುತ್ತೇನೆ,''ಎಂದು ತಿಳಿಸಿದರು.
''ದರ್ಶನ್ ಪುಟ್ಟಣ್ಣಯ್ಯ ಮತ್ತೆ ಅಮೆರಿಕಕ್ಕೆ ಹೋಗುತ್ತಾರೆ, ಅವರು ಬರೋದಿಲ್ಲ ಎಂಬುದಾಗಿ ವದಂತಿ ಹಬ್ಬಿಸುತ್ತಿದ್ದಾರೆ. ನಾನು ಬರುತ್ತೇನೆ, ನನಗೆ ವೈಯುಕ್ತಿಕ ಸಮಸ್ಯೆಗಳು ಇರುವುದರಿಂದ ಅವುಗಳನ್ನು ಸರಿಪಡಿಸಿ ಚಳವಳಿಗೆ ಬರುತ್ತೇನೆ. ಅದಕ್ಕಾಗಿ ನನಗೆ ಸ್ವಲ್ಪ ಕಾಲಾವಕಾಶ ನೀಡಿ,''ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯನವರ ಸಮಾಧಿಗೆ ಪೂಜೆಸಲ್ಲಿಸಿ ಪುಷ್ಪಾರ್ಚನೆ ಮಾಡಿ ಬಳಿಕ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿನ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ಥಳಿಯನ್ನು ಪ್ರೊ.ಯೋಗೇಂದ್ರ ಯಾದವ್, ಎಚ್.ಎಸ್.ದೊರೆಸ್ವಾಮಿ, ದೇವನೂರು ಮಹದೇವ, ದರ್ಶನ್ಪುಟ್ಟಣ್ಣಯ್ಯ ಸೇರಿದಂತೆ ಹಲವರು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು 30 ಮಂದಿಗೆ ಪುಟ್ಟಣ್ಣಯ್ಯ ಹೆಸರಿನ ಕಾಯಕ ಶ್ರೀ ಪ್ರಶಸ್ತಿ ವಿತರಣೆ ಮಾಡಲಾಯಿತು.
ಹಿರಿಯ ರೈತ ಮುಖಂಡ ವೈ.ಜಿ.ಬಾಲಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಸಾಹಿತಿ ದೇವನೂರು ಮಹದೇವ, ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧÜರ್, ಸ್ವರಾಜ್ ಇಂಡಿಯಾ ಪಕ್ಷ ದ ರಾಜ್ಯಾಧ್ಯಕ್ಷ ಚಾಮರಸಮಾಲೀಪಾಟಿಲ್, ಸುನೀತಾ ಪುಟ್ಟಣ್ಣಯ್ಯ, ಪುತ್ರಿಯರಾದ ಸ್ಮಿತಾ, ಅಕ್ಷ ತಾ, ತಾಪಂ ಉಪಾಧ್ಯಕ್ಷೆ ಲಕ್ಷ ್ಮಮ್ಮ, ರೈತ ಮುಖಂಡರಾದ ನಂದಿನಿ ಜಯರಾಮ್, ಕೆಂಪೂಗೌಡ, ಪುರುಷೋತ್ತಮ್, ವೈ.ಪಿ.ಮಂಜುನಾಥ್, ರಘು ಸೇರಿದಂತೆ ಹಲವರು ಹಾಜರಿದ್ದರು.