ಆ್ಯಪ್ನಗರ

ಜಿಲ್ಲಾ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

ವಿದ್ಯಾರ್ಥಿ ಜೀವನಕ್ಕೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ ವಿಕ ಸುದ್ದಿಲೋಕ ಮಂಡ್ಯ ಬದುಕನ್ನು ಸರಳವಾಗಿ ರೂಪಿಸಿಕೊಳ್ಳಲು ಎನ್‌ಎಸ್‌ಎಸ್‌ ಶಿಬಿರ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ...

Vijaya Karnataka 18 Sep 2019, 5:00 am
ವಿದ್ಯಾರ್ಥಿ ಜೀವನಕ್ಕೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ
Vijaya Karnataka Web district level inter college cultural competition in mandya
ಜಿಲ್ಲಾ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

ಮಂಡ್ಯ: ಬದುಕನ್ನು ಸರಳವಾಗಿ ರೂಪಿಸಿಕೊಳ್ಳಲು ಎನ್‌ಎಸ್‌ಎಸ್‌ ಶಿಬಿರ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ಅಗತ್ಯವಿರುವ ಕಡೆ ಸ್ವಚ್ಛತೆಯಲ್ಲಿವಿದ್ಯಾರ್ಥಿಗಳು ತೊಡಗಬೇಕು. ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕು ಎಂದು ಜಿಲ್ಲಾಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.

ನಗರದ ಮಹಿಳಾ ಸರಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿಮೈಸೂರು ವಿಶ್ವದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಮಹಿಳಾ ಸರಕಾರಿ ಕಾಲೇಜು ಸ್ವಾಯತ್ತ ಮಂಡ್ಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲಾ-ಕಾಲೇಜು ಹಂತಗಳಲ್ಲಿನ ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ. ಪ್ರಸ್ತುತ ದಿನಗಳಲ್ಲಿಪ್ರತಿಭಾವಂತ ಗಾಯಕರಿಗೆ ಉತ್ತಮ ಬೇಡಿಕೆಯಿದೆ. ಜಾನಪದ, ಭಾವಗೀತೆ, ಚರ್ಚಾ ಸ್ಪರ್ಧೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿಅವಕಾಶಗಳು ಲಭ್ಯವಿವೆ. ಆ ನಿಟ್ಟಿನಲ್ಲಿವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎನ್‌ಎಸ್‌ಎಸ್‌ ಶಿಬಿರದಲ್ಲಿಸ್ವಯಂ ಸೇವಕನಾಗಿ ಸೇವೆ ಮಾಡಿದ್ದೇನೆ. ಚರಂಡಿ ಸ್ವಚ್ಛತೆ, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಾಂಪೌಡ್‌ ಕಟ್ಟುವಿಕೆ, ಸಾಮಾಜಿಕ ಅರಿವು ಕಾರ್ಯಕ್ರಮಗಳಂತಹವುದರಲ್ಲಿಭಾಗವಹಿಸಿದ್ದೇನೆ. ಇದು ಎಷ್ಟೋ ನೆಮ್ಮದಿ ತರುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳುವುದರಿಂದ ಸ್ವಯಂ ಸೇವಕನಾಗಿ ಸಮಾಜಕ್ಕೆ ಕಿಂಚಿತ್ತು ಸಹಾಯ ಮಾಡುವುದನ್ನು ಕಲಿಯಬಹುದು ಎಂದರು.

ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೂ ಹಾಗೂ ಇತರೆ ವಿದ್ಯಾರ್ಥಿಗಳಿಗೂ ಹೋಲಿಕೆ ಮಾಡಿ ನೋಡಿದರೆ ಸಾಕಷ್ಟು ವ್ಯತ್ಯಾಸವಿರುತ್ತದೆ. ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಜೀವನವನ್ನು ಅಚ್ಚಕಟ್ಟಾಗಿ ನಿರ್ವಹಣೆ ಮಾಡುತ್ತಾರೆ. ಇನ್ನುಳಿದ ವಿದ್ಯಾರ್ಥಿಗಳಲ್ಲಿಜೀವನ ನಿರ್ವಹಣೆಯಲ್ಲಿಸ್ವಲ್ಪ ಕಡಿಮೆ ವ್ಯತ್ಯಾಸ ಕಾಣಬಹುದು. ಗ್ರಾಮೀಣ ಪ್ರದೇಶಗಳಲ್ಲಿಸಮಾಜಮುಖಿಯಾಗಿ ಸೇವೆಸಲ್ಲಿಸುವ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಪಾತ್ರ ಅಪಾರವಾಗಿದೆ. ಜನರಲ್ಲಿಸಾಮಾಜಿ ಕಳಕಳಿ, ಪರಿಸರ ಜಾಗೃತಿ, ಆರೋಗ್ಯ ಮಾಹಿತಿ, ಸ್ವಚ್ಛತೆ ಕಾಪಾಡುವ ಅರಿವು ಮೂಡಿಸುವುದು ಮುಖ್ಯವಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿನಾನಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಭಾಗವಹಿಸಿದ್ದರು. ನಂತರ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದೀಶ್‌, ಪ್ರಭಾರ ಪ್ರಾಂಶುಪಾಲ ಪೊ›.ನಾರಾಯಣ, ಪ್ರಾಧ್ಯಾಪಕಿ ಪೊ›. ಶ್ರೀದೇವಿ, ಸಾಹಿತಿ ಡಾ.ಮಜ್ಜಿಗೆಪುರ ಕೆ.ಶಿವರಾಮು, ಸಂಪನ್ಮೂಲವ್ಯೆಕ್ತಿ ಡಾ.ಹೊಂಬಯ್ಯ ಹೊನ್ನಲಗೆರೆ, ಪ್ರಾಧ್ಯಾಪಕ ಪೊ›.ಶಿವಕೀರ್ತಿ, ಉಪನ್ಯಾಸಕ ಡಾ.ರವಿ, ಎನ್‌ಎಸ್‌ಎಸ್‌ ಕಾರ್ಯಾಕ್ರಮಾಧಿಕಾರಿಯಾದ ಡಾ.ಎಂ.ಕೆಂಪಮ್ಮ, ಪೊ›.ರಮೇಶ್‌, ಪೊ›.ಭಾಗ್ಯ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ