ಆ್ಯಪ್ನಗರ

ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ದೂರ ಶಿಕ್ಷಣ

ಮುಕ್ತ ವಿವಿ ಕುಲಪತಿ ಡಾಎಸ್‌...

Vijaya Karnataka 23 Jul 2019, 5:00 am
ಮುಕ್ತ ವಿವಿ ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಮಾಹಿತಿ
Vijaya Karnataka Web distance education without disturbing students ksou vc
ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ದೂರ ಶಿಕ್ಷಣ

ಮಂಡ್ಯ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ(ಕೆಎಸ್‌ಒಯು) 2018-19ನೇ ಸಾಲಿನಿಂದ 2022-23ರವರೆಗೆ ಯುಜಿಸಿ ಮಾನ್ಯತೆ ನೀಡಿದ್ದು, 2017 ಓಡಿಎಲ್‌ ರೆಗ್ಯೂಲೇಷನ್ಸ್‌ ನಿಯಮಾವಳಿ ಅನ್ವಯ ದೇಶದಲ್ಲೇ 5 ವರ್ಷ ಮಾನ್ಯತೆ ಪಡೆದ ಏಕೈಕ ವಿವಿ ನಮ್ಮದಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ದೂರ ಶಿಕ್ಷಣ ಕೊಡಲು ವಿವಿ ಸಜ್ಜಾಗಿದೆ ಎಂದು ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ತಿಳಿಸಿದರು.

ರಾಜ್ಯದ ಉಳಿದೆಲ್ಲಾ ದೂರ ಶಿಕ್ಷಣ ಸಂಸ್ಥೆಗಳಿಗಿಂತ ಅತ್ಯಂತ ಕಡಿಮೆ ಶುಲ್ಕದಲ್ಲಿ ಅಗತ್ಯ ಶಿಕ್ಷಣ ನೀಡುತ್ತಾ ಬಂದಿರುವುದು ಕೆಎಸ್‌ಒಯು ಹೆಗ್ಗಳಿಕೆ. ಯುಜಿಸಿ ಮಾನ್ಯತೆಯೊಂದಿಗೆ 50 ಕೋರ್ಸ್‌ಗಳಿಗೆ ದೂರ ಶಿಕ್ಷಣ ನೀಡಲಾಗುತ್ತದೆ. ಯುಜಿಸಿ ನಿಯಮಾನುಸಾರವಾಗಿ ಪ್ರಸ್ತುತ 2017ರ ಓ.ಡಿ.ಎಲ್‌. ರೆಗ್ಯೂಲೇಷನ್ಸ್‌(ಯುಜಿಸಿ) ನಿಯಮಾವಳಿಗಳ ಅನ್ವಯ ದೂರ ಶಿಕ್ಷಣದ ಎಲ್ಲಾ ಮಾರ್ಗಸೂಚಿಗಳನ್ನು ಪೂರ್ಣಗೊಳಿಸಲು ಸಾಧ್ಯವಿರುವುದು ಕೇವಲ ಕೆಎಸ್‌ಒಯುಗೆ ಮಾತ್ರ. ನಿಯಮಾವಳಿಯಂತೆ ಕೇಂದ್ರ ಕಚೇರಿ, ಪ್ರಾದೇಶಿಕ ಕೇಂದ್ರಗಳು(19), ಅತ್ಯಾಧುನಿಕ ಲ್ಯಾಬ್‌ ವ್ಯವಸ್ಥೆ, ಪ್ರತ್ಯೇಕ ಸಿದ್ಧಪಾಠ, ಮಹಿಳಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಸಂಪರ್ಕ ಕೌಶಲ್ಯದ ಶಿಕ್ಷಣ ನೀಡುವ ವಿಭಾಗ ಲಭ್ಯವಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೀಡಿಯೋ ಕಾನ್ಫರೆನ್ಸ್‌: ತಿಂಗಳಿಗೊಮ್ಮೆ ಪ್ರಾದೇಶಿಕ ಕೇಂದ್ರಗಳಲ್ಲಿ ಮಾನ್ಯ ಕುಲಪತಿಗಳು ಪ್ರಾದೇಶಿಕ ನಿರ್ದೇಶಕರು ಹಾಗೂ ಸಂಬಂಧಿತ ವಿದ್ಯಾರ್ಥಿಗಳ ಜತೆ ವಿಡಿಯೋ ಕಾನ್‌ಫೆರೆನ್ಸ್‌ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಮನೆಗೂ ವಿವಿ ತಲುಪುವಂತೆ ಯೋಜನೆ ರೂಪಿಸಲಾಗಿದೆ. ವಿವಿಯ ಶುಲ್ಕಗಳನ್ನು ವಿದ್ಯಾರ್ಥಿ ಇರುವಲ್ಲಿಯೇ ಪಾವತಿಸಲು ಆನ್‌ಲೈನ್‌ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಬಿ.ಎ, ಬಿ.ಕಾಂ, ಎಂ.ಕಾಂ, ಬಿ.ಲಿಬ್‌, ಎಂ.ಲಿಬ್‌, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಜತೆಗೆ ಎಂ.ಬಿ.ಎ ಪ್ರವೇಶಾತಿಯೂ ಪ್ರಾರಂಭವಾಗಿದೆ. ಇದರಲ್ಲಿ ಪ್ರವೇಶ ದಾಖಲಾತಿ ಅವಧಿ ಮುಗಿದಿದ್ದರೂ ಅವರಿಗೆ ದಂಡ ಕೊಡುವುದನ್ನು ತಪ್ಪಿಸಿ ಆಯಾ ಕಾಲಮಿತಿಯೊಳಗೆ ಸಾಧ್ಯವಾದಷ್ಟು ಸಹಾಯ ಮಾಡಲು ವಿವಿ ನಿರ್ಧರಿಸಿದೆ ಎಂದರು. ಗೋಷ್ಠಿಯಲ್ಲಿ ವಿ.ವಿ.ಯ ಪ್ರಾದೇಶಿಕ ನಿರ್ದೇಶಕಿ ಡಾ.ಕೆ.ನಂದಕುಮಾರಿ ಹಾಜರಿದ್ದರು.

ಇತಿಹಾಸಲ್ಲಿ ಇದೇ ಮೊದಲ ಬಾರಿಗೆ ವಿವಿಯಲ್ಲಿ ಪ್ಲೇಸ್‌ಮೆಂಟ್‌ ವಿಭಾಗ ರಚಿಸಿ ವಿಶೇಷ ಅಧಿಕಾರಿ ನೇಮಿಸಲಾಗಿದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಎಲ್ಲಿಯೂ ಲೋಪ ಬರದಂತೆ ನೋಡಿಕೊಳ್ಳಲಾಗುವುದು.
- ಡಾ.ಎಸ್‌.ವಿದ್ಯಾಶಂಕರ್‌, ಕುಲಪತಿ, ಕೆಎಸ್‌ಒಯು, ಮೈಸೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ